ಮಡಿಕೇರಿ : ಕೊರೋನಾ ಸಾಂಕ್ರಮಿಕ ಸೋಂಕಿನ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ದಾನಿಗಳ ಸಹಯೋಗದೊಂದಿಗೆ ಸೇವಾ ಭಾರತಿ ಮೂಲಕ ಆರ್ಥಿಕ ಸಹಾಯವನ್ನು ವಿತರಿಸಲಾಯಿತು.
ಕೊರೋನಾ ಸಾಂಕ್ರಮಿಕ ಸೋಂಕಿನ ಹಿನ್ನೆಲೆಯಲ್ಲಿ ಆಟೋ ಚಾಲನೆಯ ವೃತ್ತಿಯನ್ನು ಮಾಡುತ್ತಿದ್ದ ಚಾಲಕರು ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟವನ್ನು ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ದಾನಿಗಳಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರಾದ ಮನೋಹರ್ ಜಿ. ಪಾಟ್ಕರ್, ಆರ್ಥಿಕ ಲೆಕ್ಕಪತ್ರ ಪರಿಶೋಧಕ ಅನಂತಸುಬ್ಬರಾವ್ ಹಾಗೂ ಹೆಸರು ಹೇಳಲಿಚ್ಛಿಸದ ಇನ್ನಿಬ್ಬರು ದಾನಿಗಳ ಸಹಯೋಗದೊಂದಿಗೆ ಮಡಿಕೇರಿ ನಗರದ ಸುಮಾರು 40 ಆಟೋ ಚಾಲಕರಿಗೆ ತಲಾ ರೂ 1000 ದಂತೆ ನಗದು ಹಣವನ್ನು ವಿತರಿಸಲಾಯಿತು. ನಗರದ ಶ್ರೀವಳ್ಳಿ ಕ್ಲಿನಿಕ್ನಲ್ಲಿ ಅತಿಥಿಗಳಾಗಿ ಭಾಗವಹಿಸಿದ ಶಕ್ತಿ ದಿನಪತ್ರಿಕೆ ಸಂಪಾದಕ ಜಿ ಚಿದ್ವಿಲಾಸ್ ಅವರು ಆಟೋ ಚಾಲಕರಿಗೆ ನಗದು ಆರ್ಥಿಕ ಸಹಾಯವನ್ನು ವಿತರಿಸಿದರು.
ಈ ಸಂದರ್ಭ ದಾನಿಗಳಾದ ಡಾ.ಮನೋಹರ್ ಜಿ ಪಾಟ್ಕರ್, ಡಾ.ಜಯಲಕ್ಷ್ಮಿ ಜಿ ಪಾಟ್ಕರ್, ಲೆಕ್ಕಪತ್ರ ಪರಿಶೋಧಕ ಅನಂತಸುಬ್ಬರಾವ್, ಸೇವಾ ಭಾರತಿ ಉಪಾಧ್ಯಕ್ಷ ಕೆ.ಕೆ ಮಹೇಶ್ ಕುಮಾರ್, ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಡಿ.ಎಚ್ ಮೇದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.