ಮಂಗಳೂರು: ರೈತ ಕಾಯ್ದೆಯನ್ನು ಕೃಷಿ ವರ್ಗದ ಜನರಿಗೆ ಮೋಸ ಮಾಡುತ್ತಿದ್ದ ಜನರು, ಮಧ್ಯವರ್ತಿಗಳು, ಕೃಷಿಕರ ಪರವಾಗಿಲ್ಲದ ಪ್ರತಿಪಕ್ಷ ಗಳು ವಿರೋಧಿಸುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈಗ ದೇಶದಲ್ಲಿ ಕೃಷಿಕರು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಸ್ವತಂತ್ರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ ಲಭ್ಯವಾಗಿದೆ. ಉತ್ತಮ ಬೆಲೆಗೆ ಮಾರುವ ಅವಕಾಶವನ್ನು ಸರ್ಕಾರ ಸೃಷ್ಟಿಸಿಕೊಟ್ಟಿದೆ. ಕನಿಷ್ಠ ಬೆಂಬಲ ಬೆಲೆ ಹಾಗೆಯೇ ಮುಂದುವರೆಯಲಿದ್ದು, ಆಹಾರ ತಯಾರಿಸುವ ಘಟಕಗಳ ಜೊತೆಗೂ ರೈತರಿಗೆ ನೇರ ವಹಿವಾಟು ನಡೆಸುವ ಅನುಕೂಲ ಕಲ್ಪಿಸಲಾಗಿದೆ ಎಂದು ಕಟೀಲ್ ತಮ್ಮ ಸರಣಿ ಟ್ವೀಟ್ಗಳ ಮೂಲಕ ತಿಳಿಸಿದ್ದಾರೆ.
ಬೆಳೆ ಖರೀದಿ ಮಾಡುವ ಬಂಡವಾಳಶಾಹಿಗಳು ರೈತರಿಗೆ ಅಗತ್ಯವಾದ ಉಪಕರಣಗಳನ್ನು ಒದಗಿಸಬೇಕು. ರೈತರಿಗೆ ಸೂಕ್ತ ತಾಂತ್ರಿಕ ಸಲಹೆಗಳನ್ನು, ಬೆಳೆ ಹಾನಿಯ ನಷ್ಟವನ್ನೂ ಬಂಡವಾಳಶಾಹಿಗಳು ರೈತರಿಗೆ ತುಂಬಿ ಕೊಡಬೇಕು. ಈ ಕಾಯ್ದೆಯಿಂದ ಎಪಿಎಂಸಿ ಹೊರತಾಗಿಯೂ ರೈತರು ವಹಿವಾಟು ನಡೆಸಬಹುದಾಗಿದೆ. ಇದರಿಂದ ರೈತರಿಗೆ ನಿಶ್ಚಿತ ಲಾಭವೂ ದೊರೆಯುವುದೆಂದು ಕಟೀಲ್ ಮಾಹಿತಿ ನೀಡಿದ್ದಾರೆ.
ಸ್ವತಂತ್ರ ಭಾರತದಲ್ಲಿ ಮೊದಲಬಾರಿಗೆ ರೈತರಿಗೆ ತಮ್ಮ ಉತ್ಪನ್ನಗಳನ್ನು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ದೇಶದ ಯಾವುದೇ ಭಾಗದಲ್ಲಿ ಉತ್ತಮ ಬೆಲೆಗೆ ಮಾರಬಹುದಾಗಿದೆ.
ಕನಿಷ್ಟ ಬೆಂಬಲ ಬೆಲೆ ಮುಂದುವರೆಯಲಿದ್ದು ರೈತರು ಆಹಾರ ತಯಾರಿಕಾ ಕೈಗಾರಿಕೆಗಳೊಂದಿಗೆ ನೇರ ಒಪ್ಪಂದ ಮಾಡಿ ತಮ್ಮ ಇಚ್ಛಿತ ಬೆಲೆಯನ್ನು ಪಡೆಯಬಹುದಾಗಿದೆ.
1/n
— Nalinkumar Kateel (@nalinkateel) September 21, 2020
ಎಪಿಎಂಸಿಯಲ್ಲದೇ ಬೇರೆ ಕಡೆ ರೈತರ ವ್ಯಾಪಾರಕ್ಕೂ ಈ ಕಾಯ್ದೆಯಿಂದ ರಕ್ಷಣೆ ಸಿಗುವುದಲ್ಲದೇ ರೈತರ ಉತ್ಪನ್ನಗಳಿಗೆ ನಿಶ್ಚಿತ ಲಾಭ ಸಿಗಲು ಕೇಂದ್ರ ಸರಕಾರ ಈ ರೈತಪರ ಕಾಯ್ದೆ ಜಾರಿಗೆ ತಂದಿದೆ.
ರೈತರಿಗೆ ಮೋಸವೆಸಗುತ್ತಿದ್ದ ಮಧ್ಯವರ್ತಿಗಳು, ಖರೀದಿದಾರರ ಪರವಾಗಿರುವ ವಿಪಕ್ಷಗಳು ಈ ರೈತಪರ ಕಾಯ್ದೆಯನ್ನು ವಿರೋಧಿಸುತ್ತವೆ.
3/3
— Nalinkumar Kateel (@nalinkateel) September 21, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.