ನವದೆಹಲಿ: ಕೊರೋನ ಕಂಡುಹಿಡಿಯುವಲ್ಲಿ ಸಹಾಯ ಮಾಡುವ ಆರೋಗ್ಯ ಸೇತು ಆ್ಯಪ್ನಿಂದ ಜನರ ವೈಯಕ್ತಿಕ ಮಾಹಿತಿಗಳಿಗೆ ಯಾವುದೇ ಅಪಾಯವಿಲ್ಲ. ಇದರಲ್ಲಿ ಭದ್ರತಾ ಲೋಪವೂ ಇಲ್ಲ. ಇದು ಸುರಕ್ಷಿತ ಆ್ಯಪ್ ಎಂದು ಕೇಂದ್ರ ಸರ್ಕಾರ ಭಾರತೀಯರಿಗೆ ಭರವಸೆ ನೀಡಿದೆ.
ಫ್ರಾನ್ಸ್ ಮೂಲದ ವೈಟ್ ಹ್ಯಾಕ್ ಎಂಬ ಹ್ಯಾಕರ್ ಸಂಸ್ಥೆಯೊಂದು ಆರೋಗ್ಯ ಸೇತು ಆ್ಯಪ್ ಬಳಕೆಯಿಂದ ಜನರ ವೈಯಕ್ತಿಕ ಮಾಹಿತಿಗಳು ಅಪಾಯದಲ್ಲಿವೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರ ಇದರಲ್ಲಿ ಯಾವುದೋ ಭದ್ರತಾ ಲೋಪಗಳಿಲ್ಲ. ಜನರ ವೈಯಕ್ತಿಕ ಮಾಹಿತಿಯನ್ನು ಗುಪ್ತವಾಗಿಡುವಲ್ಲಿ ಇದು ಮುನ್ನೆಚ್ಚರಿಕೆ ವಹಿಸುತ್ತದೆ ಎಂಬುದಾಗಿ ತಿಳಿಸಿದೆ. ಅಲ್ಲದೆ ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿ ಇದರಿಂದ ಸೋರಿಕೆಯಾಗುತ್ತಿಲ್ಲ ಎಂಬುದನ್ನು ಸರ್ಕಾರ ಖಾತ್ರಿ ಪಡಿಸಿದೆ.
ಆರೋಗ್ಯ ಸೇತು ಆ್ಯಪ್ ಅಪಾಯಕಾರಿ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಉಲ್ಲೇಖಿಸಿ, ಇಲಿಯಟ್ ಆಂಡರ್ಸು ಎಂಬ ಹ್ಯಾಕರ್ ಒಬ್ಬ ಆರೋಗ್ಯ ಸೇತು ಆ್ಯಪ್ ಮಾಹಿತಿ ಸೋರಿಕೆ ಮಾಡುತ್ತದೆ ಎಂಬುದಾಗಿ ಟ್ವೀಟ್ ಮಾಡಿದ್ದ. ಇದಕ್ಕೆ ಪೂರಕವೆಂಬಂತೆ ಭಾರತದ ರಾಷ್ಟ್ರೀಯ ಮಾಹಿತಿ ಕೇಂದ್ರ ಮತ್ತು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡವೂ ತನ್ನನ್ನು ಸಂಪರ್ಕ ಮಾಡಿರುವುದಾಗಿ ಈತ ತಿಳಿಸಿದ್ದ. ಅಲ್ಲದೆ ಈ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ನೀಡದಿದ್ದಲ್ಲಿ ಈ ಬಗೆಗಿನ ಮಾಹಿತಿ ಬಹಿರಂಗ ಮಾಡುವುದಾಗಿಯೂ ತಿಳಿಸಿದ್ದ.
ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಕೇಂದ್ರ ಸರ್ಕಾರ ಈ ಆ್ಯಪ್ ಜನರ ವೈಯಕ್ತಿಕ ಮಾಹಿತಿಗಳನ್ನು ಗುಪ್ತವಾಗಿಡುತ್ತದೆ. ಮಾಹಿತಿ ಸೋರಿಕೆಯಾಗುವ ಸಾಧ್ಯತೆಯೇ ಇಲ್ಲ. ಈ ಬಗ್ಗೆ ಭಾರತದ ಜನರು ಭರವಸೆ ಇಡಬಹುದು ಎಂದೂ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.