ಮಂಗಳೂರು: ಕೊರೋನಾ ಸಂಕಷ್ಟದ ಕಾರಣದಿಂದಾಗಿ ಎಲ್ಲಾ ಕ್ಷೇತ್ರಗಳ ಆರ್ಥಿಕ ಸ್ಥಿತಿ ಪಾತಾಳ ಕಂಡಿದೆ. ತುಳುನಾಡಿನ ಗಂಡು ಕಲೆ ಯಕ್ಷಗಾನದ ಮೇಲೂ ಕೊರೋನಾ ಕರಿನೆರಳು ಬಿದ್ದಿದೆ. ಈ ನಡುವೆ ಕೆಲವೊಂದು ಕ್ಷೇತ್ರಗಳ ಬಡ ಜನರಿಗೆ ಅಷ್ಟೋ ಇಷ್ಟೋ ಪರಿಹಾರ ಲಭಿಸಿದೆ. ಆದರೆ ಯಕ್ಷಗಾನ ಕಲಾವಿದರ ಕುಟುಂಬ ಮಾತ್ರ ಸಂಕಷ್ಟದ ಜೊತೆಗೇ ಉಸಿರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಆರು ತಿಂಗಳಿಂದ ಯಕ್ಷಗಾನ ಯಕ್ಷಗಾನ ಪ್ರದರ್ಶನಗಳು ಕೊರೋನಾದಿಂದಾಗಿ ನಡೆದೇ ಇಲ್ಲ. ಇದನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದ ಕಲಾವಿದರ ಬದುಕು ಕಷ್ಟ ನಷ್ಟದಲ್ಲಿ ಜೀವನ ಸಾಗಿಸುವ, ಕುಟುಂಬ ನಿರ್ವಹಿಸುವ ಸ್ಥಿತಿಗೆ ತಲುಪಿದ್ದಾರೆ. ಇಂತಹ ಕಲಾವಿದರ ಸಂಕಷ್ಟಕ್ಕೆ ನೆರವಾಗುವ ಉದ್ದೇಶದಿಂದ ಮಂಗಳೂರಿನ ಯಕ್ಷ ತುಳು ಪರ್ಬ ಎಂಬ ಸಂಘಟನೆ ವಿನೂತನ ಕಾರ್ಯಕ್ರಮ ಆಯೋಜಿಸಲು ಯೋಜನೆ ಹಾಕಿದೆ.
ಈ ಯೋಜನೆಯ ಮೂಲಕ ನೂರಾರು ಯಕ್ಷಗಾನ ಕಲಾವಿದರ ಒಗ್ಗೂಡುವಿಕೆಯಿಂದ ತುಳು ಯಕ್ಷಗಾನದ ಚಿತ್ರೀಕರಣವನ್ನು ನಡೆಸಿದೆ. ಅಗಸ್ಟ್ 29-ಸೆ. 2 ರ ವರೆಗೆ ಕಾರ್ಯಕ್ರಮಗಳನ್ನು ನಡೆಸಿ 1 ಲಕ್ಷದ 50 ಸಾವಿರ ರೂ. ಗಳನ್ನು ಹಲವು ಕಲಾವಿದರಿಗೆ ಹಂಚಲಾಗಿದೆ.
ಸೆ. 12 ರಿಂದ ಮತ್ತೆ ಕೇರಳದಲ್ಲಿ ಕಾರ್ಯಕ್ರಮ ನಡೆಸಲು ಈ ತುಳು ಪರ್ಬ ಸಂಘಟನೆ ರೂಪುರೇಶೆ ಹಾಕಿಕೊಂಡಿದೆ. ಈ ಕಾರ್ಯಕ್ರಮದಲ್ಲಿ 15 ಕಲಾವಿದರಿಗೆ 10 ಕಾರ್ಯಕ್ರಮ ಸಿಗುವ ರೀತಿಯಲ್ಲಿ, ಸುಮಾರು 100 ಕಲಾವಿದರಿಗೆ ಅವಕಾಶ ಸಿಗುವ ನಿಟ್ಟಿನಲ್ಲಿ ವ್ಯವಸ್ಥೆ ರೂಪಿಸಲಾಗಿದೆ. 10 ದಿನಗಳ ಕಾರ್ಯಕ್ರಮದಲ್ಲಿ ಸಿಗುವ 3 ಲಕ್ಷಗಳಷ್ಟು ಹಣವನ್ನು ಬಡ ಕಲಾವಿದರಿಗೆ ನೀಡುವ ಮೂಲಕ ನೆರವಾಗುವ ಮಹತ್ವದ ಉದ್ದೇಶವನ್ನು ಈ ಸಂಘಟನೆ ಹೊಂದಿದೆ.
ಹೀಗೆ ಕಲಾವಿದರ ಶ್ರಮವನ್ನು ಇಂತಹ ಕಠಿಣ ಸಂದರ್ಭದಲ್ಲಿ ಸಕಾರಗೊಳಿಸುವ ನಿಟ್ಟಿನಲ್ಲಿ ಸಂಘಟನೆ ಕಲಾಭಿಮಾನಿಗಳ ಪ್ರೋತ್ಸಾಹ ಬಯಸುತ್ತಿದೆ. ಈ ಸಂಬಂಧ ಹೆಚ್ಚಿನ ಮಾಹಿ ಪಡೆಯಲು ಹೆಚ್ಚಿನ ಯಕ್ಷತುಳು ಪರ್ಬದ ಅಧ್ಯಕ್ಷ ಡಿ. ಮನೋಹರ್ ಕುಮಾರ್ ಮೊ.ಸಂ: 99727 24359, ಕಾರ್ಯದರ್ಶಿ ಸುರೇಂದ್ರ ಮಲ್ಲಿ -98457 33485, ಜೊತೆ ಕಾರ್ಯದರ್ಶಿ ಕರುಣಾಕರ ಶೆಟ್ಟಿ – 9008946706 ಇವರನ್ನು ಸಂಪರ್ಕಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.