ನವದೆಹಲಿ: ಇಂದು ಮಹಾಲಯ ಅಮವಾಸ್ಯೆ. ಈ ದಿನ ನಮ್ಮ ಪೂರ್ವಿಕರನ್ನು ನೆನಪು ಮಾಡಿಕೊಂಡು ಅವರಿಗೆ ಪಿಂಡ ಬಿಡುವ ಪದ್ದತಿ ನಮ್ಮಲ್ಲಿದೆ. ಈ ಬಾರಿ ಸೆಪ್ಟೆಂಬರ್2ರಿಂದ ಪಿತೃ ಪಕ್ಷ ಆರಂಭವಾಗಿತ್ತು. ಪಿತೃ ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆಯಂದು 2020ರ ಪಿತೃ ಪಕ್ಷವು ಮುಕ್ತಾಯಗೊಳ್ಳಲಿದೆ.
ಪಿತೃ ಪಕ್ಷದ ಕೊನೆಯ ದಿನವನ್ನು ಅಂದರೆ ಮಹಾಲಯ ಅಮಾವಾಸ್ಯೆಯ ದಿನವನ್ನು ಧರ್ಮಗ್ರಂಥಗಳಲ್ಲಿ ಬಹಳ ಶ್ರೇಷ್ಟ ದಿನವೆಂದು ಹೇಳಲಾಗಿದೆ. ಪಿತೃಗಳ ಮರಣ ದಿನಾಂಕ ತಿಳಿಯದೇ ಇದ್ದರೆ, ಈ ದಿನದಂದು ಅವರ ಶ್ರಾದ್ಧವನ್ನು ಮಾಡಬಹುದಾಗಿದೆ. ಈ ದಿನ ಕೆಲವು ಕೆಲಸಗಳನ್ನು ಮಾಡುವುದು ಶುಭವಲ್ಲ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.
ಪ್ರದಾನಿ ನರೇಂದ್ರ ಮೋದಿಯವರು ಮಹಾಲಯದ ಹಿನ್ನೆಲೆಯಲ್ಲಿ ದೇಶದ ಜನತೆಗೆ ಟ್ವಿಟ್ ಮೂಲಕ ಶುಭ ಕೋರಿದ್ದಾರೆ. ಕೊರೋನಾ ಸಂಕಷ್ಟದಿಂದ ಮುಕ್ತಿ ಸಿಗಲಿ ಎಂದು ಹಾರೈಸಿದ್ದಾರೆ.
“ಜಾಗತಿಕ ಸಾಂಕ್ರಾಮಿಕ ರೋಗವನ್ನು ಹೋಗಲಾಡಿಸಲು ಶಕ್ತಿಯನ್ನು ಆಶೀರ್ವದಿಸಿ ಎಂದು ಈ ಮಹಾಲಯಲ್ಲಿ ನಾನು ಮಾತೆ ದುರ್ಗೆಯನ್ನು ಪ್ರಾರ್ಥಿಸುತ್ತೇವೆ. ಮಾತೆ ದುರ್ಗೆಯ ದೈವಿಕ ಆಶೀರ್ವಾದವು ಪ್ರತಿಯೊಬ್ಬರ ಜೀವನದಲ್ಲಿ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ನೀಡಲಿ. ನಮ್ಮ ಭೂಮಿ ಸಮೃದ್ಧಿಯಾಗಲಿ! ಶುಭ ಮಹಾಲಯ” ಎಂದಿದ್ದಾರೆ.
This Mahalaya, we pray to Maa Durga to bless with strength to overcome the global pandemic. May the divine blessings of Maa Durga ensure good health and happiness in everyone’s life. May our planet prosper!
Shubho Mahalaya!
— Narendra Modi (@narendramodi) September 17, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.