ಬೆಂಗಳೂರು : ಫೇಸ್ಬುಕ್ನ ಓವರ್ಸೈಟ್ ಬೋರ್ಡ್ನ ಸದಸ್ಯರಾಗಿ ಬೆಂಗಳೂರಿನ ಸುಧೀರ್ ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನ ರಿವ್ಯೂ ಮತ್ತು ಮಾಡರೇಟ್ ಕಂಟೆಂಟ್ಗಳ ನಿರ್ವಹಣಾ ಮಂಡಳಿಗೆ ಸುಧೀರ್ ಅವರನ್ನು ಆಯ್ಕೆ ಮಾಡಿರುವುದಾಗಿ ಫೇಸ್ಬುಕ್ನ ಮಾರ್ಕ್ ಜುಕರ್ಬರ್ಗ್ ಅವರು ತಮ್ಮ ಟ್ವಿಟರ್ನಲ್ಲಿಯೂ ತಿಳಿಸಿದ್ದಾರೆ. ಆ ಮೂಲಕ ಭಾರತೀಯನೊಬ್ಬ ಫೇಸ್ಬುಕ್ನ ಮಹತ್ವದ ಹುದ್ದೆಯೊಂದನ್ನು ಅಲಂಕರಿಸಿದಂತಾಗಿದೆ.
ಫೇಸ್ಬುಕ್ನ ಮತ್ತು ಇನ್ಸ್ಟಾಗ್ರಾಂನಲ್ಲಿ ಬಿತ್ತರವಾಗುವ ಪೋಸ್ಟ್ಗಳ ಮೇಲೆ ನಿಯಂತ್ರಣ ವಹಿಸಲು ಮಾಡಲಾದ ಈ ನಿಯಂತ್ರಣ ಮಂಡಳಿಯ 27 ಮಂದಿ ಸದಸ್ಯರಲ್ಲಿ ಇದೀಗ ಬೆಂಗಳೂರಿನ ಸುಧೀರ್ ಅವರೂ ಒಬ್ಬರಾಗಿದ್ದಾರೆ. ಈ ಓವರ್ಸೈಟ್ ಬೋರ್ಡ್ನ ಸದಸ್ಯರು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂಗಳಲ್ಲಿ ಯಾರೇ ಆಕ್ಷೇಪಾರ್ಹ ಫೋಸ್ಟ್ಗಳನ್ನು ಪ್ರಕಟಿಸದಂತೆ ಎಚ್ಚರಿಕೆ ವಹಿಸುವ ಜೊತೆಗೆ ಅದರ ವಿರುದ್ಧ ಕ್ರಮ ಕೈಗೊಳ್ಳುವ ಎಲ್ಲಾ ಅಧಿಕಾರವನ್ನು ಈ ಸಮಿತಿಗೆ ನೀಡಲಾಗಿದೆ.
ಈ ಮಂಡಳಿಯು ಫೇಸ್ಬುಕ್ನ ಸುಪ್ರೀಂ ಕೋರ್ಟ್ನಂತೆ ಕಾರ್ಯ ನಿರ್ವಹಿಸುತ್ತದೆ. ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುವಂತಹ ಪೋಸ್ಟ್ಗಳನ್ನು ಫೇಸ್ಬುಕ್ನ ಮುಖ್ಯಸ್ಥ ಜುಕರ್ಬರ್ಗ್ ಅವರು ಪ್ರಕಟಿಸಿದರೂ ಅದನ್ನು ಪ್ರಶ್ನಿಸುವ ಹಕ್ಕು ಈ ನಿಯಂತ್ರಣಾ ಮಂಡಳಿಗಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಸುಧೀರ್, ತಾನು ಈ ಗುಂಪಿನಲ್ಲಿರುವ ಓರ್ವ ಭಾರತೀಯ. ಹಾಗೆಂದ ಮಾತ್ರಕ್ಕೆ ನಾನಿಲ್ಲಿ ಕೇವಲ ಭಾರತಕ್ಕೆ ಸಂಬಂಧಿಸಿದಂತೆ ಮಾತ್ರ ಇಲ್ಲಿ ಕಾರ್ಯ ನಿರ್ವಹಿಸುವುದಲ್ಲ. ಬದಲಾಗಿ ಈ ಬೋರ್ಡ್ನ ಸದಸ್ಯರೆಲ್ಲರೂ ಕುಳಿತು ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದಾಗಿಯೂ ಅವರು ಮಾಹಿತಿ ನೀಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಪ್ರಕಟಿಸುವಾಗ ಬಳಕೆದಾರರೂ ಎಚ್ಚರದಲ್ಲಿರಬೇಕು, ಜವಾಬ್ದಾರಿಯುತವಾಗಿ ವರ್ತಿಸುವಂತೆಯೂ ಅವರು ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.