ನವದೆಹಲಿ: ಇಂದು ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ 115 ನೇ ಜನ್ಮ ದಿನಾಚರಣೆ. ಈ ಸಂದರ್ಭದಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಕಿರೆನ್ ರಿಜ್ಜು ಅವರು ಶ್ರೇಷ್ಠ ಕ್ರೀಡಾಪಟುವಿಗೆ ಗೌರವ ನಮನ ಸಲ್ಲಿಸಿದರು.
ಟ್ವಿಟ್ ಮಾಡಿರುವ ರಿಜ್ಜು, ಮೇಜರ್ ಧ್ಯಾನ್ ಚಂದ್ ಅವರು ದೇಶಕ್ಕೆ ಪ್ರಶಸ್ತಿ ಮತ್ತು ಗೌರವ ತಂದುಕೊಡಲು ಹಾಕಿ ಆಟದಲ್ಲಿ ಸಾಟಿಯಿಲ್ಲದ ಸಮರ್ಪಣೆ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.
ಧ್ಯಾನ್ ಚಂದ್ ಅವರ ಬಗ್ಗೆ ವೀಡಿಯೊವನ್ನು ಪೋಸ್ಟ್ ಮಾಡಿರುವ ರಿಜ್ಜು, “ಇಂದು ನ್ಯಾಷನಲ್ ಸ್ಪೋರ್ಟ್ಸ್ ಡೇ ಮತ್ತು ಮೇಜರ್ ಧ್ಯಾನ್ಚಂದ್ ಅವರ ಜನ್ಮ ವಾರ್ಷಿಕೋತ್ಸವ. ಈ ಹಿನ್ನಲೆಯಲ್ಲಿ ‘ದಿ ವಿಝರ್ಡ್ ಆಫ್ ಇಂಡಿಯನ್ ಹಾಕಿ’ ಮೇಜರ್ ಧ್ಯಾನ್ ಚಂದ್ ಅವರಿಗೆ ನನ್ನ ಗೌರವವನ್ನು ಅರ್ಪಿಸುತ್ತೇನೆ. ಈ ಶ್ರೇಷ್ಠ ಕ್ರೀಡಾಪಟು ಭಾರತಕ್ಕೆ ಪ್ರಶಸ್ತಿ ಮತ್ತು ಗೌರವ ತಂದುಕೊಡಲು ಹಾಕಿಯಲ್ಲಿ ಸಾಟಿಯಿಲ್ಲದ ಸಮರ್ಪಣೆ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಿದರು” ಎಂದಿದ್ದಾರೆ.
ಕ್ರೀಡಾ ಸಚಿವರು ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹಾಕಿ ದಂತಕಥೆಗೆ ಪುಷ್ಪ ನಮನ ಸಲ್ಲಿಸಿದರು. ಈ ಬಗೆಗಿನ ಒಂದೆರಡು ಚಿತ್ರಗಳನ್ನು ಪೋಸ್ಟ್ ಅವರು ಮಾಡಿದ್ದಾರೆ, ಅದರಲ್ಲಿ ಅವರು ಕ್ರೀಡಾಂಗಣದಲ್ಲಿ ಮೇಜರ್ ಧ್ಯಾನ್ ಚಂದ್ ಅವರ ಪ್ರತಿಮೆಗೆ ಗೌರವ ಸಲ್ಲಿಸುವುದನ್ನು ಕಾಣಬಹುದು.
ಪ್ರತಿ ವರ್ಷ ಆ.29ರಂದು ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನೋತ್ಸವದಂದು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಅಯೋಜಿಸಲಾಗುತ್ತದೆ.
Today is #NationalSportsDay and I pay my tribute to the ‘The Wizard of Indian Hockey’ Major Dhyan Chand on his Birth Anniversary. The great sportsman displayed unparalleled dedication and skills in Hockey to bring accolades and honour to India 🇮🇳 #MajorDhyanChand pic.twitter.com/ByCzcUgS4Y
— Kiren Rijiju (@KirenRijiju) August 29, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.