ನವದೆಹಲಿ: ಪದೇ ಪದೇ ಸಂಭವಿಸುವ ಭೂಕುಸಿತ ಮತ್ತು ಭಾರಿ ಮಳೆಯ ನಡುವೆಯೂ ಗಡಿ ರಸ್ತೆಗಳ ಸಂಸ್ಥೆ (ಬಿಆರ್ಒ) ಮೂರು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಉತ್ತರಾಖಂಡದ ಪಿಥೋರಘರ್ ಜಿಲ್ಲೆಯ ಜೌಲ್ಜಿಬಿ ಸೆಕ್ಟರ್ನಲ್ಲಿ 180 ಅಡಿ ಬೈಲಿ ಸೇತುವೆಯನ್ನು ನಿರ್ಮಿಸಿ ಸಾಧನೆ ಮಾಡಿದೆ.
ವರದಿಗಳ ಪ್ರಕಾರ, ಜುಲೈ 27, 2020 ರಂದು ಮಹಾ ಮೇಘಸ್ಪೋಟ ಸಂಭವಿಸಿದ ಪರಿಣಾಮವಾಗಿದೆ 50 ಮೀಟರ್ ಸ್ಪ್ಯಾನ್ ಕಾಂಕ್ರೀಟ್ ಸೇತುವೆ ಸಂಪೂರ್ಣವಾಗಿ ನಾಶವಾಗಿತ್ತು. ನದಿಗಳು ಮತ್ತು ನಲ್ಲಾಗಳು ಪ್ರವಾಹದ ಒಡೆತಕ್ಕೆ ತತ್ತರಿಸಿ ಹೋಗಿದ್ದವು. ಭೂಕುಸಿತದಿಂದಾಗಿ ಅನೇಕ ಸಾವುನೋವುಗಳು ಸಂಭವಿಸಿತ್ತು ಮತ್ತು ರಸ್ತೆ ಸಂಪರ್ಕ ಮುರಿದು ಹೋಗಿತ್ತು.
ತಕ್ಷಣವೇ BRO ತನ್ನ ಸೇತುವೆ ಸಂಪನ್ಮೂಲಗಳನ್ನು ಸಂಗ್ರಹ ಮಾಡಿ, ಸೇತುವೆಯ ನಿರ್ಮಾಣ ಕಾರ್ಯವನ್ನು ಆರಂಭಿಸಿಯೇ ಬಿಟ್ಟಿತು.
ಆಗಾಗ್ಗೆ ಭೂಕುಸಿತ ಮತ್ತು ಭಾರಿ ಮಳೆ ಸಂಭವಿಸುತ್ತಿದ್ದ ಕಾರಣ ಪಿತೋರಗಢ್ದಿಂದ ಬಿಡಿ ಭಾಗಗಳನ್ನು ಸ್ಥಳಕ್ಕೆ ಸಾಗಿಸುವುದು ದೊಡ್ಡ ಸವಾಲಾಗಿತ್ತು. ಆದರೆ ಎದೆಗುಂದದೆ ಕಾಮಗಾರಿಯನ್ನು ಮುಂದುವರೆಸಲಾಗಿತ್ತು. ಆಗಸ್ಟ್ 16, 2020 ರಂದು ಸೇತುವೆ ನಿರ್ಮಾಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿತು, ಈ ಸೇತುವೆ ಪ್ರವಾಹ ಪೀಡಿತ ಗ್ರಾಮಗಳನ್ನು ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ ಮತ್ತು ಜೌಲ್ಜಿಬಿಯನ್ನು ಮುನ್ಸಿಯಾರಿಗೆ ಸಂಪರ್ಕಿಸಿದೆ.
ಸಂಪರ್ಕವು 20 ಹಳ್ಳಿಗಳ ಸುಮಾರು 15,000 ಜನರಿಗೆ ನಿರಾಳತೆಯನ್ನು ತಂದುಕೊಟ್ಟಿದೆ. ನಿರ್ಮಿಸಿದ ಸೇತುವೆ ಜೌಲ್ಜಿಬಿಯಿಂದ ಮುನ್ಸಿಯಾರಿವರೆಗಿನ 66 ಕಿಲೋಮೀಟರ್ ರಸ್ತೆ ಸಂಪರ್ಕವನ್ನು ಪುನರಾರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.