ಇಂಧೋರ್: ಭಾಸ್ಕರಾಚಾರ್ಯ ವಿರಚಿತ ಲೀಲಾವತಿಯಿಂದ ತೊಡಗಿದಂತೆ ಶಾಸ್ತ್ರೀಯ ವೈಜ್ಞಾನಿಕ ಪಠ್ಯಗಳನ್ನು ಸಂಸ್ಕೃತ ಭಾಷೆಯಲ್ಲಿ ಬೋಧಿಸಲು ಐಐಟಿ ಇಂಧೋರ್ ತರಗತಿಗಳನ್ನು ಆರಂಭ ಮಾಡಿದೆ.
ಐಐಟಿಯ ಈ ಸಂಸ್ಕೃತ ತರಗತಿಗಳಲ್ಲಿ ಭಾಗಿಗಳಾಗಿ ಅಧ್ಯಯನ ನಡೆಸಲು ಪ್ರಪಂಚದ ಹಲವೆಡೆಯಿಂದ 750 ಜನರು ನೋಂದಾವಣಿ ಮಾಡಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಆಗಸ್ಟ್ 22 ರಿಂದ ತೊಡಗಿದಂತೆ ಈ ಪ್ರಕ್ರಿಯೆ ಪ್ರಾಂಭಗೊಂಡಿರುವುದಾಗಿಯೂ ಅಧಿಕೃತ ಮೂಲಗಳು ಮಾಹಿತಿ ನೀಡಿವೆ. ಈಗಾಗಲೇ ಆರಂಭವಾಗಿರುವ ತರಗತಿಗಳ ಮೊದಲ ಆವೃತ್ತಿ ಅಕ್ಟೋಬರ್ 2 ರಂದು ಮುಕ್ತಾಯವಾಗಲಿದೆ ಎಂದು ಮೂಲಗಳು ಹೇಳಿವೆ.
ಖಗೋಳವಿಜ್ಞಾನ, ಔಷಧ, ಸಸ್ಯ ಶಾಸ್ತ್ರ ಸೇರಿದಂತೆ ಇನ್ನೂ ಹಲವು ವಿಜ್ಞಾನಗಳ ಕಲಿಕೆಗೆ ಸಂಸ್ಕೃತದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಸಂಸ್ಕೃತ ಭವಿಷ್ಯದ ಭಾಷೆಯಾಗಲಿದೆ. ಕೃತಕ ಬುದ್ಧಿಮತ್ತೆ ವಿಚಾರದಲ್ಲಿಯೂ ಸಂಸ್ಕೃತ ತನ್ನದೇ ಆದ ಛಾಪು ಮೂಡಿಸಿದೆ. ಸಂಸ್ಕೃತದಲ್ಲಿ ಪುರಾತನ ವಿಜ್ಞಾನಗಳ ಅಧ್ಯಯನವನ್ನು ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಪುರಾತನ ಭಾಷೆಯಲ್ಲಿ ಸಂವಹನ ನಡೆಸುವ ಕಲೆಯೂ ಸಿದ್ಧಿಸಲಿದೆ ಎಂದು ಐಐಟಿ ಇಂಧೋರ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.