ನವದೆಹಲಿ: ಹಿಂದೂ ಆಧ್ಯಾತ್ಮ ಮತ್ತು ಸೇವಾ ಪ್ರತಿಷ್ಠಾನವು ಆಯೋಜನೆಗೊಳಿಸಿರುವ ‘ಪ್ರಕೃತಿ ವಂದನ’ ಉಪಕ್ರಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಈ ಬಗ್ಗೆ ಸಂದೇಶವನ್ನು ನೀಡಿರುವ ಮೋದಿ, “ಹಿಂದೂ ಆಧ್ಯಾತ್ಮ ಮತ್ತು ಸೇವಾ ಪ್ರತಿಷ್ಠಾನವ’ವು ʼಪ್ರಕೃತಿ ವಂದನ’ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ ಎನ್ನುವ ವಿಚಾರ ನನಗೆ ಸಂತೋಷವನ್ನು ತಂದಿದೆ. ಈ ಕಾರ್ಯಕ್ರಮ ಪ್ರಕೃತಿ ಮಾತೆಯ ಕಡೆಗಿನ ನಮ್ಮ ಗೌರವದ ಅಭಿವ್ಯಕ್ತಿಯಾಗಿದೆ” ಎಂದು ಹೇಳಿದ್ದಾರೆ.
“ವೃಕ್ಷ ವಂದನ’ ಮತ್ತು ‘ವೃಕ್ಷ ಆರತಿ’ ಭೂಮಿತಾಯಿಯ ಕಡೆಗೆ ಪ್ರೀತಿ ಮತ್ತು ಕಾಳಜಿಯನ್ನು ತೋರಿಸುವ ಶ್ರೇಷ್ಠ ಮಾರ್ಗಗಳಾಗಿವೆ. ಜನರು ಈ ಉಪಕ್ರಮದೊಂದಿಗೆ ಬೆಸೆಯಲ್ಪಡುವಂತೆ ಮತ್ತು ತಮ್ಮ ಮನೆಗಳಲ್ಲಿ ವೃಕ್ಷ ಆರತಿ ನಡೆಸುವಂತೆ ಈ ಕಾರ್ಯಕ್ರಮವನ್ನು ವಿನ್ಯಾಸಪಡಿಸಲಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಇದು ಚಿಂತನಾಭರಿತ ಕಾರ್ಯವಾಗಿದೆ” ಎಂದಿದ್ದಾರೆ.
ಪ್ರಕೃತಿಯೊಂದಿಗೆ ಸೌಹಾರ್ದವಾಗಿ ಬದುಕುವುದು ನಮ್ಮ ಜೀವನದ ವಿಧಾನವಾಗಿದೆ. 130 ಕೋಟಿ ದೇಶವಾಸಿಗಳು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ದೃಢ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ಇದರ ಫಲಿತಾಂಶ ಕಾಣುತ್ತಿದೆ ಮತ್ತು ಕಳೆದ ಕೆಲವು ವರ್ಷಗಳಿಂದ ಭಾರತದ ಮರಗಳು ಮತ್ತು ಅರಣ್ಯಗಳ ವ್ಯಾಪ್ತಿ ಮಹತ್ವಪೂರ್ಣವಾಗಿ ಏರಿಕೆಯಾಗಿದೆ. ಮುಂಬರುವ ಪೀಳಿಗೆಗ ಉತ್ತಮ ಭೂಮಿಯನ್ನು ಪಡೆದುಕೊಳ್ಳಲಿ ಎಂಬ ನಿಟ್ಟಿನಲ್ಲಿ ನಾವು ಇನ್ನಷ್ಟು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದಿದ್ದಾರೆ.
“ಪ್ರತಿಷ್ಠಾನದ ಉಪಕ್ರಮವು ನಮ್ಮ ರಾಷ್ಟ್ರದ ಶ್ರೀಮಂತ ಜೀವವೈವಿಧ್ಯತೆಯನ್ನು ಸಂರಕ್ಷಣೆ ಮಾಡುವ ರಾಷ್ಟ್ರದ ಸಮಗ್ರ ನಿರ್ಣಯವನ್ನು ಬಲಪಡಿಸಲಿದೆ. ಹಿಂದೂ ಆಧ್ಯಾತ್ಮ ಮತ್ತು ಸೇವಾ ಪ್ರತಿಷ್ಠಾನವು ಪ್ರೀತಿ, ಸಹಾನುಭೂತಿ ಮತ್ತು ಭಾತೃತ್ವದ ಸನಾತನ ಸಂದೇಶದೊಂದಿಗೆ ತನ್ನ ಸೇವಾಕಾರ್ಯವನ್ನು ಮುಂದುವರೆಸಲಿ. ಪ್ರಕೃತಿ ಸಂರಕ್ಷಣಾ ಪ್ರಯತ್ನಗಳಿಗಾಗಿ ಆಯೋಜಕರಿಗೆ ಮತ್ತು ಭಾಗಿದಾರರಿಗೆ ನನ್ನ ಶುಭಕಾಮನೆಗಳು” ಎಂದಿದ್ದಾರೆ.
ಪ್ರಕೃತಿ ವಂದನ ಕಾರ್ಯಕ್ರಮ ಆ.30ರಂದು ಆಯೋಜನೆಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.