ಹರಿದ್ವಾರ: ಪಾಲ್ಘರ್ ಸಾಧುಗಳ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿವೆ. ಸಾಧುಗಳ ಹತ್ಯೆಗೆ ನ್ಯಾಯ ಕೋರಿ ಜುನಾ ಅಖಾಡದ ಸ್ವಾಮಿ ಅವಧೇಶಾನಂದ ಗಿರಿ ಗುರುವಾರ ಈ ವಿಷಯದಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವಧೇಶಾನಂದ್, “ಪಾಲ್ಘರ್ನಲ್ಲಿ ಸಾಧುಗಳನ್ನುಕೊಂದವರ ವಿರುದ್ಧ ಯಾವುದೇ ಕ್ರಮಗಳು ಜರುಗಿಲ್ಲ. ಗುಂಪು ಮುಗ್ಧ ಸಾಧುಗಳನ್ನು ಪೊಲೀಸರ ಮುಂದೆಯೇ ಅನಾಗರಿಕವಾಗಿ ಕೊಂದು ಹಾಕಿತು. ನ್ಯಾಯ ಸಿಕ್ಕಿಲ್ಲ ಎಂಬ ಕಾರಣದಿಂದ ಈ ವಿಷಯದಲ್ಲಿ ಜನರಲ್ಲಿ ಆಕ್ರೋಶವಿದೆ. ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಂತೆ , ಸಿಬಿಐ ಇದನ್ನೂ ತನಿಖೆ ಮಾಡಬೇಕು. ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂಬುದು ಧಾರ್ಮಿಕ ಗುಂಪುಗಳು ಮತ್ತು ಭಕ್ತರು ಬಯಕೆಯಾಗಿದೆ ” ಎಂದಿದ್ದಾರೆ.
“ಅನೇಕ ಧಾರ್ಮಿಕ ಸಂಸ್ಥೆಗಳು ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿವೆ. ವಿಶ್ವದಾದ್ಯಂತದ ಸಂತ ಸಮುದಾಯಗಳು ಅಗಲಿದ ಆತ್ಮಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತಿವೆ” ಎಂದು ಅವರು ಹೇಳಿದರು.
“ಲಕ್ಷಾಂತರ ಸಂತರು ಮತ್ತು ದೇಶದ ಧಾರ್ಮಿಕ ಜನರ ಕರೆಯಂತೆ ಪಾಲ್ಘರ್ನಲ್ಲಿ ನಡೆದ ಸಂತರ ಹತ್ಯೆಯನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ದೇಶವು ನ್ಯಾಯವನ್ನು ಬಯಸುತ್ತದೆ” ಎಂದು ಅವರು ಟ್ವಿಟ್ ಮಾಡಿದ್ದಾರೆ.
पालघर में निर्दोष साधुओं की हत्या राष्ट्र की सांस्कृतिक-आध्यात्मिक चेतना पर कुठाराघात है। इस बर्बरतापूर्ण कृत्य की निष्पक्ष जांच #CBI द्वारा होनी चाहिए।#पालघर_संतों_को_न्याय_दो #PalgharLynching @yogrishiramdev @AcharyaSabha @ANI @VHPDigital @RSS @PTI_News@vishwa_samvad @RSSorg pic.twitter.com/hGj0yF5Kve
— Swami Avdheshanand (@AvdheshanandG) August 20, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.