ನವದೆಹಲಿ: ಕೃಷಿ ಮಸೂದೆಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ದೊಡ್ಡಮಟ್ಟದ ಗದ್ದಲಗಳು ಏರ್ಪಟ್ಟ ಒಂದು ದಿನದ ಬಳಿಕ, ರಾಜ್ಯಸಭಾ ಮುಖ್ಯಸ್ಥ ಎಂ. ವೆಂಕಯ್ಯ ನಾಯ್ಡು ಅವರು ಎಂಟು ಮಂದಿ ಸಂಸದರನ್ನು ಅಮಾನತು ಮಾಡಿದ್ದಾರೆ.
ಟಿಎಂಸಿ ಪಕ್ಷದ ಡೆರೆಕ್ ಒ’ಬ್ರೀನ್, ಆಮ್ ಆದ್ಮಿ ಪಕ್ಷದ ಸದಸ್ಯ ಸಂಜಯ್ ಸಿಂಗ್ ಸೇರಿದಂತೆ ಎಂಟು ಮಂದಿ ಸಂಸದರನ್ನು ಸದನದಲ್ಲಿ ತೋರಿದ ಅಶಿಸ್ತಿನ ಕಾರಣಕ್ಕಾಗಿ ಅಮಾನತುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಡೋಲಾ ಸೇನ್, ರಾಜೀವ್ ಸತವ್, ಕೆಕೆ ರಾಗೇಶ್, ಸಯ್ಯದ್ ನಾಸಿರ್ ಹುಸೇನ್, ರಿಪುನ್ ಬೋರ, ಎಲಮರಮ್ ಕರೀಂ ಅಮಾನತುಗೊಂಡ ಇತರ ಸಂಸದರಾಗಿದ್ದಾರೆ.
ರಾಜ್ಯಸಭೆಯಲ್ಲಿ ನಿನ್ನೆ ನಡೆದ ಘಟನೆಗಳನ್ನು ವೆಂಕಯ್ಯ ನಾಯ್ಡು ಅವರು ‘ರಾಜ್ಯಸಭೆಗೆ ಕರಾಳ ದಿನ’ ಎಂದು ಬಣ್ಣಿಸಿದ್ದಾರೆ. ಈ ಸಂಸದರುಗಳು ರಾಜ್ಯಸಭಾ ಉಪಾಧ್ಯಕ್ಷರ ಮೈಕನ್ನು ಕಿತ್ತುಕೊಂಡಿದ್ದಾರೆ ಮತ್ತು ಅವರಿಗೆ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ.
“ಸಂಸದರು ನಿಯಮವನ್ನು ಉಲ್ಲಂಘಿಸಿದ್ದಾರೆ. ಇದು ದುರಾದೃಷ್ಟಕರ, ಸ್ವೀಕಾರಾರ್ಹವಲ್ಲ ಮತ್ತು ಇಂತಹ ಘಟನೆಗಳು ಸಂಸತ್ತಿನ ಘನತೆಯನ್ನು ಹಾಳುಮಾಡುತ್ತದೆ. ಒಂದು ವೇಳೆ ಮಾರ್ಷಲ್ಗಳನ್ನು ಕರೆಯದೆ ಇರುತ್ತಿದ್ದರೆ ಏನಾಗುತ್ತಿತ್ತೋ ಎಂಬುದು ನನಗೆ ಈಗಲೂ ಆತಂಕವನ್ನು ಸೃಷ್ಟಿಸುತ್ತದೆ” ಇಂದು ನಾಯ್ಡು ಹೇಳಿದ್ದಾರೆ.
ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಅವರ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವರು ನೋ ಕಾನ್ಫಿಡೆನ್ಸ್ ಮೋಷನ್ ಅನ್ನು ಕೂಡ ವೆಂಕಯ್ಯನಾಯ್ಡು ತಿರಸ್ಕರಿಸಿದ್ದಾರೆ. ಇದು ಸಮರ್ಪಕವಾದ ರೀತಿಯಲ್ಲಿ ಇಲ್ಲ ಮತ್ತು ಇದಕ್ಕೆ 14 ದಿನಗಳ ನೋಟೀಸ್ ಅಗತ್ಯವಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.