ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತದ ಕಲ್ಪನೆಯ ಕರೆಗೆ ಸ್ಪಂದಿಸಿರುವ ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಅನೇಕ ಉಪಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.
ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿರುವ ಸಂಸ್ಥೆ, 108 ವ್ಯವಸ್ಥೆಗಳು ಮತ್ತು ಸಬ್ಸಿಸ್ಟಂ ಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಮಾತುಕತೆಯನ್ನು ನಡೆಸಿದೆ. ಭಾರತೀಯ ಉದ್ಯಮಗಳ ಮೂಲಕವೇ ರಕ್ಷಣಾ ವ್ಯವಸ್ಥೆಗಳ ವಿನ್ಯಾಸ ಮತ್ತು ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದೆ. ಜೊತೆಗೆ ಆತ್ಮನಿರ್ಭರ ಭಾರತ ನಿರ್ಮಾಣದ ಹಿನ್ನೆಲೆಯಲ್ಲಿ ಅನೇಕ ತಂತ್ರಜ್ಞಾನಗಳನ್ನು ಭಾರತದಲ್ಲಿಯೇ ಅಭಿವೃದ್ಧಿ ಮಾಡುವ ಕುರಿತಾಗಿಯೂ ಸಚಿವರಲ್ಲಿ ಮಾತುಕತೆ ನಡೆಸಿದೆ.
ದೇಶದ ಅಗತ್ಯತೆಗೆ ಅನುಗುಣವಾಗಿ ಅಗತ್ಯವಿರುವ ವ್ಯವಸ್ಥೆಗಳ ವಿನ್ಯಾಸ, ಅಭಿವೃದ್ಧಿ, ಪರೀಕ್ಷೆ ಮೊದಲಾದವುಗಳಿಗೆ ಡಿಆರ್ಡಿಒ ಬೆಂಬಲ ನೀಡಲಿದೆ. ದೇಶದ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ಅವಶ್ಯಕವಾದ ಅಭಿವೃದ್ಧಿ ವ್ಯವಸ್ಥೆಗಳ ಒಪ್ಪಂದ ಗಳನ್ನು ಭಾರತೀಯ ಉತ್ಪಾದನಾ ಆದೇಶಗಳ ಮೂಲಕ ಪೂರೈಸುವ ನಿಟ್ಟಿನಲ್ಲಿಯೂ ಡಿಆರ್ಡಿಒ ಕ್ರಮ ಕೈಗೊಳ್ಳಲು ಮುಂದಾಗಿದೆ. ವಿಮರ್ಶಾತ್ಮಕ, ಸುಧಾರಿತ ತಂತ್ರಜ್ಞಾನಗಳ ವಿನ್ಯಾಸ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಈ ಉಪಕ್ರಮ ಮಹತ್ವ ಪಡೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.
ಭಾರತೀಯ ಉದ್ಯಮವು ಬಿಲ್ಡ್ ಟು ಪ್ರಿಂಟ್, ಬಿಲ್ಡ್ ಟು ಸ್ಪೆಸಿಫಿಕೇಶನ್ ವಿಚಾರಗಳಲ್ಲಿಯೂ ಪ್ರಗತಿ ಸಾಧಿಸಿದೆ. ಡಿಆರ್ಡಿಒ ಸಂಸ್ಥೆಯು ಭಾರತೀಯ ಉದ್ಯಮಗಳ ಜೊತೆಗೆ ತನ್ನ ರಕ್ಷಣಾ ವ್ಯವಸ್ಥೆಗಳನ್ನು ಬಲ ಪಡಿಸುವ ನಿಟ್ಟಿನಲ್ಲಿ ಸಹಭಾಗಿತ್ವ ಹೊಂದಿದೆ. ಕಾರ್ಖಾನೆಗಳು ಮತಿ ಕೈಗಾರಿಕೆಗಳ ಜೊತೆಗೂ ಡಿಆರ್ಡಿಒ ಸಂಪರ್ಕ ಹೊಂದಿದ್ದು, ಇದು ದೇಶದ ರಕ್ಷಣಾ ವಲಯದಲ್ಲಿಯೂ ಸಶಕ್ತಗೊಳ್ಳಲು ಮತ್ತು ಆತ್ಮನಿರ್ಭರ ಭಾರತದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.