ವಿಶ್ವಸಂಸ್ಥೆ: ಹಲವಾರು ರಾಷ್ಟ್ರಗಳಿಗೆ ದೊಡ್ಡ ಸವಾಲುಗಳನ್ನು ಒಡ್ಡುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗವು, ಭಾರತಕ್ಕೆ ಆರೋಗ್ಯ ವಿಮಾ ಯೋಜನೆ ಆಯುಷ್ಮಾನ್ ಭಾರತ್ ಅನ್ನು ತ್ವರಿತಗೊಳಿಸಲು ಒಂದು ಅವಕಾಶವಾಗಬಹುದು ಎಂದು WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಕೊರೋನವೈರಸ್ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಭಾರತದ ಕೋವಿಡ್-19 ಪರಿಸ್ಥಿತಿಯ ಪ್ರಶ್ನೆಗೆ WHO ಮಹಾನಿರ್ದೇಶಕ ಘೆಬ್ರೆಯೆಸಸ್ ಪ್ರತಿಕ್ರಿಯೆ ನೀಡಿದ ವೇಳೆ ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಭಾರತವು ಶುಕ್ರವಾರ ಇಟಲಿಯನ್ನು ದಾಟಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಆರನೇ ಅತಿ ಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿ ಹೊರಹೊಮ್ಮಿದೆ.
ಕಳೆದ 24 ಗಂಟೆಗಳಲ್ಲಿ ಭಾರತವು ಏಕದಿನ ದಾಖಲೆಯ ಏರಿಕೆ 9,887 ಕರೋನವೈರಸ್ ಪ್ರಕರಣಗಳು ಮತ್ತು 294 ಸಾವುಗಳನ್ನು ಕಂಡಿದ್ದು, ಇದರಿಂದ ರಾಷ್ಟ್ರವ್ಯಾಪಿಯಾಗಿ ಒಟ್ಟು ಸೋಂಕು 2,36,657 ಕ್ಕೆ ಏರಿದೆ ಮತ್ತು ಸಾವಿನ ಸಂಖ್ಯೆ 6,642 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
“ಖಂಡಿತವಾಗಿಯೂ ಕೋವಿಡ್ ತುಂಬಾ ದುರಾದೃಷ್ಟಕರ ಮತ್ತು ಇದು ಅನೇಕ ರಾಷ್ಟ್ರಗಳಿಗೆ ಸವಾಲಾಗಿದೆ. ಆದರೆ ಈ ಬಿಕ್ಕಟ್ಟಿನಲ್ಲಿ ನಾವು ಅವಕಾಶಗಳನ್ನು ಸಹ ಹುಡುಕಬೇಕಾಗಿದೆ. ಉದಾಹರಣೆಗೆ, ಭಾರತಕ್ಕೆ ಇದು ಆಯುಷ್ಮಾನ್ ಭಾರತ್ ಯೋಜನೆಯನ್ನು ವೇಗಗೊಳಿಸಲು ವಿಶೇಷವಾಗಿ ಪ್ರಾಥಮಿಕ ಆರೋಗ್ಯ ರಕ್ಷಣೆಯ ಮೇಲೆ ಕೇಂದ್ರೀಕರಿಸಿದಂತೆ ಒಂದು ಅವಕಾಶವಾಗಿರಬಹುದು. ನನಗೆ ತಿಳಿದಿದೆ ಪ್ರಾಥಮಿಕ ಆರೋಗ್ಯ ಮತ್ತು ಸಮುದಾಯದ ಭಾಗಿಯೊಂದಿಗೆ ಆಯುಷ್ಮಾನ್ ಭಾರತದ ಅನುಷ್ಠಾನವನ್ನು ವೇಗಗೊಳಿಸಲು ಸರ್ಕಾರದಿಂದ ದೊಡ್ಡ ಬದ್ಧತೆ ಇದೆ ಎಂದು, ನಿಜವಾಗಿಯೂ ಇದು ದೊಡ್ಡ ಪರಿವರ್ತನೆಯನ್ನು ತರಬಲ್ಲದು”ಎಂದು ಘೆಬ್ರೇಯೆಸಸ್ ಶುಕ್ರವಾರ ಜಿನೀವಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಆಯುಷ್ಮಾನ್ ಭಾರತ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಾಗಿದ್ದು, ಇದನ್ನು 2018 ರಲ್ಲಿ ನರೇಂದ್ರ ಮೋದಿ ಸರ್ಕಾರ ಪ್ರಾರಂಭಿಸಿತು. ಕಳೆದ ತಿಂಗಳು ಮೋದಿ ಈ ಯೋಜನೆಯ ಲಾಭ ಪಡೆದವರ ಸಂಖ್ಯೆ ಒಂದು ಕೋಟಿ ಗಡಿ ದಾಟಿದೆ ಎಂದು ಘೋಷಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.