ನವದೆಹಲಿ: ಹಿಂದೂ ದೇವಾನುದೇವತೆಗಳನ್ನು ಅವಮಾನ ಮಾಡುವುದು ಕೆಲವರಿಗೆ ಛಾಳಿಯಾಗಿಬಿಟ್ಟಿದೆ. ಹಾಗೆ ಮಾಡಿದರೆ ಮಾತ್ರ ಅವರಿಗೆ ಹೊಟ್ಟೆ ತುಂಬುತ್ತದೆ. ಅಂತ ವ್ಯಕ್ತಿಗಳಲ್ಲಿ ಒಬ್ಬ ‘ಕಾಮಿಡಿಯನ್’ ಎಂದು ಕರೆದುಕೊಳ್ಳುವ ಮುನಾವರ್ ಫಾರೂಕಿ. ಹಿಂದೂಗಳನ್ನು ಅವಮಾನ ಮಾಡಿದರೆ ಮಾತ್ರ ಜನರಿಗೆ ತನ್ನ ಹಾಸ್ಯ ತಲುಪುತ್ತದೆ ಎಂಬ ಮನಸ್ಥಿತಿಯನ್ನು ಈತ ಬಳಸಿಕೊಂಡಂತೆ ಇದೆ.
ತಿಂಗಳುಗಳ ಹಿಂದೆ ಈತ ಹಿಂದೂ ದೇವರನ್ನು ಅವಮಾನಿಸಿದ್ದಾನೆ. ಆರ್ಎಸ್ಎಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಗೋದ್ರಾದಲ್ಲಿ ನಡೆದ ಹಿಂದೂಗಳ ನರಮೇಧದ ಬಗ್ಗೆ ಬಾಲಿಶತನವಾಗಿ ಮಾತನಾಡಿದ್ದಾನೆ.
ಈತನ ವಿರುದ್ಧ ಹಿಂದೂ ಕಾರ್ಯಕರ್ತ ಶಿವಂ ರಾವತ್ ಅವರು ದೂರು ದಾಖಲು ಮಾಡಿದ್ದಾರೆ. ಈ ಹಿಂದೆಯೂ ಕೂಡ ಈತ ತನ್ನ ಸ್ಟ್ಯಾಂಡಪ್ ಕಾಮಿಡಿ ಶೋಗಳಲ್ಲಿ ಹಿಂದುಗಳ ಬಗ್ಗೆ ಕೆಟ್ಟದಾಗಿ ಮಾತನಾಡಿ ತನ್ನ ಮೇಲೆ ಪ್ರಕರಣ ದಾಖಲಾಗುವಂತೆ ಮಾಡಿದ್ದಾನೆ. ಆದರೆ ಇನ್ನೂ ಈತನಿಗೆ ಬುದ್ಧಿ ಬಂದಿಲ್ಲ.
ಹಿಂದುಗಳಿಗೆ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿಯಲ್ಲಿ ಈತನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಬಾಲಿವುಡ್ ಗೀತೆಗಳನ್ನು ಬಳಸಿ ಹಿಂದೂ ದೇವತೆಗಳ ಬಗ್ಗೆ ಮತ್ತು ನಂಬಿಕೆಯ ಬಗ್ಗೆ ಕೀಳು ಮಟ್ಟದ ಹಾಸ್ಯ ಮಾಡುತ್ತಾನೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿದೆ.
‘ಸತ್ತ ಮೇಲೆಯೂ ಉರಿಯುತ್ತಾರಲ್ಲವೇ’ ಎಂದು ಗೋಧ್ರಾ ನರಮೇಧದಲ್ಲಿ ಸುಟ್ಟು ಕರಕಲಾದ ಹಿಂದೂಗಳ ಬಗ್ಗೆ ಹೇಳಿಕೆ ನೀಡಿದ್ದಾನೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈತನನ್ನು ಕಾನೂನಿನ ಮೂಲಕ ಎದುರಿಸಲು ಹಲವರು ಮುಂದಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.