ನವದೆಹಲಿ: ವಿದ್ಯಾರ್ಥಿಗಳಲ್ಲಿ ಹೊಸತನಗಳನ್ನು ಕಲಿಯುವ, ಸಂಶೋಧಿಸುವ ಉತ್ಸಾಹ ಹೆಚ್ಚಾಗಬೇಕು ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.
ಅಟಲ್ ರ್ಯಾಂಕಿಂಗ್ ಆಫ್ ಇನ್ಸ್ಟಿಟ್ಯೂಶನ್ ಇನ್ನೋವೇಷನ್ ಅಚೀವ್ಮೆಂಟ್ಸ್ ಫಲಿತಾಂಶ ಪ್ರಕಟಿಸುವ ಸಲುವಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೊಸತನ ಈ ಕ್ಷಣದ ಶಿಕ್ಷಣದ ಅನಿವಾರ್ಯತೆಯಾಗಿದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳಲ್ಲಿ ಹೊಸತನ ಮತ್ತು ಉದ್ಯಮಶೀಲ ಸಂಸ್ಕೃತಿಯನ್ನು ಬೆಳೆಸಲು ಏಕೀಕೃತ ಪ್ರಯತ್ನಗಳು ನಡೆಯಬೇಕಾಗಿದೆ ಎಂದು ನಾಯ್ಡು ಅಭಿಪ್ರಾಯ ವ್ಯಕ್ತಪಡಿಸಿದರು. ಮನುಷ್ಯನ ಪ್ರಗತಿಯ ಮುಖ್ಯ ಮತ್ತು ನಿರ್ಣಾಯಕ ಲಕ್ಷಣವಾಗಿದೆ ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಶೂನ್ಯ ಮತ್ತು ದಶಮಾಂಶ ವ್ಯವಸ್ಥೆಯ ಆವಿಷ್ಕಾರದಿಂದ 20ನೇ ಶತಮಾನದವರೆಗೂ ಭಾರತ ನಾವಿನ್ಯತೆಯಲ್ಲಿ ತನ್ನದೇ ಆದ ಇತಿಹಾಸವನ್ನು ಕಾಪಿಟ್ಟುಕೊಂಡು ಬಂದಿರುವುದಾಗಿಯೂ ಅವರು ಹೇಳಿದರು. ಭಾರತದ ನಾವಿನ್ಯತೆ ಮತ್ತು ಕಲಿಕೆಗಳೆರಡೂ ದೇಶದ ಬೌದ್ಧಿಕತೆಯ ಮಟ್ಟವನ್ನು ಜಗತ್ತಿಗೆ ತಿಳಿಸುವ, ಆ ಮೂಲಕ ದೇಶವನ್ನು ವಿಶ್ವಗುರುವನ್ನಾಗಿಸುವತ್ತ ಒಯ್ಯಬೇಕಿದೆ ಎಂದು ಅವರು ತಿಳಿಸಿದರು.
ಇನ್ನು ಎಆರ್ಐಐಎ ನ ರ್ಯಾಂಕಿಂಗ್ ಪಟ್ಟಿಯಲ್ಲಿ ಐಐಟಿ ಮೆಡ್ರಾಸ್ ಅಗ್ರ ಸ್ಥಾನ ಗಳಿಸಿಕೊಂಡಿತು. ಐಐಟಿ ಬಾಂಬೆ ಮತ್ತು ಐಐಟಿ ದೆಹಲಿ ನಂತರದ ಸ್ಥಾನವನ್ನು ತಮ್ಮದಾಗಿಸಿಕೊಂಡಿವೆ.
ಖಾಸಗಿ ಸಂಸ್ಥೆಗಳ ವಿಭಾಗದಲ್ಲಿ ಒಡಿಶಾದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಕೆಐಐಟಿಯನ್ನು ಎಸ್ಆರ್ಎಂ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಮತ್ತು ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳು ಅನುಸರಿಸಿವೆ. ರಾಜ್ಯ ಅನುದಾನಿತ ಸ್ವಾಯತ್ತ ಸಂಸ್ಥೆಗಳ ಪೈಕಿ ಮಹಾರಾಷ್ಟ್ರದ ಕಾಲೇಜ್ ಆಫ್ ಎಂಜಿನಿಯರಿಂಗ್ ಪುಣೆ ಅಗ್ರಸ್ಥಾನ ಗಳಿಸಿದೆ.
ಇದೇ ಮೊದಲ ಬಾರಿಗೆ 2020ರ ಶ್ರೇಯಾಂಕದಲ್ಲಿ ಹೈಯರ್ ಎಜುಕೇಶನ್ ಇನ್ಸ್ಟಿಟ್ಯೂಶನ್ ಗಳ ಮಹಿಳೆಯರಿಗಾಗಿ ವಿಶೇಷ ಶ್ರೇಣಿಯ ಬಹುಮಾನವನ್ನು ನೀಡಲಾಗಿದೆ. ಬಜೆಟ್ ಮತ್ತು ಫಂಡಿಂಗ್ ಸಪೋರ್ಟ್, ಇನ್ಫ್ರಾಸ್ಟ್ರಕ್ಚರ್ ಆಂಡ್ ಫೆಸಿಲಿಟೀಸ್, ಜಾಗೃತಿ, ಪ್ರಚಾರ, ಸಂಶೋಧನೆ ಮೊದಲಾದ ಏಳು ಅಂಶಗಳನ್ನು ಆಧಾರವಾಗಿಟ್ಟುಕೊಂಡು ಈ ಶ್ರೇಣಿಗಳನ್ನು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.