ನವದೆಹಲಿ: ಲೋಕಸಭೆಯಲ್ಲಿ ಅನುಮೋದಿಸಲಾದ ಮೂರು ರೈತ ಮಸೂದೆಗಳ ಬಗ್ಗೆ ಕೆಲವರು ವಿನಾಕಾರಣ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಂಎಸ್ಪಿ ಮತ್ತು ಸರ್ಕಾರಿ ಖರೀದಿಯ ವ್ಯವಸ್ಥೆಗಳು ಇನ್ನು ಮುಂದೆಯೂ ಮುಂದುವರೆಯಲಿದೆ ಎಂಬ ಭರವಸೆಯನ್ನು ಅವರು ನೀಡಿದ್ದಾರೆ.
ಮಸೂದೆಗಳಿಗೆ ವಿರೋಧವನ್ನು ವ್ಯಕ್ತಪಡಿಸಿ ಆಹಾರ ಸಂಸ್ಕರಣಾ ಸಚಿವೆ ಹರ್ಸಿಮ್ರಾಟ್ ಕೌರ್ ಅವರು ರಾಜಿನಾಮೆ ನೀಡಿದ್ದಾರೆ ಮತ್ತು ಈ ಮಸೂದೆಗಳಿಗೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆಯನ್ನು ನೀಡಿರುವ ಮೋದಿ, “ಹಲವು ಶಕ್ತಿಗಳು ರೈತರಲ್ಲಿ ಗೊಂದಲವನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ” ಎಂದಿದ್ದಾರೆ.
“ಐತಿಹಾಸಿಕ ರೈತ ಸುಧಾರಣಾ ಮಸೂದೆಗಳನ್ನು ಅನುಮೋದನೆಗೊಳಿಸಿದ್ದು ರೈತರಿಗೆ ಮತ್ತು ಕೃಷಿ ವಲಯದವರಿಗೆ ಅತ್ಯಂತ ಮಹತ್ವಪೂರ್ಣ ಕ್ಷಣವಾಗಿದೆ. ಈ ಮಸೂದೆಗಳು ರೈತರನ್ನು ಮಧ್ಯವರ್ತಿಗಳಿಂದ ಮುಕ್ತಗೊಳಿಸಲಿದೆ ಮತ್ತು ಎಲ್ಲಾ ಅಡೆತಡೆಗಳಿಂದ ಸ್ವತಂತ್ರಗೊಳಿಸಲಿದೆ” ಎಂದಿದ್ದಾರೆ.
“ಕೃಷಿ ಸುಧಾರಣೆಗಳು ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೊಸ ಅವಕಾಶಗಳನ್ನು ನೀಡಲಿದೆ. ಇದು ಕೃಷಿಗೆ ಆಧುನಿಕ ತಂತ್ರಜ್ಞಾನದ ಪ್ರಯೋಜನವನ್ನು ಒದಗಿಸಲಿದೆ ಮತ್ತು ರೈತರನ್ನು ಸಬಲೀಕರಣಗೊಳಿಸಲಿದೆ” ಎಂದಿದ್ದಾರೆ.
“ರೈತರಿಗೆ ಗೊಂದಲವನ್ನು ಸೃಷ್ಟಿಸಲು ಹಲವಾರು ಶಕ್ತಿಗಳು ಪ್ರಯತ್ನ ಮಾಡುತ್ತಿವೆ. ಎಂಎಸ್ಪಿ ಮತ್ತು ಸರ್ಕಾರಿ ಖರೀದಿಯ ವ್ಯವಸ್ಥೆಯು ಮುಂದುವರಿಯಲಿದೆ ಎಂಬ ಭರವಸೆಯನ್ನು ನಾನು ರೈತ ಸಹೋದರರಿಗೆ ನೀಡುತ್ತೇನೆ. ಈ ಮಸೂದೆಯು ರೈತರಿಗೆ ಹೆಚ್ಚಿನ ಅವಕಾಶಗಳನ್ನು ಮತ್ತು ಆಯ್ಕೆಗಳನ್ನು ನೀಡಲಿದೆ. ಅವರನ್ನು ನಿಜಕ್ಕೂ ಸಬಲೀಕರಣ ಮಾಡಲಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.