ಮೈಸೂರು: 2018 ರಿಂದ ತೊಡಗಿದಂತೆ ಈ ವರೆಗೆ ಸುಮಾರು 2 ವರ್ಷಗಳ ತಮ್ಮ ತಂದೆ ಕೊಡಿಸಿದ್ದ ಸ್ಕೂಟರ್ನಲ್ಲಿ ತಾಯಿಯನ್ನು ಕರೆದುಕೊಂಡು ಮಾತೃ ಸೇವಾ ಸಂಕಲ್ಪ ಯಾತ್ರೆ ನಡೆಸಿದ್ದ ಆಧುನಿಕ ಶ್ರವಣ ಕುಮಾರ ಮೈಸೂರಿನ ಡಿ. ಕೃಷ್ಣ ಕುಮಾರ್ ಇದೀಗ ಯಾತ್ರೆ ಮುಗಿಸಿ ಊರಿಗೆ ಮರಳಿದ್ದಾರೆ.
ಭಾರತದ ಹಲವು ತೀರ್ಥಕ್ಷೇತ್ರಗಳು, ಭೂತಾನ್, ನೇಪಾಳ, ಮಯನ್ಮಾರ್ ದೇಶಗಳಿಗೆ ತಮ್ಮ ತಾಯಿ ಚೂಡಾರತ್ನಾ ಅವರನ್ನು ಕರೆದುಕೊಂಡು ಹೋಗಿ ಇದೀಗ ಮತ್ತೆ ಮನೆಗೆ ಮರಳಿದ್ದಾರೆ. ಈ ಯಾತ್ರಾ ಸಂದರ್ಭದಲ್ಲಿ ಈ ಪುಣ್ಯ ಭೂಮಿಯಲ್ಲಿ ಜನಿಸಿರುವುದು ಅದೃಷ್ಟ ಎಂಬುದರ ಮನವರಿಕೆ ಆಗಿದೆ ಎಂದು ಕೃಷ್ಣ ಕುಮಾರ್ ತಿಳಿಸಿದ್ದಾರೆ.
ತಂದೆ ಕೊಡಿಸಿದ ಸ್ಕೂಟರ್ನಲ್ಲೇ ಪ್ರಯಾಣ ಮಾಡಿದ ಕಾರಣ ಅಪ್ಪನೂ ಈ ಯಾತ್ರೆಯಲ್ಲಿ ಜೊತೆಗೇ ಇದ್ದಾರೆ ಎಂಬ ಭಾವನೆ ಮೂಡಿದೆ. ಬದುಕು ಸಾರ್ಥಕ ಎನಿಸಿದೆ ಎಂದು ಅವರು ನುಡಿದಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕರೆ ಮಾಡಿ ತಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದ್ದರು, ಈ ಮಾತುಗಳು ನನ್ನಲ್ಲಿ ಮತ್ತಷ್ಟು ಉತ್ಸಾಹ ತುಂಬುವಂತೆ ಮಾಡಿದೆ ಎಂದು ಕೃಷ್ಣ ಕುಮಾರ್ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮಕ್ಕಳಿಗೆ ಬಾಲ್ಯದಲ್ಲಿಯೇ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತೆ ಜ್ಞಾನ ವಿಕಾಸ ಕೇಂದ್ರ ತೆರೆಯುವ ಸಲುವಾಗಿ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇವರ ಮಾತೃ ಸೇವಾ ಯಾತ್ರೆ ಮೆಚ್ಚಿ ಮಹೀಂದ್ರಾ ಕಂಪೆನಿ ಇವರಿಗೆ ಮಹೀಂದ್ರಾ ಕೆಯುವಿ ಕಾರ್ ಅನ್ನು ಉಡುಗೊರೆ ನೀಡಿ ಪ್ರಶಂಸಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.