ನವದೆಹಲಿ: ಲಡಾಖ್ನ ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ನಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಉಂಟಾಗುತ್ತಿರುವ ಸಂದರ್ಭದಲ್ಲಿ, ಲಡಾಖ್ನಲ್ಲಿರುವ ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಉಲ್ಲಂಘನೆಗಳನ್ನು ಎದುರಿಸಲು ಮಿಲಿಟರಿ ಕ್ರಮ ನಮ್ಮ ಆಯ್ಕೆಯಾಗಲಿದೆ ಎಂದು ರಕ್ಷಣಾ ಸಿಬ್ಬಂದಿ (ಸಿಡಿಎಸ್) ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಒಂದು ವೇಳೆ ರಾಜತಾಂತ್ರಿಕ ಮತ್ತು ಸೇನಾ ಮಟ್ಟದ ಮಾತುಕತೆ ವಿಫಲವಾದರಷ್ಟೇ ಭಾರತೀಯ ಸಶಸ್ತ್ರ ಪಡೆ ಈ ಆಯ್ಕೆಯನ್ನು ಬಳಸುತ್ತದೆ ಎಂದು ಅವರು ಹೇಳಿದ್ದಾರೆ.
“ಲಡಾಖ್ನಲ್ಲಿ ಚೀನೀ ಸೈನ್ಯದ ಉಲ್ಲಂಘನೆಗಳನ್ನು ಎದುರಿಸಲು ಮಿಲಿಟರಿ ಆಯ್ಕೆ ಸದಾ ನಮ್ಮ ಮುಂದೆ ಇದೆ. ಆದರೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ವಿಫಲವಾದರೆ ಮಾತ್ರ ಅದನ್ನು ಕಾರ್ಯಗತಗೊಳಿಸಲಾಗುತ್ತದೆ” ಎಂದು ಸಿಡಿಎಸ್ ಜನರಲ್ ರಾವತ್ ತಿಳಿಸಿದ್ದಾರೆ.
2017 ರಲ್ಲಿ ಡೋಕ್ಲಾಮ್ನಲ್ಲಿ ಪಿಎಲ್ಎ ವಿರುದ್ಧ 73 ದಿನಗಳ ಮಿಲಿಟರಿ ನಿಲುಗಡೆ ಸಂದರ್ಭದಲ್ಲಿ ಸಿಡಿಎಸ್ ರಾವತ್ ಭಾರತೀಯ ಸೇನಾ ಮುಖ್ಯಸ್ಥರಾಗಿದ್ದರು. ಪ್ರಸ್ತುತ ಅವರು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದಾರೆ. ಚೀನಾದ ಯಾವುದೇ ಬೆದರಿಕೆಯನ್ನು ನಿಭಾಯಿಸಲು ಭಾರತೀಯ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ ಮತ್ತು ಸಮನ್ವಯದ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಸೇನೆಯು ಪಂಗೊಂಗ್ ಸರೋವರದ ಫಿಂಗರ್ 4 ಪ್ರದೇಶದಿಂದ ಹಿಂದೆ ಸರಿದರೆ, ಚೀನಾದ ಸೈನಿಕರು ಸಹ ಅದೇ ದೂರಕ್ಕೆ ಹಿಂತಿರುಗುತ್ತಾರೆ ಎಂದು ಚೀನಾ ಪ್ರಸ್ತಾಪಿಸಿದೆ. ಆದರೆ ಭಾರತ ಈ ಪ್ರಸ್ತಾಪವನ್ನು ತಿರಸ್ಕರಿಸಿದೆ ಮತ್ತು ಗಡಿಯಲ್ಲಿರುವ ಪೂರ್ವ ಲಡಾಖ್ನ ಎಲ್ಲಾ ಪ್ರದೇಶಗಳಲ್ಲಿ ಚೀನಾ ಯಥಾಸ್ಥಿತಿ ಪುನಃಸ್ಥಾಪಿಸಬೇಕೆಂದು ಒತ್ತಾಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.