ವಾಷಿಂಗ್ಟನ್: ಲಡಾಖ್ ಗಡಿಯಲ್ಲಿ ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿ ವಿಫಲವಾಗಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಸಾಮರ್ಥ್ಯ ಕ್ಷೀಣಿಸಿದೆ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿಪ್ರಾಯ ಹರಿದಾಡುತ್ತಿದೆ.
ಈ ವಿಚಾರವನ್ನು ವಕೀಲ, ವಿಶ್ಲೇಷಕ ಗೋರ್ದನ್ ಜಿ ಚಾಂಗ್ ಅವರು ದಿ ನ್ಯೂಸ್ ವೀಕ್ ಗೆ ಬರೆದಿರುವ ಲೇಖನದಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಭಾರತ ಮತ್ತು ಚೀನಾ ಗಡಿಯಲ್ಲಿ ಇರುವ ಪಿಎಲ್ಎ ಯ ವಿಫಲ ಆಕ್ರಮಣಗಳ ಜೊತೆಗೆ ಚೀನಾದ ಅಧ್ಯಕ್ಷರು ತಮ್ಮ ಭವಿಷ್ಯ ಪಣಕ್ಕೆ ಇರಿಸಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ. ಅಲ್ಲದೆ ಕ್ಸಿ ಜಿನ್ಪಿಂಗ್ ಅವರನ್ನು ಭಾರತ ವಿರುದ್ಧ ತೆಗೆದುಕೊಳ್ಳಲಾದ ಆಕ್ರಮಣಕಾರಿ ನಡೆಯ ವಾಸ್ತುಶಿಲ್ಪಿ ಎಂದು ಹೇಳಿದ್ದಾರೆ. ಆದರೆ ಈ ಆಕ್ರಮದ ವೈಫಲ್ಯ ಅನಿರೀಕ್ಷಿತ ಎಂದು ಅವರು ತಿಳಿಸಿದ್ದಾರೆ. ಆದರೂ ಮತ್ತೊಂದು ಆಕ್ರಮಣಕಾರಿ ನೀತಿಗೆ ಉತ್ತೇಜನ ನೀಡುತ್ತಿದ್ದಾರೆ ಎಂಬ ಎಚ್ಚರಿಕೆಯನ್ನೂ ಈ ಲೇಖನದಲ್ಲಿ ಬರೆದಿದ್ದಾರೆ.
2012 ರಲ್ಲಿ ಕ್ಸಿ ಜಿನ್ಪಿಂಗ್ ಅಧಿಕಾರಕ್ಕೇರಿದ ಬಳಿಕ ಇಂತಹ ಆಕ್ರಮಣ ಹೆಚ್ಚಾಗಿದೆ. ಕೆಲ ತಿಂಗಳ ಹಿಂದೆ ಗಲ್ವಾನ್ ಗಡಿಯಲ್ಲಿ ನಡೆದ ಗಲಭೆ 45 ವರ್ಷಗಳ ನಂತರ ಉಭಯ ದೇಶಗಳ ನಡುವೆ ನಡೆದ ದೊಡ್ಡ ಸಂಘರ್ಷ. ಈ ಸಂದರ್ಭದಲ್ಲಿ ಭಾರತ ಚೀನಾ ವಿರುದ್ಧ ಕ್ರಮಕ್ಕೆ ಮುಂದಾಯಿತು. ಆದ್ದರಿಂದ ಚೀನಾ ಹಿಂದಡಿ ಇಟ್ಟಿತು ಎಂದು ಅವರು ಹೇಳಿದ್ದಾರೆ. ಭಾರತದ ವಿರುದ್ಧ ಚೀನಾ ನಡೆಸಿದ ಆಕ್ರಮಣ ಪರಿಣಾಮಕಾರಿಯಾಗಿಲ್ಲ. ಆದ್ದರಿಂದ ಈ ಹಿಂದೆ ಚೀನಾದ ನಿಯಂತ್ರಣದಲ್ಲಿದ್ದ 3 ಪ್ರದೇಶಗಳು ಸದ್ಯ ಭಾರತದ ವಶವಾಗಿದೆ ಎಂದು ಅವರು ಬರೆದಿದ್ದಾರೆ. ಭಾರತ ಎದುರಾಳಿಗೆ ಆಕ್ರಮಣ ನಡೆಸುವ ಅವಕಾಶ ನೀಡುತ್ತಿಲ್ಲ. ಅವರು ಹೆಚ್ಚು ಧೈರ್ಯದಿಂದ ಹೋರಾಟ ನಡೆಸುತ್ತಿದ್ದಾರೆ ಎಂದು ಲೇಖನದಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಬರೆದಿರುವ ಫೌಂಡೇಶನ್ ಫಾರ್ ಡಿಫೆನ್ಸ್ ಆಫ್ ಡೆಮಾಕ್ರಸೀಸ್ ಲೇಖಕಿ, ಆಟ ಬದಲಾಗಿದೆ. ಭಾರತೀಯ ಯೋಧರು ಹೆಚ್ಚು ಧೈರ್ಯದಿಂದ ಹೋರಾಟ ನಡೆಸುತ್ತಿದ್ದಾರೆ. ಅವರು ರಕ್ಷಣಾತ್ಮಕವಾಗಿ ಹೆಜ್ಜೆ ಇಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತೀಯ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ, ಚೀನಾ ತಂತ್ರ ವಿಶ್ಲೇಷಣೆ ಕೇಂದ್ರದ ಮುಖ್ಯಸ್ಥ ಜನದೇವ ರಾನಡೆ ಅವರು, ಚೀನಾಗೆ ಗೆಲುವು ಬೇಕಾಗಿದೆ. ಆದ್ದರಿಂದ ಗಡಿಯಲ್ಲಿ ಮತ್ತಷ್ಟು ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ಆದರೆ ಭಾರತ ಅಲ್ಲಿ ತನ್ನದೇ ಆದ ಯಾಂತ್ರೀಕೃತ ವಾಹನಗಳನ್ನು ಜಮಾವಣೆ ಮಾಡಿದೆ. ಹೆಚ್ಚು ಯೋಧರು ದೈರ್ಯದಿಂದ ಹೋರಾಡುತ್ತಿದ್ದಾರೆ. ಆದ್ದರಿಂದ ಚೀನಾಗೆ ಯಶಸ್ಸಿನ ಭರವಸೆ ಇಲ್ಲ ಎಂದು ತಿಳಿಸಿದ್ದಾರೆ.
ವರ್ಜೀನಿಯಾದ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಅಸೆಸ್ಮೆಂಟ್ ಆಂಡ್ ಸ್ಟ್ರಾಟೆಜಿ ಕೇಂದ್ರದ ರಿಚರ್ಡ್ ಫಿಶರ್ ಅವರು, ಚೀನಾ ಕಳೆದ ಹಲವು ವರ್ಷಗಳಿಂದ ಜಂಟಿ ಯಾಂತ್ರೀಕೃತ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈಗ ಉಂಟಾದ ಹಿನ್ನಡೆಯಿಂದ ಚೀನಾ ಅಧ್ಯಕ್ಷ ಮುಂದೆ ಎದುರಾಗುವ ಆಂತರಿಕ ಕಲಹ ಶಮನಕ್ಕೆ ಮತ್ತಷ್ಟು ಆಕ್ರಮಣಕಾರಿ ನಿಲುವಿಗೂ ಮುಂದಾಗಬಹುದು. ಈ ಸೋಲು, ಜಿನ್ಪಿಂಗ್ಗೆ ಗೆಲುವು ಬೇಕಾಗಿದೆ. ಅದಕ್ಕಾಗಿ ಮತ್ತಷ್ಟು ಪರಿಣಾಮಕಾರಿಯಾಗಿ ಸಾಮರ್ಥ್ಯ ಹೆಚ್ಚಳಕ್ಕಾಗಿ ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.