ಇಂಗ್ಲೆಂಡ್ : ಇಂಗ್ಲೆಂಡ್ನ ಡರ್ಬಿ ನಗರದಲ್ಲಿರುವ ಗುರು ಅರ್ಜುನ್ ದೇವ್ ಗುರುದ್ವಾರವನ್ನು ಪಾಕಿಸ್ಥಾನದ ವ್ಯಕ್ತಿಯೊಬ್ಬ ಧ್ವಂಸಗೊಳಿಸಿರುವ ಘಟನೆ ವರದಿಯಾಗಿದೆ. ಲಂಡನ್ನಿಂದ 200 ಕಿ.ಮೀ. ದೂರದಲ್ಲಿರುವ ಈ ಗುರುದ್ವಾರವನ್ನು ದ್ವೇಷದ ಕಾರಣದಿಂದಾಗಿ ಹಾಳುಗೆಡವಲು ಪ್ರಯತ್ನಿಸಿದ್ದು, ಆರೋಪಿಯನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಗುರುದ್ವಾರದ ಗೋಡೆಯಲ್ಲಿ ‘ ಕಾಶ್ಮೀರದ ಜನರನ್ನು ರಕ್ಷಿಸಿ, ಇಲ್ಲವಾದರೆ ಎಲ್ಲರೂ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಮೊಬೈಲ್ ಸಂಖ್ಯೆ ನಮೂದಿಸಿ ಬರೆದಿರುವುದಾಗಿಯೂ ಭಾರತೀಯ ಮೂಲಗಳು ಈ ಕುರಿತಂತೆ ಮಾಹಿತಿ ನೀಡಿದೆ. ಬಂಧಿತನ ಕುರಿತಂತೆ ತನಿಖೆಗಳು ನಡೆಯುತ್ತಿರುವುದಾಗಿಯೂ ಮಾಹಿತಿ ದೊರೆತಿದೆ.
ಇನ್ನು ಈ ದಾಳಿಯ ವೇಳೆ ಗುರುದ್ವಾರದಲ್ಲಿ ಪ್ರಾರ್ಥನೆಯ ಸಮಯವಾಗಿದ್ದರೂ, ಲಾಕ್ಡೌನ್ ಕಾರಣದಿಂದಾಗಿ ಜನರು ಸೇರುತ್ತಿಲ್ಲ. ಎಲ್ಲಾ ಪ್ರಾರ್ಥನೆಗಳನ್ನು ಆನ್ಲೈನ್ನಲ್ಲಿ ನೇರ ಪ್ರಸಾರದ ಮೂಲಕವೇ ನಡೆಸಲಾಗುತ್ತಿದ್ದು, ಯಾವುದೇ ತೆರನಾದ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಇನ್ನು ಈ ದಾಳಿಯ ಚಿತ್ರಣಗಳು ಗುರುದ್ವಾರದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಈ ಕುರಿತಂತೆ ಗುರುದ್ವಾರಕ್ಕೆ ಸಂಬಂಧಿಸಿದ ಅಧಿಕಾರಿಗಳೂ ಮಾಹಿತಿ ನೀಡಿದ್ದು, ಮುಂಜಾನೆ ಆರು ಗಂಟೆಯ ವೇಳೆಗೆ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದು, ಈ ದಾಳಿಯಿಂದಾಗಿ ಸಾವಿರಾರು ಪೌಂಡ್ಗಳಷ್ಟು ನಷ್ಟ ಉಂಟಾಗಿದೆ. ಆದರೆ ಯಾವೊಬ್ಬ ವ್ಯಕ್ತಿಗೂ ಗಾಯಗಳಾಗಿಲ್ಲ. ಯಾವುದೇ ಜೀವಹಾನಿ ಸಂಭವಿಸಿಲ್ಲ. ಹಾನಿಗೊಳಗಾದ ಪ್ರದೇಶದ ಸ್ವಚ್ಛತೆ ಕಾರ್ಯ ನಡೆಯುತ್ತಿರುವುದಾಗಿಯೂ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.