ಬೆಂಗಳೂರು: ವಲಸೆ ಕಾರ್ಮಿಕರ ಪ್ರಯಾಣಕ್ಕಾಗಿ ಮಾಡಲಾಗಿರುವ ಉಚಿತ ಬಸ್ ಪ್ರಯಾಣವನ್ನು ಮತ್ತೆರಡು ದಿನಗಳವರೆಗೆ ವಿಸ್ತರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ನೀಡಿದ್ದಾರೆ.
ಎಲ್ಲಾ ವಲಸೆ ಕಾರ್ಮಿಕರಿಗೂ ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ. ಮೇ 5 ರಿಂದ ಮೇ 7 ರ ವರೆಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಆದ್ದರಿಂದ ಪ್ರಯಾಣಿಕರು ನಿಲ್ದಾಣಗಳಲ್ಲಿ ಜಮಾಯಿಸದೆ ಆರಾಮವಾಗಿ ತಮ್ಮ ಮನೆಗಳಿಗೆ ತೆರಳುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
ಮೇ 3 ರಂದು ಸರ್ಕಾರಿ ಸಾರಿಗೆ KSRTC ಯ 951 ಬಸ್ಗಳನ್ನು ಸೇವೆಗಾಗಿ ನೀಡಲಾಗಿದ್ದು, ಈಗಾಗಲೇ 30 ಸಾವಿರದಷ್ಟು ಜನರು ತಮ್ಮ ತಮ್ಮ ಮನೆಗಳಿಗೆ ಕ್ಷೇಮವಾಗಿ ಸೇರಿದ್ದಾರೆ. ಇಂದು 50 ಬಸ್ಗಳಲ್ಲಿ 1500 ಮಂದಿ ಊರು ಸೇರಲಿದ್ದಾರೆ ಎಂಬ ಮಾಹಿತಿಯನ್ನು ಬಿಎಸ್ವೈ ನೀಡಿದ್ದಾರೆ. ಉಚಿತ ಊಟ ಮತ್ತು ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಲ್ಲದೆ ಬೆಂಗಳೂರಿಗೆ ಸಂಬಂಧಿಸಿದಂತೆ 500 ಬಸ್ಗಳು ಮತ್ತು ರಾಜ್ಯದ ಇನ್ನಿತರ ಪ್ರದೇಶಗಳಿಂದ ಸುಮಾರು 400 ಬಸ್ಗಳು ಎಲ್ಲಾ ನಿಯಂತ್ರಣ ಕ್ರಮಗಳನ್ನು ಅನುಸರಿಸಿಕೊಂಡು ಪ್ರಯಾಣಿಕರನ್ನು ಸ್ವಸ್ಥಾನಕ್ಕೆ ಮರಳಿ ಸೇರಿಸುತ್ತಿರುವುದಾಗಿಯೂ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.
ಉಚಿತ ಬಸ್ ವ್ಯವಸ್ಥೆಯನ್ನು ಹೆಚ್ಚುವರಿ ಎರಡು ದಿನಗಳ ಕಾಲ ಓಡಾಟಕ್ಕೆ ಅನುಮತಿ ನೀಡಿರುವುದು ಪ್ರಯಾಣಿಕರಲ್ಲಿಯೂ ನಿರಾಳತೆ ತಂದಿದೆ ಎನ್ನಬಹುದು.
ಉಚಿತ ಪ್ರಯಾಣ: ಎರಡು ದಿನ ವಿಸ್ತರಣೆ
ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಭಾನುವಾರದಿಂದ ಸರ್ಕಾರ ಆರಂಭಿಸಿದ್ದ ಉಚಿತ @KSRTC_Journeys ಬಸ್ ಸೌಲಭ್ಯವನ್ನು ಗುರುವಾರದವರೆಗೆ ವಿಸ್ತರಿಸಲಾಗಿದೆ.#Lockdown3 #CoronaUpdatesInIndia pic.twitter.com/d2DUj2CnOY
— CM of Karnataka (@CMofKarnataka) May 4, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.