ನವದೆಹಲಿ: ಮುಂಬರುವ ದಿನಗಳಲ್ಲಿ 1.40 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಸಾಧನಗಳನ್ನು ದೇಶೀಯವಾಗಿ ಖರೀದಿಸಲಾಗುವುದು ಎಂದು ಕೇಂದ್ರ ರಕ್ಷಣಾ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.
ರಕ್ಷಣಾ ಉದ್ಯಮ ಔಟ್ರೀಚ್ ವೆಬ್ನಾರ್ನಲ್ಲಿ ಮಾತನಾಡಿದ ಸಿಂಗ್, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸಲು ಸರ್ಕಾರ ಹಲವಾರು ದಿಟ್ಟ ನೀತಿ ಸುಧಾರಣೆಗಳನ್ನು ಮಾಡಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಅಮೂಲ್ಯ ಸಲಹೆಯ ಮೇರೆಗೆ ರಕ್ಷಣಾ ಸಚಿವಾಲಯವು 101 ರಕ್ಷಣಾ ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಿ ಅದರ ಆಮದಿನ ಮೇಲೆ ನಿರ್ಬಂಧವನ್ನು ವಿಧಿಸಿದೆ ಎಂದಿದ್ದಾರೆ.
“ಒಂದು ನಿರ್ದಿಷ್ಟ ಅವಧಿಯ ನಂತರ ಈ ರಕ್ಷಣಾ ವಸ್ತುಗಳನ್ನು ಹೊರಗಿನಿಂದ ಖರೀದಿಸಲಾಗುವುದಿಲ್ಲ. ಈ ಪಟ್ಟಿಯು ರಕ್ಷಣಾ ಉದ್ಯಮವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುವ ಪ್ರಕ್ರಿಯೆಯ ಪ್ರಾರಂಭವಾಗಿದೆ. 101 ವಸ್ತುಗಳ ಈ ಪಟ್ಟಿಯಲ್ಲಿ ಸಣ್ಣ ಭಾಗಗಳು ಮಾತ್ರವಲ್ಲದೆ ಯುದ್ಧ ವ್ಯವಸ್ಥೆಗಳು, ಸಂಯೋಜಿತ ವೇದಿಕೆಗಳು, ಯುದ್ಧ ವಾಹನಗಳು ಸೇರಿವೆ. ಈ ಪಟ್ಟಿಯು ಕೇವಲ ಒಂದು ಆರಂಭವಾಗಿದ್ದು, ಮುಂಬರುವ ಸಮಯದಲ್ಲಿ 1.40 ಲಕ್ಷ ಕೋಟಿ ರೂ. ಮೌಲ್ಯದ ರಕ್ಷಣಾ ಸಾಧನಗಳನ್ನು ದೇಶೀಯವಾಗಿ ಖರೀದಿಸಲಾಗುವುದು” ಎಂದಿದ್ದಾರೆ.
ರಕ್ಷಣಾ ಕ್ಷೇತ್ರದ ದಿಟ್ಟ ನೀತಿ ಸುಧಾರಣೆಗಳ ಪೈಕಿ, ರಕ್ಷಣಾ ಕ್ಷೇತ್ರದಲ್ಲಿ ಸ್ವಯಂಚಾಲಿತ ಮಾರ್ಗದ ಮೂಲಕ ವಿದೇಶಿ ನೇರ ಹೂಡಿಕೆಗೆ ಶೇಕಡಾ 74 ಕ್ಕೆ ಮಿತಿಯನ್ನು ಹೆಚ್ಚಿಸುವುದು ಮತ್ತು ಕಾರ್ಯತಂತ್ರದ ಸಹಭಾಗಿತ್ವ (ಎಸ್ಪಿ) ಮಾದರಿಗೆ ಹೆಚ್ಚುವರಿಯಾಗಿ ಯುಪಿ ಮತ್ತು ತಮಿಳುನಾಡಿನಲ್ಲಿ ರಕ್ಷಣಾ ಕಾರಿಡಾರ್ಗಳನ್ನು ಸ್ಥಾಪಿಸುವುದು ಸೇರಿದೆ ಎಂದು ಅವರು ಹೇಳಿದರು. ಹೂಡಿಕೆಗಳನ್ನು ಉತ್ತೇಜಿಸಲು, ಕೈಗಾರಿಕಾ ಪರವಾನಗಿ ಆಡಳಿತದ ಉದಾರೀಕರಣ ಮತ್ತು ಹೂಡಿಕೆದಾರರ ಸಮಸ್ಯೆಗಳನ್ನು ಪರಿಹರಿಸಲು ‘ರಕ್ಷಣಾ ಹೂಡಿಕೆದಾರರ ಕೋಶ’ ರಚಿಸಲಾಗುವುದು ಎಂದಿದ್ದಾರೆ.
“ಸ್ವಾವಲಂಬನೆ ವಾಸ್ತವವಾಗಿ ನಮ್ಮ ವಿಶ್ವಾಸ ಮತ್ತು ಶಕ್ತಿಯ ಮತ್ತೊಂದು ರೂಪವಾಗಿದೆ. ನಮ್ಮ ಪ್ರಧಾನ ಮಂತ್ರಿ ಅವರು ಹೇಳಿದಂತೆ, ಉದ್ದೇಶ, ಸೇರ್ಪಡೆ, ಹೂಡಿಕೆ, ಮೂಲಸೌಕರ್ಯ ಮತ್ತು ನಾವೀನ್ಯತೆಯ ಮೂಲಕ ಸ್ವಂತ ಶಕ್ತಿಯನ್ನು ಹೆಚ್ಚಿಸುವತ್ತ ಕ್ರಮ ಕೈಗೊಂಡಿದ್ದೇವೆ. ಅದರ ಫಲಿತಾಂಶಗಳು ನಮ್ಮ ಮುಂದೆ ಬರಲು ಪ್ರಾರಂಭಿಸಿವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.