ವಾಷಿಂಗ್ಟನ್: ಕೊರೋನಾವೈರಸ್ ಪೀಡಿತ ಪ್ರತಿಯೊಬ್ಬರ ಆರೋಗ್ಯ, ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸಲು ರಾಷ್ಟ್ರೀಯ ಪ್ರಾರ್ಥನಾ ಸೇವೆಯ ದಿನಾಚರಣೆಯಂದು ಶ್ವೇತಭವನದ ರೋಸ್ ಗಾರ್ಡನ್ನಲ್ಲಿ ಹಿಂದೂ ಅರ್ಚಕರು ಪವಿತ್ರ ವೈದಿಕ ಶಾಂತಿ ಪಾಠ ಅಥವಾ ಶಾಂತಿ ಪ್ರಾರ್ಥನೆಯನ್ನು ಪಠಿಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ, ನ್ಯೂಜೆರ್ಸಿಯ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದ ಪೂಜಾರಿ ಹರೀಶ್ ಬ್ರಹ್ಮಭಟ್ ಅವರು ರಾಷ್ಟ್ರೀಯ ಪ್ರಾರ್ಥನಾ ಸೇವೆಯ ದಿನದಂದು ಪ್ರಾರ್ಥನೆ ಸಲ್ಲಿಸಿದರು. ಇತರ ಧರ್ಮಗಳ ಧಾರ್ಮಿಕ ಮುಖಂಡರುಗಳು ಕೂಡ ಪ್ರಾರ್ಥನೆಯನ್ನು ನಡೆಸಿದರು.
“COVID-19, ಸಾಮಾಜಿಕ ಅಂತರ ಮತ್ತು ಲಾಕ್ಡೌನ್ನ ಈ ಸಂಕಷ್ಟದ ಕಾಲದಲ್ಲಿ, ಜನರು ಆತಂಕಕ್ಕೊಳಗಾಗದಿರುವುದು ಮತ್ತು ಶಾಂತಿಯಿಂದ ಇರುವುದು ಬಹಳ ಮುಖ್ಯ. ಈ ಶಾಂತಿ ಪ್ರಾರ್ಥನೆಯು ಲೌಕಿಕ ಸಂಪತ್ತು, ಯಶಸ್ಸು, ಕೀರ್ತಿ, ಅಥವಾ ಸ್ವರ್ಗದ ಯಾವುದೇ ಆಸೆಗಾಗಿ ಅಲ್ಲ ” ಎಂದು ಬ್ರಹ್ಮಭಟ್ ಅವರು ರೋಸ್ ಗಾರ್ಡನ್ ವೇದಿಕೆಯಲ್ಲಿ ಹೇಳಿದರು.
“ಇದು ಶಾಂತಿಗಾಗಿ ಸುಂದರವಾದ ಹಿಂದೂ ಪ್ರಾರ್ಥನೆ. ಇದು ಯಜುರ್ವೇದದಿಂದ ಪಡೆದ ವೈದಿಕ ಪ್ರಾರ್ಥನೆ” ಎಂದು ಅವರು ಸಂಸ್ಕೃತದಲ್ಲಿ ಪ್ರಾರ್ಥನೆಯನ್ನು ಪಠಿಸುವ ಮೊದಲು ಹೇಳಿದರು. ಅದರ ನಂತರ ಅವರು ಅದನ್ನು ಇಂಗ್ಲಿಷ್ನಲ್ಲಿ ಅನುವಾದಿಸಿದರು.
“ಪ್ರಾರ್ಥನೆಯು ಶಾಂತಿಗಾಗಿ. ಆಕಾಶ ಮತ್ತು ಭೂಮಿಯಲ್ಲಿ ಶಾಂತಿ ಇರಲಿ. ಶಾಂತಿಯು ನೀರಿನ ಮೇಲೆ ಇರಲಿ. ಗಿಡಮೂಲಿಕೆಗಳು ಮತ್ತು ಮರಗಳ ಮೇಲೆ ಶಾಂತಿ ಇರಲಿ. ಎಲ್ಲಾ ಬೆಳೆಗಳೂ ಶಾಂತಿಯುತವಾಗಿರಿಲಿ. ಬ್ರಹ್ಮನಿಗೆ ಮತ್ತು ಎಲ್ಲರಿಗೂ ಶಾಂತಿಯಿರಲಿ. ನಾವು ಆ ಶಾಂತಿಯನ್ನು ಅರಿತುಕೊಂಡಿದ್ದೇವೆ. ಓಂ ಶಾಂತಿ, ಶಾಂತಿ, ಶಾಂತಿ “ಎಂದು ಬ್ರಹ್ಮಭಟ್ ಹೇಳಿದರು.
