ಕಠ್ಮಂಡು: ನೆರೆಯ ದೇಶ ನೇಪಾಳದ ಪ್ರಧಾನಿ ಕೆ ಪಿ ಶರ್ಮಾ ಒಲಿ ಅವರು ಭಾರತದೊಂದಿಗೆ ಬಾಂಧವ್ಯವನ್ನು ಹದೆಗೆಡಿಸುತ್ತಿದ್ದಾರೆ. ಇದಕ್ಕಾಗಿ ಅವರು ತಮ್ಮ ಪಕ್ಷದವರಿಂದಲೇ ಪ್ರತಿಭಟನೆಯನ್ನು ಎದುರಿಸುವ ಸ್ಥಿತಿಯನ್ನು ಸೃಷ್ಟಿಸಿಕೊಂಡಿದ್ದಾರೆ. ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ವಿರೋಧ ಪಕ್ಷಗಳ ಟೀಕೆಯನ್ನೂ ಅವರು ಎದುರಿಸುತ್ತಿದ್ದಾರೆ.
ಆಡಳಿತಾತ್ಮಕವಾದ ಎಲ್ಲಾ ವಿಚಾರಗಳಲ್ಲಿಯೂ ಒಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಮಾಜಿ ಪ್ರಧಾನಿ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷ ಪ್ರಚಂಡ (ಪುಷ್ಪ ಕಮಾಲ್ ದಹಲ್)ಅವರು ಒತ್ತಾಯಿಸಿದ್ದಾರೆ. ಒಲಿಯಂತಹ ಅಸಮರ್ಥ ನಾಯಕರನ್ನು ಬೆಂಬಲಿಸಿದರೆ ಅದಕ್ಕಿಂತ ದೊಡ್ಡ ತಪ್ಪು ಮತ್ತೊಂದಿರುವುದು ಸಾಧ್ಯವಿಲ್ಲ. ರಾಜತಾಂತ್ರಿಕ ವಿಚಾರಗಳಲ್ಲಿ ವಿಫಲರಾಗಿರುವ ಒಲಿ ಅವರಿಗೆ ಆಡಳಿತ ನಡೆಸುವ ಅರ್ಹತೆ ಇಲ್ಲ ಎಂದೂ ಪ್ರಚಂಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿಯನ್ನು ಅರಿತು ಒಲಿ ರಾಜೀನಾಮೆ ನೀಡದಿದ್ದರೆ ಕಮ್ಯೂನಿಷ್ಟ್ ಪಕ್ಷ ಇಬ್ಭಾಗವಾಗಲಿದೆ. ಅವರು ಅಧಿಕಾರದಿಂದ ಕೆಳಗಿಳಿಯಲು ನಿರಾಕರಿಸುತ್ತಿದ್ದು, ಪರಿಣಾಮ ಗಂಭೀರವಾಗಬಹುದು ಎಂದೂ ತಿಳಿಸಿದ್ದಾರೆ. ಸದ್ಯ ಒಲಿ ಅವರ ಮೇಲಿನ ಅಸಮಾಧಾನದಿಂದ ಕೆಲವು ನಾಯಕರು ಪಕ್ಷದಿಂದ ಹೊರಬಂದು ಪ್ರಚಂಡ ಅವರಿಗೆ ಬೆಂಬಲವನ್ನು ಸೂಚಿಸಿದ್ದು, ನೇಪಾಳದ ರಾಜಕೀಯ ವಲಯದಲ್ಲಿ ಸಂಚಲನ ಉಂಟುಮಾಡಿದೆ.
ನೇಪಾಳದ ಹೊಸ ನಕಾಶೆಯನ್ನು ಬಿಡುಗಡೆ ಮಾಡುವ ಮೂಲಕ ಒಲಿ ಭಾರತ ಮತ್ತು ನೇಪಾಳದ ನಡುವಿನ ಸಂಬಂಧವನ್ನೂ ಹಾಳು ಮಾಡಿದ್ದರು. ಅಲ್ಲದೆ ಚೀನಾವೂ ನೇಪಾಳದ ಭೂಮಿಯನ್ನು ಆಕ್ರಮಿಸಿದ್ದು, ಇಂತಹ ಅನೇಕ ವಿಚಾರಗಳು ನೇಪಾಳದಲ್ಲಿ ಒಲಿ ವಿರುದ್ಧ ಆಕ್ರೋಶವನ್ನು ಹೆಚ್ಚಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.