ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಓಣಂ ಸಂದರ್ಭದಲ್ಲಿ ನಾಗರಿಕರಿಗೆ ಶುಭ ಹಾರೈಸಿದ್ದಾರೆ ಮತ್ತು ಇದನ್ನು ಸಾಮರಸ್ಯವನ್ನು ಆಚರಿಸುವ ವಿಶಿಷ್ಟ ಹಬ್ಬ ಎಂದು ಕರೆದಿದ್ದಾರೆ.
“ಓಣಂ ಶುಭಾಶಯಗಳು. ಇದು ಒಂದು ವಿಶಿಷ್ಟವಾದ ಹಬ್ಬವಾಗಿದೆ, ಇದು ಸಾಮರಸ್ಯವನ್ನು ಆಚರಿಸುವ ಹಬ್ಬ. ಇದು ನಮ್ಮ ಶ್ರಮಶೀಲ ರೈತರಿಗೆ ಕೃತಜ್ಞತೆ ಸಲ್ಲಿಸುವ ಸಂದರ್ಭವಾಗಿದೆ. ಪ್ರತಿಯೊಬ್ಬರೂ ಸಂತೋಷ ಮತ್ತು ಉತ್ತಮ ಆರೋಗ್ಯದೊಂದಿಗೆ ಆಶೀರ್ವದಿತರಾಗಲಿ” ಎಂದು ಅವರು ತಮ್ಮ ‘ಮನ್ ಕಿ ಬಾತ್’ಯ ವಿಡಿಯೋ ಕ್ಲಿಪ್ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
“ಈ ದಿನಗಳಲ್ಲಿ ಓಣಂ ಹಬ್ಬವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಈ ಹಬ್ಬವು ಚಿಂಗಂ ತಿಂಗಳಲ್ಲಿ ಬರುತ್ತದೆ. ಜನರು ಹೊಸದನ್ನು ಖರೀದಿಸುತ್ತಾರೆ, ಮನೆಗಳನ್ನು ಅಲಂಕರಿಸುತ್ತಾರೆ ಮತ್ತು ಪೂಕಲಂ ತಯಾರಿಸುತ್ತಾರೆ. ಜನರು ಓಣಂ ಅನ್ನು ಆನಂದಿಸುತ್ತಾರೆ” ಎಂದು ಅವರು ತಿಳಿಸಿದ್ದಾರೆ.
“ವಿವಿಧ ಸ್ಪರ್ಧೆಗಳು ಸಹ ನಡೆಯುತ್ತವೆ. ಓಣಂನ ಖ್ಯಾತಿಯು ಇಂದು ದೂರದ ದೇಶಗಳನ್ನು ತಲುಪಿದೆ. ಅದು ಅಮೆರಿಕ, ಯುರೋಪ್ ಅಥವಾ ಕೊಲ್ಲಿ ರಾಷ್ಟ್ರಗಳಲ್ಲೂ ಆಚರಿಸಲ್ಪಡುತ್ತದೆ. ಓಣಂ ಅಂತರರಾಷ್ಟ್ರೀಯ ಉತ್ಸವವಾಗುತ್ತಿದೆ. ಓಣಂ ಕೃಷಿಯೊಂದಿಗೆ ಸಂಬಂಧ ಹೊಂದಿದೆ. ಇದು ನಮ್ಮ ಗ್ರಾಮೀಣ ಆರ್ಥಿಕತೆಗೆ ಹೊಸ ಆರಂಭದ ಸಮಯ. ನಮ್ಮ ಜೀವನ, ನಮ್ಮ ಸಮಾಜವು ರೈತರ ಸಾಹಸದಿಂದಾಗಿ ಆಹಾರವನ್ನು ಪಡೆಯುತ್ತದೆ. ಅವರ ಪರಿಶ್ರಮವು ನಮ್ಮ ಹಬ್ಬಗಳಿಗೆ ಅಸಂಖ್ಯಾತ ವರ್ಣಗಳನ್ನು ನೀಡುತ್ತದೆ” ಎಂದು ಮೋದಿ ಹೇಳಿದ್ದಾರೆ.
ರೈತರಿಗೆ ಕೃತಜ್ಞತೆ ಸಲ್ಲಿಸುವಾಗ ಪ್ರಧಾನಿ ಮಲಯಾಳಂನಲ್ಲಿ ಟ್ವೀಟ್ ಮಾಡಿದ್ದಾರೆ.
ಆಗಸ್ಟ್ 22 ರಂದು ಪ್ರಾರಂಭವಾದ ಓಣಂ ಹಬ್ಬ ಸೆಪ್ಟೆಂಬರ್ 2 ರವರೆಗೆ ಮುಂದುವರಿಯಲಿವೆ.
Greetings on Onam. This is a unique festival, which celebrates harmony. It is also an occasion to express gratitude to our hardworking farmers. May everyone be blessed with joy and best health. pic.twitter.com/4pjpGRKk6Q
— Narendra Modi (@narendramodi) August 31, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.