ನವದೆಹಲಿ: ಅಲಿಗಢ ಜಿಲ್ಲೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರನ್ನು ಜೀವಂತವಾಗಿ ಸುಡುವ ಬೆದರಿಕೆಗಳು ಬರುತ್ತಿವೆ. ಅವರದ್ದೇ ಸಮುದಾಯದವರು ಅವರನ್ನು ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಇಷ್ಟಕ್ಕೂ ಆ ಮಹಿಳೆಗೆ ಬೆದರಿಕೆ ಬರಲು ಕಾರಣವೇನು ಗೊತ್ತೇ?, ಅವರು ಅಯೋಧ್ಯೆಯ ರಾಮಲಲ್ಲಾನಿಗೆ ರಕ್ಷಾಬಂಧನವನ್ನು ಕಳುಹಿಸಿದ್ದು ಮತ್ತು ಅಗಸ್ಟ್ 5ರಂದು ತಮ್ಮ ಮನೆಯಲ್ಲಿ ರಾಮನಿಗೆ ಪೂಜೆ ನೆರವೇರಿಸಿದ್ದು
ರೂಬಿ ಆಸಿಫ್ ಖಾನ್ ಅವರು ಬೆದರಿಕೆಗಳನ್ನು ಎದುರಿಸುತ್ತಿರುವ ಮಹಿಳೆಯಾಗಿದ್ದಾರೆ. ಅವರನ್ನು ಮುಸ್ಲಿಂ ಧರ್ಮದಿಂದ ಹೊರಹಾಕಬೇಕು ಎನ್ನುವ ಕೂಗು ಮೂಲಭೂತವಾದಿಗಳಿಂದ ಕೇಳಿಬರುತ್ತಿದೆ. ಇದೀಗ, ರೂಬಿ ಅವರು ಬೆದರಿಕೆ ಹಾಕುತ್ತಿರುವವರ ವಿರುದ್ಧ ದೆಹಲಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಪೊಲೀಸರು ಪ್ರಕರಣದ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ.
ಅಲಿಗಢ ನಗರದಲ್ಲಿ ರೂಬಿ ಅವರಿಗೆ ಬೆದರಿಕೆ ಹಾಕುವ ಪೋಸ್ಟರ್ಗಳನ್ನು ಕೂಡ ಹಾಕಲಾಗಿದೆ. ರೂಬಿ ಅವರು ಬಿಜೆಪಿಯ ಮಹಾವೀರ್ ಗಂಜ್ ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆಯೂ ಆಗಿದ್ದಾರೆ. ಇವರು ಕಳೆದ ಜುಲೈ 30ರಂದು ರಾಮ್ಲಲ್ಲಾನಿಗೆ ರಕ್ಷಾಬಂಧನವನ್ನು ಕಳುಹಿಸಿಕೊಟ್ಟಿದ್ದರು. ಆಗಸ್ಟ್ 5ರಂದು ಭೂಮಿ ಪೂಜೆಯ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಪೂಜೆ ಆಯೋಜಿಸಿದ್ದರು.
ಇದೇ ಕಾರಣಕ್ಕೆ ಅವರಿಗೆ ಬೆದರಿಕೆ ಹಾಕಲಾಗುತ್ತಿದೆ. “ಕೆಲವು ಮೂಲಭೂತವಾದ ಮುಸ್ಲಿಮರು ನನ್ನನ್ನು ಜೀವಂತವಾಗಿ ಸುಟ್ಟು ಹಾಕಿ ಕೊಲ್ಲುವ ಬೆದರಿಕೆ ಹಾಕುತ್ತಿದ್ದಾರೆ. ಸುತ್ತಮುತ್ತಲಿನ ಪ್ರದೇಶದಲ್ಲಿ ನನ್ನ ವಿರುದ್ಧ ಪೋಸ್ಟರ್ಗಳನ್ನು ಕೂಡ ಹಾಕಲಾಗಿದೆ” ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.