ಕರಾಚಿ: ಪಾಕಿಸ್ಥಾನಿಯರಿಗೆ ಭಾರತ ಎಷ್ಟರ ಮಟ್ಟಿಗೆ ದುಃಸ್ವಪ್ನವಾಗಿ ಕಾಡುತ್ತಿದೆ ಎಂದರೆ, ಕೂತಲ್ಲಿ ನಿಂತಲ್ಲಿ ಭಾರತದ ಯುದ್ಧವಿಮಾನಗಳು ತಮ್ಮ ತಲೆ ಮೇಲೆ ದುಪ್ಪೆಂದು ಹಾರಿ ಹೋಗುವಂತಹ ಕನಸುಗಳನ್ನು ಅವರು ಕಾಣುತ್ತಿದ್ದಾರೆ. ಬುಧವಾರ ರಾತ್ರಿಯವರೆಗೂ ಪಾಕಿಸ್ಥಾನದ ವಾಣಿಜ್ಯ ನಗರಿ ಎಂದು ಕರೆಸಿಕೊಳ್ಳುವ ಕರಾಚಿಯಲ್ಲಿ ಜನರು ಇಂತಹುದೇ ಕನಸನ್ನು ಕಂಡಿದ್ದಾರೆ. ಹೀಗಾಗಿ ಅಲ್ಲಿ, ʼಭಾರತದ ಯುದ್ಧ ವಿಮಾನಗಳು ಹಾರುತ್ತಿವೆʼ ಎಂಬುದೇ ಟ್ವಿಟರ್ ಟ್ರೆಂಡ್ ಆಗಿತ್ತು.
ಕರಾಚಿಯ ಆಗಸದಲ್ಲಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಹಾರುತ್ತಿವೆ ಎಂದು ಬುಧವಾರ ರಾತ್ರಿಯವರೆಗೂ ಜನರು ಟ್ವಿಟ್ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ. #IndianAirForce, #KarachiBlockOut, #PakisthanAirforce ಇತ್ಯಾದಿ ಹ್ಯಾಶ್ಟ್ಯಾಗ್ಗಳು ಅಲ್ಲಿ ಟ್ರೆಂಡ್ ಸೃಷ್ಟಿ ಮಾಡಿವೆ.
ಭಾರತೀಯ ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ಥಾನದೊಳಗೆ ನುಗ್ಗಿವೆ. ಮತ್ತೊಂದು ಸುತ್ತಿನ ವೈಮಾನಿಕ ದಾಳಿ ಪಾಕಿಸ್ಥಾನದ ಮೇಲೆ ನಡೆಯಲಿದೆ ಎಂಬಿತ್ಯಾದಿ ಊಹಾಪೋಹಗಳು ಅಲ್ಲಿ ಸೃಷ್ಟಿಯಾಗಿವೆ. ಕರಾಚಿಯ ಅಧಿಕಾರಿಗಳು ರಾತ್ರಿ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂಬ ಸುದ್ದಿಯೂ ಹರಡಿದೆ.
ಇನ್ನು ಕೆಲವರು, ಬಾಲಕೋಟ್ ವೈಮಾನಿಕ ದಾಳಿಯ ಬಳಿಕ ಪಾಕಿಸ್ಥಾನದ ವಿಮಾನಗಳು ಗಸ್ತು ತಿರುಗುವುದನ್ನು ಹೆಚ್ಚಿಸಿವೆ, ಯಾವುದೇ ಗಂಭೀರ ಸನ್ನಿವೇಶ ಇಲ್ಲ ಎಂದಿದ್ದಾರೆ. ಕೆಲವರು, ಹಾರಾಡಿದ್ದು ಪಾಕಿಸ್ಥಾನದ ಯುದ್ಧ ವಿಮಾನಗಳು ಎಂದಿದ್ದಾರೆ.
ಒಟ್ಟಿನಲ್ಲಿ ಕರಾಚಿಯಲ್ಲಿ ದೊಡ್ಡ ಮಟ್ಟದ ಭಯ ಮತ್ತು ಆತಂಕ ಜನರನ್ನು ಆವರಿಸಿದೆ. ಆದರೆ ಯುದ್ಧ ವಿಮಾನಗಳ ಹಾರಾಟದ ಬಗ್ಗೆ ಅಲ್ಲಿನ ಸರ್ಕಾರ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಭಾರತದ ಯುದ್ಧ ವಿಮಾನಗಳು ಪಾಕಿಸ್ಥಾನವನ್ನು ಪ್ರವೇಶ ಮಾಡಿಲ್ಲ ಎಂದು ಭಾರತೀಯ ವಾಯುಸೇನೆಯ ಅನಾಮೇಧೇಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗಳಿಗೆ ಸ್ಪಷ್ಟಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
Dear @IndiainPakistan, rumors are rife about Indian Air Force incursions into Pakistan-administered Kashmir and the Sindh-Rajasthan sector. Recommend you put out a statement to clarify. Also recommend that everybody chill and enjoy the week.
— Waj Khan ✊🏾✊🏿 وجاہت خان (@WajSKhan) June 9, 2020
It’s probably after 27th Feb 2019 that I have heard so many PAF jets patrolling the sky. I hope nothing serious is happening or expected to happen.
— Wajahat Kazmi (@KazmiWajahat) June 9, 2020
Breaking News : This video is from Karachi posted by Karachi locals. they claimed it to be #IAF Jet came for Surgical strikes…. No confirmation from India. While localities blacked out. As PA lost 24 soldiers in #LAC in the past 3 days alone to Indian Army’s response. pic.twitter.com/PybTfqdHmn
— News Line IFE 🌈Live📡 (@NewsLineIFE) June 10, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.