ಪ್ರಾರ್ಥನಾ ಪಠಣಕ್ಕಾಗಿ ಟ್ರಂಪ್ ಬ್ರಹ್ಮಭಟ್ ಅವರಿಗೆ ಧನ್ಯವಾದ ಅರ್ಪಿಸಿದರು.
ಅಧ್ಯಕ್ಷರು ತಮ್ಮ ಹೇಳಿಕೆಯಲ್ಲಿ, ರಾಷ್ಟ್ರೀಯ ಪ್ರಾರ್ಥನೆ ಸೇವೆಯ ದಿನದಂದು, ಅಮೆರಿಕವು ಅತ್ಯಂತ ಭಯಾನಕ ಕಾಯಿಲೆಯ ವಿರುದ್ಧ ತೀವ್ರ ಯುದ್ಧದಲ್ಲಿ ತೊಡಗಿದೆ ಎಂದರು. ನಮ್ಮ ಇತಿಹಾಸದುದ್ದಕ್ಕೂ ಸವಾಲಿನ ಕಾಲದಲ್ಲಿ ನಮ್ಮ ಜನರು ಯಾವಾಗಲೂ ನಂಬಿಕೆಯ ಉಡುಗೊರೆ ಪಡೆದುಕೊಂಡಿದ್ದಾರೆ, ನಂಬಿಕೆಯ ಆಶೀರ್ವಾದ ಸ್ವೀಕರಿಸಿದ್ದಾರೆ, ಪ್ರಾರ್ಥನೆಯ ಶಕ್ತಿ ಮತ್ತು ದೇವರ ಶಾಶ್ವತ ಮಹಿಮೆಯನ್ನು ಕಂಡುಕೊಂಡಿದ್ದಾರೆ. ನಾನು ಎಲ್ಲಾ ಅಮೆರಿಕನ್ನರನ್ನು ತಮ್ಮ ಧ್ವನಿಗಳಲ್ಲಿ ಮತ್ತು ಹೃದಯದಲ್ಲಿ ಆಧ್ಯಾತ್ಮಿಕ ಒಕ್ಕೂಟವನ್ನು ಸೇರುವಂತೆ ಕೇಳಿಕೊಳ್ಳುತ್ತೇನೆ. ನಾವು ಸ್ವರ್ಗದಲ್ಲಿರುವ ನಮ್ಮ ಒಡೆಯನನ್ನು ಶಕ್ತಿ ಮತ್ತು ಸಾಂತ್ವನಕ್ಕಾಗಿ, ಧೈರ್ಯ ಮತ್ತು ಸೌಕರ್ಯಕ್ಕಾಗಿ, ಭರವಸೆ ಮತ್ತು ಗುಣಪಡಿಸುವಿಕೆಗಾಗಿ, ಚೇತರಿಕೆ ಮತ್ತು ನವೀಕರಣಕ್ಕಾಗಿ ಕೇಳಿಕೊಳ್ಳುತ್ತೇವೆ “ಎಂದು ಹೇಳಿದ್ದಾರೆ.
ನ್ಯೂಜೆರ್ಸಿಯ ರಾಬಿನ್ಸ್ವಿಲ್ಲೆಯಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನದ ಅರ್ಚಕರು ಶ್ವೇತಭವನದಲ್ಲಿ ಪ್ರಾರ್ಥನೆ ಸಲ್ಲಿಸುವುದು ಇದೇ ಮೊದಲು. ರಾಬಿನ್ಸ್ವಿಲ್ಲೆಯಲ್ಲಿರುವ ಬಿಎಪಿಎಸ್ ದೇವಾಲಯವು ಭಾರತದ ಹೊರಗಿನ ಅತಿ ದೊಡ್ಡ ಸ್ವಾಮಿನಾರಾಯಣ ದೇವಾಲಯಗಳಲ್ಲಿ ಒಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.