ನವದೆಹಲಿ: ಮೋನಿಕಾ ಅರೋರಾ, ಸೋನಾಲಿ ಚಿಟಾಲ್ಕರ್ ಮತ್ತು ಪ್ರೇರಣಾ ಮಲ್ಹೋತ್ರಾ ಅವರು ಬರೆದ “ದೆಹಲಿ ರಾಯಿಟ್ಸ್ 2020: ದಿ ಅನ್ಟೋಲ್ಡ್ ಸ್ಟೋರಿ” ಪುಸ್ತಕಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಪುಸ್ತಕಕ್ಕಾಗಿ ಮೊದಲೇ ಆರ್ಡರ್ ಮಾಡಲು ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಮುಗಿ ಬಿದ್ದಿದ್ದಾರೆ.
ಈ ಪುಸ್ತಕವನ್ನು ಗರುಡ ಪ್ರಕಾಶನ್ ಪ್ರಕಟಿಸುತ್ತಿದೆ, ಇದು ಭಾರತೀಯ ನಿರೂಪಣೆಗಳನ್ನು ಕೇಂದ್ರೀಕರಿಸುವ ಅಂತರರಾಷ್ಟ್ರೀಯ ಪ್ರಕಟಣೆಯಾಗಿದೆ.
ಎಡಪಂಥೀಯರ ಸಂಘಟಿತ ಅಭಿಯಾನದ ಹಿನ್ನೆಲೆಯಲ್ಲಿ ಒಪ್ಪಂದದ ಹೊರತಾಗಿಯೂ ಬ್ಲೂಮ್ಸ್ಬರಿ ಇಂಡಿಯಾ ಪುಸ್ತಕವನ್ನು ಪ್ರಕಟಿಸುವುದರಿಂದ ಹಿಂದೆ ಸರಿದಿತ್ತು. ಈ ಪುಸ್ತಕದ ಪ್ರಕಟನೆಯಿಂದ ಹಿಂದೆ ಸರಿಯುವಂತೆ ವಿಲಿಯಂ ಡಾಲ್ರಿಂಪಲ್ ಅವರಂತಹ ಲೇಖಕರು ಬ್ಲೂಮ್ಸ್ಬರಿ ಇಂಡಿಯಾದ ಮೇಲೆ ಒತ್ತಡ ಹೇರಿದ್ದರು ಎಂದು ಹೇಳಲಾಗಿದೆ.
ಮನವಿಗಳ ಹೊರತಾಗಿಯೂ ಬ್ಲೂಮ್ಸ್ಬರಿ ಇಂಡಿಯಾ ಪುಸ್ತಕ ಪ್ರಕಟನೆಗೆ ಮುಂದಾಗಲೇ ಇಲ್ಲ ಎಂದು ಮೋನಿಕಾ ಅರೋರಾ ಆರೋಪಿಸಿದ್ದಾರೆ, ಇದರ ಪರಿಣಾಮವಾಗಿಯೇ ಅವರು ಗರುಡ ಪ್ರಕಾಶನ ಜೊತೆಗೂಡಿ ಪುಸ್ತಕವನ್ನು ಪ್ರಕಟಿಸಲು ನಿರ್ಧರಿಸಿದರು.
ಗರುಡ ಪ್ರಕಾಶನ್ ಶೀಘ್ರದಲ್ಲೇ ಸುದ್ದಿಯನ್ನು ದೃಢಪಡಿಸಿತು ಮತ್ತು ಪುಸ್ತಕಕ್ಕಾಗಿ ಪೂರ್ವ- ಆರ್ಡರ್ಗಳನ್ನು ಪ್ರಾರಂಭಿಸಿದೆ.
ಓದುಗರಿಂದ ಈ ಪುಸ್ತಕಕ್ಕೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ. ಓದುಗರ ಕ್ಷಿಪ್ರ ಸ್ಪಂದನೆಯಿಂದಾಗಿ ಗರುಡ ಪ್ರಕಾಶನ ಸರ್ವರ್ಗಳು ಕ್ರ್ಯಾಶ್ ಆಗಿವೆ. ಪ್ರಕಟಣೆ ಈಗ ಓದುಗರಿಗಾಗಿ ಪರ್ಯಾಯ ಖರೀದಿ ಕ್ರಮವನ್ನು ಸ್ಥಾಪಿಸಿದೆ.
ಈ ನಡುವೆ, ಬ್ಲೂಮ್ಸ್ಬರಿ ಇಂಡಿಯಾ ವಿರುದ್ಧ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪ್ರಮುಖ ಲೇಖಕರಾದ ಸಂಜೀವ್ ಸನ್ಯಾಲ್ ಮತ್ತು ಡಾ ಆನಂದ್ ರಂಗನಾಥನ್ ಅವರು ಇದನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಭವಿಷ್ಯದಲ್ಲಿ ಈ ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸುವುದಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
Announcement:
It’s official now: @GarudaPrakashan is going to bring the book of @advmonikaarora ji, #DelhiRiotsUntoldStory in English and Hindi both.
Pre-buy links will be shared with you soon.
Keep following us!
Thank you all for putting your trust in Garuda.— Garuda (@GarudaPrakashan) August 23, 2020
This is your book, which exists for u, because of u.
Let Truth be revealed….
Book ur order now.@GarudaPrakashanhttps://t.co/V4YO3hecSt— Monika Arora (@advmonikaarora) August 23, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.