ಚೆನ್ನೈ: ತಮಿಳುನಾಡಿನ ಎಂ.ವೀರಲಕ್ಷ್ಮೀ ಅವರು ದೇಶದ ಮೊದಲ ಮಹಿಳಾ ಅಂಬ್ಯುಲೆನ್ಸ್ ಚಾಲಕಿಯಾಗಿ ಹೊರಹೊಮ್ಮಿದ್ದಾರೆ.
108 ತುರ್ತು ಸೇವೆಯನ್ನು ಮತ್ತಷ್ಟು ಬಲಪಡಿಸಲು ತಮಿಳುನಾಡು ಸರ್ಕಾರ ಆಗಸ್ಟ್ 31 ರಂದು 90 ಆಂಬುಲೆನ್ಸ್ ಮತ್ತು ಜೀವ ಉಳಿಸುವ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿರುವ ಇತರ ವಾಹನಗಳನ್ನು ಕಾರ್ಯಾರಂಭ ಮಾಡಿದೆ. ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಹೊಸದಾಗಿ ನೇಮಕಗೊಂಡ ಚಾಲಕರಿಗೆ ನೇಮಕಾತಿ ಆದೇಶಗಳನ್ನು ಹಸ್ತಾಂತರಿಸಿದರು. ಈ ಹೊಸದಾಗಿ ನೇಮಕಗೊಂಡವರಲ್ಲಿ ಎಂ ವೀರಲಕ್ಷ್ಮಿ ಅವರು ಕೂಡ ಸೇರಿದ್ದಾರೆ.
ಸೋಮವಾರ ಕಾರ್ಯಾರಂಭಗೊಂಡ ಅಂಬ್ಯುಲೆನ್ಸ್ನ ಚಾಲಕರಾಗಿ ಅವರು ನೇಮಕಗೊಂಡಿದ್ದಾರೆ. ವೀರಲಕ್ಷ್ಮೀ ದೇಶದ ಮೊದಲ ಮಹಿಳಾ ಆಂಬುಲೆನ್ಸ್ ಚಾಲಕಿ ಎಂದು ಪಳನಿಸ್ವಾಮಿ ಈ ವೇಳೆ ಹೇಳಿದ್ದಾರೆ.
ತಮ್ಮ ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆಗಳನ್ನು ಬಲಪಡಿಸಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪಳನಿಸ್ವಾಮಿ ಹೇಳಿದ್ದಾರೆ. ಸೋಮವಾರ ಚಾಲನೆಗೊಂಡ 90 ವಾಹನಗಳನ್ನು ರೂ.23ಕೋಟಿ ವೆಚ್ಚದಲ್ಲಿ ಖರೀದಿ ಮಾಡಲಾಗಿದೆ. ಸಾರ್ವಜನಿಕ ಆರೋಗ್ಯ ಮತ್ತು ಔಷಧ ಇಲಾಖೆಗಳಲ್ಲಿ ಪಳನಿಸ್ವಾಮಿ ಸುಮಾರು 130 ನೇಮಕಾತಿಗಳನ್ನು ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.