ನವದೆಹಲಿ: ಭಾರತದ 74 ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಭಾರತದೊಂದಿಗಿನ ಸ್ನೇಹವನ್ನು ವಿವರಿಸಲು ಹಿಂದಿ ಪದಗಳನ್ನು ಬಳಸಿದ್ದಾರೆ. ಉಭಯ ದೇಶಗಳ ಬಾಂಧವ್ಯ ಭರವಸೆ, ಗೌರವದ ಅಡಿಪಾಯದ ಮೇಲೆ ನಿಂತಿದೆ, ಅದು ಪ್ರಜಾಪ್ರಭುತ್ವ, ರಕ್ಷಣಾ ಸಹಕಾರ, ವಲಸೆ ಮತ್ತು ಮಿತ್ರತ್ವದಿಂದ ಸಂಕೇತಿಸಲ್ಪಟ್ಟಿದೆ ಎಂದು ಅವರು ಹೇಳಿದ್ದಾರೆ.
“ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಆಳವಾದ ಸ್ನೇಹವು ವ್ಯಾಪಾರ ಮತ್ತು ರಾಜತಾಂತ್ರಿಕತೆಗಿಂತ ಹೆಚ್ಚಿನದಾಗಿದೆ. ಭರೋಸಾ (ನಂಬಿಕೆ) ಮತ್ತು ಸಮ್ಮಾನ್ (ಗೌರವ) ದ ಮೇಲೆ ಸ್ಥಾಪಿತವಾಗಿದೆ. ಇದು ಆಳವಾದ ಸ್ನೇಹ, ಮತ್ತು ಪ್ರಜಾಪ್ರಭುತ್ವ, ರಕ್ಷಣಾ ಸಹಕಾರ, ವಲಸೆ ಮತ್ತು ಮಿತ್ರತ್ವವನ್ನು ಹೊಂದಿದೆ” ಎಂದು ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಶ್ಲಾಘಿಸುವಾಗ ಸ್ಕಾಟ್ ಹೇಳಿದ್ದಾರೆ.
“ಭಾರತದ ದೀರ್ಘಕಾಲದ ಸ್ನೇಹಿತನಾಗಿ, ಆಸ್ಟ್ರೇಲಿಯಾ ಅದರ ಸ್ವಾತಂತ್ರ್ಯದ ಸಂಭ್ರಮದಲ್ಲಿ ಪೂರ್ಣ ಹೃದಯದಿಂದ ಸೇರಿಕೊಳ್ಳುತ್ತದೆ ಮತ್ತು ಭಾರತದ ಜನರಿಗೆ ತನ್ನ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸುತ್ತದೆ” ಎಂದು ಅವರು ಹೇಳಿದ್ದಾರೆ.
“ಜನರು ನಮ್ಮ ದೇಶಗಳ ನಡುವಿನ ಜೀವಂತ ಸೇತುವೆ ಎಂದು ನಮಗೆ ತಿಳಿದಿದೆ. ವಿದ್ಯಾರ್ಥಿಗಳಾಗಿ, ನುರಿತ ಕೆಲಸಗಾರರಾಗಿ ನಮ್ಮ ಕುಟುಂಬವನ್ನು ಸೇರಿಕೊಂಡ ಭಾರತೀಯ ಪರಂಪರೆಯ ಜನರು ಈ ದೇಶವನ್ನು ಶ್ರೀಮಂತಗೊಳಿಸಿದ್ದಾರೆ. ಭಾರತವು ಈಗ ನಮ್ಮ ದೊಡ್ಡ ವಲಸಿಗರ ಮೂಲವಾಗಿದೆ ಮತ್ತು ಅವರ ಉಪಸ್ಥಿತಿಯು ಆಸ್ಟ್ರೇಲಿಯಾವನ್ನು ಅತ್ಯಂತ ಯಶಸ್ವಿ ಬಹುಸಾಂಸ್ಕೃತಿಕವಾಗಿಸಲು ಕಾರಣವಾಗಿದೆ” ಎಂದಿದ್ದಾರೆ.
“ನಮ್ಮ ಹಂಚಿಕೆಯ ಮೌಲ್ಯಗಳು, ಆಸಕ್ತಿಗಳು ಮತ್ತು ಉದ್ದೇಶಗಳ ಕಾರಣದಿಂದಾಗಿ ಪ್ರಧಾನಿ ಮೋದಿ ಮತ್ತು ನಾನು ಈ ವರ್ಷದ ಜೂನ್ನಲ್ಲಿ ಸಮಗ್ರ ದ್ವಿಪಕ್ಷೀಯ ಸಂಬಂಧವನ್ನು ಸಮಗ್ರ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಏರಿಸಿದ್ದೇವೆ” ಎಂದು ಮಾರಿಸನ್ ಭಾರತಕ್ಕೆ ನೀಡಿದ ಸಂದೇಶದಲ್ಲಿ ಬರೆದಿದ್ದಾರೆ.
“ನಮ್ಮ ಪಾಲುದಾರಿಕೆ ನಮ್ಮ ಪ್ರದೇಶದ ಮತ್ತು ಜಾಗತಿಕ ಸಮುದಾಯದ ಸಾಮಾನ್ಯ ಒಳಿತಿಗಾಗಿ ಸಜ್ಜಾಗಿದೆ, ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ನಿವಾರಿಸಲು ನಾವು ಕೆಲಸ ಮಾಡುತ್ತಿರುವಾಗ ಇದು ನಿರ್ಣಾಯಕವಾಗಿರುತ್ತದೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.