ನವದೆಹಲಿ: ಕೇರಳದ ತಿರೂರ್ ರೈಲ್ವೆ ನಿಲ್ದಾಣವು ಅತ್ಯಂತ ಸುಂದರೀಕರಣಗೊಂಡಿದೆ. ಭಾರತೀಯ ರೈಲ್ವೆಯು ಇದರ ದೃಶ್ಯಾವಳಿಗಳನ್ನು ಆಗಸ್ಟ್ 17ರಂದು ಟ್ವಿಟರ್ ಮೂಲಕ ಹಂಚಿಕೊಂಡು ಶ್ಲಾಘನೆ ವ್ಯಕ್ತಪಡಿಸಿದೆ. ಈ ದೃಶ್ಯಾವಳಿಗಳು ನೆಟ್ಟಿಗರನ್ನು ಇನ್ನಿಲ್ಲದಂತೆ ಆಕರ್ಷಿಸಿದೆ.
ರೈಲ್ವೆ ನಿಲ್ದಾಣದ ಸುತ್ತಲೂ ಗಿಡಗಳನ್ನು ಬೆಳೆಸಲಾಗಿದ್ದು, ಇದು ನಿಲ್ದಾಣದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಳ ಮಾಡಿದೆ. ಈ ಬಗ್ಗೆ ಬರೆದುಕೊಂಡಿರುವ ರೈಲ್ವೆ ” ನಿಲ್ದಾಣದ ಸುಂದರೀಕರಣ: ಸದರ್ನ್ ರೈಲ್ವೆಯ ತಿರೂರ್ ರೈಲ್ವೆ ನಿಲ್ದಾಣದ ದೃಶ್ಯಗಳನ್ನು ಕಣ್ತುಂಬಿಕೊಳ್ಳಿ, ಇಲ್ಲಿ ಸಸ್ಯ ಕುಂಡಗಳು ಎಲ್ಲೆಲ್ಲೂ ಕಂಡುಬರುತ್ತಿವೆ” ಎಂದಿದೆ.
ರೈಲ್ವೆಯ ಈ ಟ್ವೀಟ್ ಗೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಸಾವಿರಾರು ಜನರು ಇದನ್ನು ಶೇರ್ ಮಾಡಿದ್ದಾರೆ ಮತ್ತು ಸಾವಿರಾರು ಜನರು ಇದನ್ನು ಲೈಕ್ ಮಾಡಿದ್ದಾರೆ.
“ಇಷ್ಟೊಂದು ಸುಸಜ್ಜಿತವಾಗಿ ನಿರ್ವಹಣೆ ಮಾಡಿದ ರೈಲ್ವೆ ನಿಲ್ದಾಣವನ್ನು ನೋಡುವುದೇ ಆನಂದ. ಲಾಕ್ಡೌನ್ ಮುಗಿದ ಬಳಿಕ ನಾವು ಇಲ್ಲಿಗೆ ಭೇಟಿ ನೀಡುವುದನ್ನು ನಿರೀಕ್ಷೆ ಮಾಡುತ್ತೇವೆ” ಒಬ್ಬ ನೆಟ್ಟಿಗ ಹೇಳಿದ್ದಾರೆ.
“ರೈಲ್ವೆ ಉತ್ತಮ ಕೆಲಸ ಮಾಡಿದೆ. ಇನ್ನಷ್ಟು ಹೆಚ್ಚಿನ ನಿಲ್ದಾಣಗಳಲ್ಲಿ ಇಂತಹ ತ್ವರಿತಗತಿಯ ಕಾರ್ಯಗಳು ನಡೆಯಬೇಕಾಗಿದೆ” ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ.
Station Beautification: Catch a glimpse of Tirur Railway Station of Southern Railway, where potted plants are placed at station. pic.twitter.com/LNxS3Svvfc
— Ministry of Railways (@RailMinIndia) August 17, 2020
Beautiful. Hopefully it would be maintained as well.. that would be real winner for the transformation.
— Somnath Wagh (@catchsom1000) August 18, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.