ಅಗರ್ತಲಾ: ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಅವರು ಶುಕ್ರವಾರ ವಿಶ್ವ ಬಿದಿರಿನ ದಿನಾಚರಣೆಯ ಅಂಗವಾಗಿ ಬಿದಿರಿನಿಂದ ತಯಾರಿಸಿದ ಕುಕ್ಕೀಸ್ ಮತ್ತು ಬಿದಿರಿನಿಂದ ತಯಾರಿಸಿದ ಜೇನು ಬಾಟಲಿಗಳನ್ನು ಬಿಡುಗಡೆ ಮಾಡಿದರು. ಈ ಉತ್ಪನ್ನಗಳು ರಾಜ್ಯದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಮತ್ತು ಸರ್ಕಾರದ ‘ಸ್ಥಳೀಯತೆಗೆ ಧ್ವನಿ’ ಉಪಕ್ರಮವನ್ನು ಉತ್ತೇಜಿಸಲಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಟ್ವಿಟ್ ಮಾಡಿರುವ ತ್ರಿಪುರ ಸಿಎಂ, ”ವಿಶ್ವ ಬಿದಿರಿನ ದಿನದಂದು ಬಿದಿರಿನ ಕುಕ್ಕೀಸ್ ಅನ್ನು ಪ್ರಾರಂಭಿಸಲಾಗಿದೆ ಮತ್ತು ಬಿದಿರಿನಿಂದ ಮಾಡಿದ ಜೇನು ಬಾಟಲಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ. ಬಿದಿರಿನ ಕುಕ್ಕೀಸ್ ಮತ್ತು ಹನಿ ಬಾಟಲ್ಗಳು ಈಗ ನಮ್ಮ ಹಿರಿಮೆಗೆ ಮತ್ತೊಂದು ಗರಿ ಸೇರಿಸುತ್ತದೆ. ಇದು ಅನೇಕರಿಗೆ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ʼಅತ್ಮನಿರ್ಭರ ಭಾರತʼ ಕನಸನ್ನು ಈಡೆರಿಸುತ್ತದೆ” ಎಂದಿದ್ದಾರೆ.
ಕುಕ್ಕೀಸ್ ಅನ್ನು ಮುಲಿ ಬಿದಿರಿನ ಚಿಗುರಿನಿಂದ ತಯಾರಿಸಲಾಗಿದ್ದು, ಇದನ್ನು ಸಾಮಾನ್ಯವಾಗಿ ಸಿಹಿ ಬಿದಿರು ಎಂದು ಕರೆಯಲಾಗುತ್ತದೆ. ಇದು ಆಹಾರದ ನಾರು ಮತ್ತು ಕಡಿಮೆ ಕೊಬ್ಬನ್ನು ಹೊಂದಿರುತ್ತದೆ. ಅಗರ್ತಲಾದ ಬಿದಿರು ಮತ್ತು ಕಬ್ಬಿನ ಅಭಿವೃದ್ಧಿ ಸಂಸ್ಥೆ (ಬಿಸಿಡಿಐ) ಈ ವಿಶಿಷ್ಟ ಕುಕ್ಕೀಗಳನ್ನು ತಯಾರಿಸಿದೆ.
ಸ್ಥಳೀಯರು ತಮ್ಮ ಜೀವನೋಪಾಯವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ರಾಜ್ಯದಲ್ಲಿ ಬಿದಿರಿನ ಕುಕ್ಕೀಸ್ಗಳನ್ನು ತಯಾರಿಸುವ ಆಲೋಚನೆಯನ್ನು ಬಿಸಿಡಿಐ ಮುಖ್ಯಸ್ಥ ಡಾ.ಕಾಂತ್ ಮೊದಲು ಮುಂದಿಟ್ಟಿದ್ದರು. ಬಿದಿರಿನ ಚಿಗುರಿನ ಪೌಷ್ಟಿಕಾಂಶದ ಮೌಲ್ಯವನ್ನು ಪರಿಗಣಿಸಿ ಸಂಸ್ಥೆ ಬಿದಿರಿನ ಕುಕ್ಕೀಸ್ಗಳನ್ನು ತಯಾರಿಸುವ ಕೆಲಸ ಮಾಡಲು ಪ್ರಾರಂಭಿಸಿತು ಎಂದು ಹೇಳಲಾಗಿದೆ.
ಬಿದಿರಿನ ಕುಕ್ಕೀಸ್ಗಳನ್ನು ನೈಸರ್ಗಿಕವಾಗಿ ತಯಾರಿಸಲಾಗುತ್ತದೆ, ಅದು ಅವುಗಳನ್ನು ಆರೋಗ್ಯಕರ ಮತ್ತು ಪೌಷ್ಟಿಕವಾಗಿಸುತ್ತದೆ. ಈ ನವೀನ ಆಲೋಚನೆಗಾಗಿ ಬಿದಿರು ಮತ್ತು ಕಬ್ಬಿನ ಅಭಿವೃದ್ಧಿ ಸಂಸ್ಥೆ (ಬಿಸಿಡಿಐ) ಶ್ರಮವನ್ನು ನಾನು ಪ್ರಶಂಸಿಸುತ್ತೇನೆ “ಎಂದು ಸಿಎಂ ಬಿಪ್ಲಬ್ ದೇಬ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.