ವಾಷಿಂಗ್ಟನ್: ಚೀನಾದಿಂದ ಪ್ರೇರಣೆ ಪಡೆದು ಕಾಶ್ಮೀರದ ವಿಚಾರವನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸಭೆಯಲ್ಲಿ ಪ್ರಸ್ತಾಪ ಮಾಡಿರುವ ಪಾಕಿಸ್ಥಾನ ಮುಖಭಂಗ ಅನುಭವಿಸಿದೆ. ಕಾಶ್ಮೀರದ ಬಗ್ಗೆ ಯಾವ ವಿಚಾರವನ್ನು ಪಾಕಿಸ್ಥಾನ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿತ್ತೋ, ಅದು ಮಹತ್ವದ ವಿಚಾರವಲ್ಲ. ಅಂತಹ ಹುರುಳಿಲ್ಲದ ವಾದಗಳಿಗೆ ಸಮಯ ನೀಡಲಾಗುವುದಿಲ್ಲ ಎಂದು ಸಭೆ ತಿಳಿಸಿದೆ ಎಂದು ಭಾರತೀಯ ರಾಯಭಾರಿ ಟಿ.ಎಸ್. ತಿರುಮೂರ್ತಿ ಅವರು ತಿಳಿಸಿದ್ದಾರೆ.
ಚೀನಾದ ಕುಮ್ಮಕ್ಕು ಪಡೆದ ಪಾಕಿಸ್ಥಾನ ಕಾಶ್ಮೀರದ ವಿಷಯವನ್ನೇನೋ ಮಂಡಿಸಿತು. ಆದರೆ ಅದರ ಕುರಿತಂತೆ ಭದ್ರತಾ ಸಮಿತಿಯ ಸದಸ್ಯರಲ್ಲಿ ಹುಟ್ಟಿದ ಗೊಂದಲ, ಸಂಶಯಗಳನ್ನು ನಿವಾರಿಸುವಲ್ಲಿ ಮಾತ್ರ ಪಾಕಿಸ್ಥಾನ ಮುಗ್ಗರಿಸಿದ್ದು, ಮುಖಭಂಗ ಅನುಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ವಿಶಸಂಸ್ಥೆಯ ಹೆಚ್ಚಿನ ಸದಸ್ಯರು ಕಾಶ್ಮೀರದ ವಿಚಾರವನ್ನು ಭಾರತ ಮತ್ತು ಪಾಕಿಸ್ಥಾನಗಳ ನಡುವಿನ ದ್ವಿಪಕ್ಷೀಯ ವಿಚಾರ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಪೂರಕವಾಗುವಂತೆಯೇ ಆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆಯೂ ಸಲಹೆ ನೀಡಿದ್ದಾರೆ. ಆ ಮೂಲಕ ಪಾಕಿಸ್ಥಾನಕ್ಕೆ ಜಗತ್ತಿನೆದುರು ಮತ್ತೆ ಅವಮಾನವಾದಂತಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.