ಹಾವೇರಿ: ದೇಶ ಕೋವಿಡ್-19 ಎಫೆಕ್ಟ್ನಿಂದಾಗಿ ತೊಂದರೆಗೀಡಾಗಿದೆ. ಸಮಾಜದ ಆರೋಗ್ಯದ ಜೊತೆಗೆ ದೇಶದ ಆರ್ಥಿಕತೆಯ ಮೇಲೆಯೂ ಕೊರೋನಾ ದೊಡ್ಡ ಮಟ್ಟಿಗೆ ಹೊಡೆತ ನೀಡಿದೆ. ಇಂತಹ ಸಂಕಷ್ಟದ ಸ್ಥಿತಿಯಿಂದ ಹೊರ ಬರಲು ದೇಶಕ್ಕೆ ಆರ್ಥಿಕ ಸಹಕಾರದ ಅವಶ್ಯಕತೆ ತೀರಾ ಇದ್ದು, ಹಲವಾರು ಜನರು, ಸಂಘ ಸಂಸ್ಥೆಗಳು ದೇಣಿಗೆ ನೀಡುವ ಮೂಲಕ ಸರ್ಕಾರಗಳ ಜೊತೆಗೆ ಕೈ ಜೋಡಿಸುತ್ತಿದ್ದಾರೆ.
ಇನ್ನು ಕರ್ನಾಟಕದಲ್ಲಿಯೂ ಕೋವಿಡ್ ನಿಯಂತ್ರಣಕ್ಕೆ ಮುಖ್ಯಮಂತ್ರಿಗಳ ಸಹಾಯನಿಧಿಗೆ ಹಲವರು ದೇಣಿಗೆ ನೀಡುತ್ತಿದ್ದಾರೆ. ಸದ್ಯ ಮುಖ್ಯಮಂತ್ರಿಗಳ ಸಹಾಯ ನಿಧಿಗೆ ಹಾವೇರಿಯ ಅವನಿ, ಸನ್ನಿಧಿ ಮತ್ತು ದೀಪ್ತಿ ಎಂಬ ಮೂವರು ಪುಟಾಣಿಗಳು ತಾವು ಕೂಡಿಟ್ಟ 25 ಸಾವಿರ ರೂ. ಹುಂಡಿ ಹಣವನ್ನು ನೀಡಿದ್ದಾರೆ. ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರಿಗೆ ಡಿಡಿ ಮೂಲಕ ಹಣ ಹಸ್ತಾಂತರಿಸಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ಪಾಲಕರು ನೀಡಿದ್ದ ಹಣವನ್ನು ಕೂಡಿಟ್ಟು ಇದೀಗ ಕೊರೋನಾ ವಿರುದ್ಧ ಹೋರಾಟಕ್ಕೆ ನೀಡಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದ ಚಿಣ್ಣರ ನಡೆ ಪ್ರಶಂಸನೀಯ ಎಂದು ತಿಳಿಸಿದ್ದಾರೆ.
2/2
ಜೊತೆಗೆ ಜನರಲ್ಲಿ ವ್ಯಕ್ತಿಗತ ಅಂತರದ ಜಾಗೃತಿ ಮೂಡಿಸುವ ಮೂಲಕ ನಿಜವಾದ ಸಾಮಾಜಿಕ ಜವಾಬ್ದಾರಿ ಮೆರೆದ ಈ ಚಿಣ್ಣರ ನಡೆ ಪ್ರಶಂಸಾರ್ಹವಾದದ್ದು.
ಈ ಚಿಣ್ಣರ ಭವಿಷ್ಯ ಉಜ್ವಲವಾಗಲಿ— B.S. Yediyurappa (@BSYBJP) April 28, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.