ನವದೆಹಲಿ: ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ಪಿಎಫ್)ನ ಅತ್ಯಂತ ಗೌರವಾನ್ವಿತ ಅಧಿಕಾರಿಗಳಲ್ಲಿ ಒಬ್ಬರಾದ, ಸುಮಾರು 50 ಭಯೋತ್ಪಾದಕರನ್ನು ಸಂಹಾರ ಮಾಡಿರುವ ಹೆಗ್ಗಳಿಕೆಯನ್ನು ಹೊಂದಿರುವ ಅಸಿಸ್ಟೆಂಟ್ ಕಮಾಂಡೆಂಟ್ ನರೇಶ್ ಕುಮಾರ್ ಅವರು ತಮ್ಮ 7ನೇ ಪ್ರತಿಷ್ಠಿತ ಪೊಲೀಸ್ ಶೌರ್ಯ ಪದಕವನ್ನು (police Medal for Gallantry (PMG)) ಸ್ವೀಕರಿಸಿದ್ದಾರೆ.
35 ವರ್ಷದ ನರೇಶ್ ಕುಮಾರ್ ಅವರು 4 ವರ್ಷಗಳ ಅವಧಿಯಲ್ಲಿ 7 ಶೌರ್ಯ ಪದಕಗಳನ್ನು ಪಡೆಯುವ ಮೂಲಕ ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, “ನಮ್ಮ ತಂಡವು 2018 ರಲ್ಲಿ ಚತರ್ಬಾಲ್ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಗಾಗಿ ಈ ವರ್ಷ ನನಗೆ ಪೊಲೀಸ್ ಶೌರ್ಯ ಪದಕವನ್ನು ನೀಡಲಾಗಿದೆ, ಅಲ್ಲಿ ನಮ್ಮ ತಂಡವು ಲಷ್ಕರ್-ಎ-ತೋಯ್ಬಾ(ಎಲ್ಇಟಿ)ದ ಉನ್ನತ ಕಮಾಂಡರ್ ಶೌಕತ್ ಅಹ್ಮದ್ ತಕ್ನನ್ನು ಹತ್ಯೆ ಮಾಡಿತ್ತು. ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಅಗ್ರ ಹತ್ತು ಜನರಲ್ಲಿ ಆತನೂ ಒಬ್ಬನಾಗಿದ್ದ” ಎಂದಿದ್ದಾರೆ.
“ನಾನು ಮಾಡಿದ ಕಾರ್ಯಾಚರಣೆಗಳ ಸಂಖ್ಯೆಯನ್ನು ಎಣಿಸುವುದು ಕಷ್ಟ, ಆದರೆ ನನ್ನ ತಂಡವು ನೆಲಕ್ಕುರುಳಿಸಿದ ಒಟ್ಟು ಭಯೋತ್ಪಾದಕರ ಸಂಖ್ಯೆ ಕಣಿವೆಯಲ್ಲಿ ಸುಮಾರು 50 ರಷ್ಟಿದೆ. ಅವರಲ್ಲಿ ಹಲವರು ಜೈಶೇ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ಗಳಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.
“ನಾನು 2016 ರಲ್ಲಿ ಶ್ರೀನಗರದಲ್ಲಿ ನಡೆಸಿದ ಕಾರ್ಯಾಚರಣೆಗಾಗಿ 2017 ರಲ್ಲಿ ಮೊದಲ ಶೌರ್ಯ ಪದಕವನ್ನು ಪಡೆದುಕೊಂಡೆ. ಅದರಲ್ಲಿ ನಾವು ಇಬ್ಬರು ವಿದೇಶಿ ಭಯೋತ್ಪಾದಕರನ್ನು ನೆಲಕ್ಕುರುಳಿಸಿದ್ದೇವೆ. ಅದೇ ರೀತಿ 2018 ರಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ಗಳನ್ನು ಸಂಹಾರ ಮಾಡಿದ್ದಕ್ಕಾಗಿ ನನಗೆ ಎರಡು ಪದಕಗಳನ್ನು ನೀಡಲಾಯಿತು” ಎಂದು ಕುಮಾರ್ ಹೇಳಿದ್ದಾರೆ.
ಕಳೆದ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನದಂದು ಅವರಿಗೆ ಎರಡು ಪದಕಗಳನ್ನು ಸಹ ನೀಡಲಾಗಿದೆ..
ಅಹ್ಮದ್ ತಕ್ನನ್ನು ಸಂಹಾರ ಮಾಡಿದ್ದಕ್ಕಾಗಿ 2018 ರಲ್ಲಿ ಅವರ ಕಾರ್ಯಾಚರಣೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ನರೇಶ್ ಅವರೇ ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.