ಗುವಾಹಟಿ: ಭಾರತದ ಅತ್ಯಂತ ದೊಡ್ಡ ರೋಪ್ ವೇ ಎಂದೇ ಖ್ಯಾತವಾಗಿರುವ ಗುವಾಹಟಿ-ಉತ್ತರ ಗುವಾಹಟಿಯ ಬ್ರಹ್ಮಪುತ್ರ ನದಿಯ ಮೇಲಿನ 2 ಕಿ.ಮೀ. ಉದ್ದರ ರೋಪ್ ವೇ ಯನ್ನು ಅಸ್ಸಾಂನ ಹಣಕಾಸು ಸಚಿವ ಹಿಮಂತ್ ಬಿಸ್ವಾ ಶರ್ಮಾ ಅವರು ಇತರ ಕ್ಯಾಬಿನೆಟ್ ಮಂತ್ರಿಗಳ ಸಮ್ಮುಖದಲ್ಲಿ ಉದ್ಘಾಟಿಸಿದರು.
ಈ ರೋಪ್ ವೇ ಮೂಲಕ ಪ್ರತಿ ಕ್ಯಾರೇಜ್ಗಳು ಏಳು ನಿಮಿಷಗಳಲ್ಲಿ ಕ್ರಮಿಸಲು ಸಾಧ್ಯವಿದ್ದು, 32 ಪ್ರಯಾಣಿಕರನ್ನು ಏಕಕಾಲಕ್ಕೆ ಕರೆದೊಯ್ಯಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯದ ಕೊರೋನಾ ಪರಿಸ್ಥಿತಿಯಲ್ಲಿ ಸಾಂಕ್ರಾಮಿಕ ಕಾಯಿಲೆ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇವಲ 15 ಮಂದಿಗಷ್ಟೇ ಒಂದು ಕ್ಯಾರೇಜ್ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಪ್ರತಿಯೊಬ್ಬ ಪ್ರಯಾಣಿಕನೂ ಪ್ರೊಟೆಕ್ಟಿವ್ ಗೇರ್ಗಳನ್ನು ಈ ಪ್ರಯಾಣದ ಸಂದರ್ಭದಲ್ಲಿ ಕಡ್ಡಾಯವಾಗಿ ಧರಿಸುವಂತೆಯೂ ಸೂಚಿಸಲಾಗಿದೆ.
ಈ ರೋಪ್ ವೇ ಮೂಲಕ ಏಕಮುಖ ಪ್ರಯಾಣಕ್ಕೆ 60 ರೂ., ದ್ವಿಮುಖ ಪ್ರಯಾಣಕ್ಕೆ 100 ರೂ. ಗಳನ್ನು ನಿಗದಿ ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ದೈನಂದಿನ, ವಾರಕ್ಕೆ ಮತ್ತು ತಿಂಗಳಿನ ಪಾಸುಗಳನ್ನು ಪಡೆದುಕೊಳ್ಳುವ ಸೌಲಭ್ಯಗಳನ್ನು ನೀಡಲಾಗಿದೆ. ಈ ರೋಪ್ ವೇ ಯು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಕಾರ್ಯಾಚರಣೆ ನಡೆಸಲಿದ್ದು, ಇದರ ಮೇಲ್ವಿಚಾರಣೆ ಮತ್ತು ಸುರಕ್ಷತೆಯ ದೃಷ್ಟಿಯಿಂದ 58 ಸಿಸಿಟಿವಿ ಕೆಮರಾಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2019ರಲ್ಲಿಯೇ ಈ ರೋಪ್ ವೇ ನಿರ್ಮಾಣ ಕಾಮಗಾರಿಯ ಬಹುತೇಕ ಕೆಲಸಗಳು ಪೂರ್ಣಗೊಂಡಿತ್ತು. ಈ ಯೋಜನೆಗೆ 56 ಕೋಟಿ ರೂ. ಗಳನ್ನು ಬಳಕೆ ಮಾಡಲಾಗಿದೆ. ಬ್ರಹ್ಮಪುತ್ರ ನದಿಯ ಪ್ರದೇಶಗಳ ಅಭಿವೃದ್ಧಿ ಮತ್ತು ಸುಂದರಗೊಳಿಸುವಿಕೆಯ ಹಲವಾರು ಕ್ರಮಗಳ ಒಂದು ಭಾಗ ಈ ರೋಪ್ ವೇ ಯೂ ಆಗಿದೆ ಎಂದು ಅಧಿಕಾರಿಗಳು ತಮ್ಮ ವರದಿಯಲ್ಲಿ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.