ಬೆಂಗಳೂರು: ಕೊರೋನಾ ಸೋಂಕಿನ ಆತಂಕದ ನಡುವೆ ರಾಜ್ಯದಲ್ಲಿ ಕಳೆದ ನಾಲ್ಕು ದಿನದಲ್ಲಿ ನಾಲ್ವರು ರೋಗಿಗಳು ತೀವ್ರ ಉಸಿರಾಟದ ತೊಂದರೆಯಿಂದ ರಾಜ್ಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು ವರದಿಯಾಗಿದೆ. ಆದಾದರಿಂದ ಎಲ್ಲಾ ರೋಗಿಗಳಿಗೂ ಆಮ್ಲಜನಕ ಶುದ್ಧೀಕರಣ ಕ್ರಮವನ್ನು ಅನುಸರಿಸುವ ಮೂಲಕ ಮೊದಲ ಹಂತದ ಕೊರೋನಾ ಟೆಸ್ಟ್ ನಡೆಸುವಂತೆ ರಾಜ್ಯದ 651 ಜ್ವರ ತಪಾಸಣಾ ಚಿಕಿತ್ಸಾಲಯಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಓಂ ಪ್ರಕಾಶ್ ಅವರು ಸೂಚಿಸಿದ್ದಾರೆ.
ರಾಜ್ಯದ ಎಲ್ಲಾ ಜ್ವರ ತಪಾಸಣಾ ಕೇಂದ್ರಗಳಲ್ಲಿಯೂ ಆಕ್ಸಿಮೀಟರ್ ಬಳಸಿ ಆಮ್ಲಜನಕ ಶುದ್ಧತೆಯ ಕುರಿತಂತೆ ತಪಾಸಣೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. ಈ ವಿಧಾನದಿಂದ ಕೊರೋನಾ ಸೇರಿದಂತೆ ಸಾರಿ ಮತ್ತು ಇನ್ನಿತರ ಸೋಂಕುಗಳಿಂದ ರೋಗಿಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಶುಕ್ರವಾರ ಸುಮಾರು 40 ರೋಗಿಗಳಲ್ಲಿ 22 ಜನರಿಗೆ ಸೋಂಕು ದೃಢಪಟ್ಟಿದ್ದು, ಅವರಲ್ಲಿ12 ಮಂದಿ ಮೃತಪಟ್ಟಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಇನ್ನು ರಾಜ್ಯದ 651 ಜ್ವರ ತಪಾಸಣಾ ಆಸ್ಪತ್ರೆಗಳು ಇನ್ಫ್ರಾರೆಡ್ ಥರ್ಮಲ್ ಸ್ಕ್ಯಾನರ್ ಬಳಸಿ ತಪಾಸಣೆ ಮಾಡುತ್ತಿದ್ದು, ಇದರಿಂದ ಕೇವಲ ವ್ಯಕ್ತಿಯ ಜ್ವರದ ತೀವ್ರತೆ ಹಾಗೂ ಟೆಂಪರೇಚರ್ ಮಾತ್ರವೇ ತಿಳಿಯುತ್ತದೆ. ಇದರಿಂದಾಗಿ ಕೊರೋನಾ ಸೋಂಕು ತಗುಲಿದೆಯೇ ಎಂದು ತಿಳಿದುಕೊಳ್ಳುವುದು ಅಸಾಧ್ಯವಾಗಿದ್ದು, ಖಡ್ಡಾಯವಾಗಿ ಆಕ್ಸಿಮೀಟರ್ ಬಳಸುವ ಮೂಲಕ ತಪಾಸಣೆ ಮಾಡಲು ಸೂಚಿಸಿದ್ದಾರೆ. ಇದು ತೀವ್ರ ಉಸಿರಾಟದಂತಹ ಸಾರಿ ಪ್ರಕರಣಗಳು ಮತ್ತು ಬೆರಳ ತುದಿಯ ನಾಡಿ ಮಿಡಿತ ಕಂಡುಹಿಡಿಯುವಲ್ಲಿ ಸಹಾಯ ಮಾಡುವ ಬಹುಮುಖ್ಯ ಸಾಧನಗಳಾಗಿದೆ. ಆದ್ದರಿಂದ ಆಕ್ಸಿಮೀಟರ್ ಮೂಲಕ ತಪಾಸಣೆ ನಡೆಸಿ ಮುಂದಿನ ದಿನಗಳಲ್ಲಿ ರೋಗಿಯ ಮೇಲಾಗುವ ಸಂಭಾವ್ಯ ಕೋವಿಡ್ ಅಪಾಯವನ್ನು ತಪ್ಪಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.