ಬಿಬಿಎಂಪಿ ವ್ಯಾಪ್ತಿಗೆ ಬರುವ ಅರವತ್ತು ರುದ್ರಭೂಮಿ ಹಾಗೂ ಹತ್ತು ವಿದ್ಯುತ್ ಚಿತಾಗಾರಗಳ 148 ನೌಕರರು ತಮ್ಮ ಒಂದು ತಿಂಗಳ ಪೂರ್ತಿ ಸಂಬಳವನ್ನು ಮುಖ್ಯಮಂತ್ರಿಗಳ ಕೊರೊನಾ ಸಂತ್ರಸ್ತರ ಸಹಾಯ ನಿಧಿಗೆ ನೀಡಿದ್ದಾರೆ .
ತಲಾ 14 ರಿಂದ 17 ಸಾವಿರದಷ್ಟು ತಿಂಗಳ ವೇತನವನ್ನು ಪಡೆಯುತ್ತಿದ್ದ ಇವರು ತಮ್ಮ ಪೂರ್ತಿ ವೇತನವನ್ನು ಪಾಲಿಕೆಯ ಆಯುಕ್ತರ ಮೂಲಕ ಸರ್ಕಾರಕ್ಕೆ ತಲುಪಿಸಿದ್ದಾರೆ .
ವರ್ಷದ ಹಿಂದೆ ಈ ನೌಕರರ ತಿಂಗಳ ಸಂಬಳ ಐದಾರು ಸಾವಿರದಷ್ಟು ಇತ್ತು . ಕೇಂದ್ರ ಸರ್ಕಾರದ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾಗಿರುವ ಜಗದೀಶ ಹಿರೇಮನಿ ಈ ನೌಕರರ ಸಭೆ ನೆಡಸಿ , ರಾಜ್ಯ ಸರಕಾರ , ಮಹಾನಗರ ಪಾಲಿಕೆ ಅಧಿಕಾರಿಗಳ ಜತೆ ಮಾತುಕತೆ , ಒತ್ತಡ ತಂದು ಕನಿಷ್ಠ ವೇತನ ಸಿಗಲು ಕಾರಣರಾಗಿದ್ದರು .
ತಿಂಗಳ ಸಂಬಳ ನೀಡಿದ ಸುದ್ದಿ ತಿಳಿದ ಜಗದೀಶ ಹಿರೇಮನಿ ಹಾಗು ವಿಧಾನ ಪರಿಷತ್ ಸದಸ್ಯರಾದ ಎನ್ ರವಿಕುಮಾರ್ ಅನ್ಯಾನ್ಯ ಸ್ಮಶಾನಗಳಿಗೆ ತೆರಳಿ ನೌಕರರು , ಕುಟುಂಬಸ್ಥರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು ಮತ್ತು ದಿನಸಿ ಸಾಮನುಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿದರು .
ರುದ್ರಭೂಮಿ , ವಿದ್ಯುತ್ ಚಿತಾಗಾರ ನೌಕರರ ಘಟಕದ ಕಾರ್ಯದರ್ಶಿ ಹಾಗು ಬೆಂಗಳೂರಿನ ಕಾಕ್ಸ್ ಟೌನ್ ಸಮೀಪದ ಕಲ್ಪಳ್ಳಿ ರುದ್ರಭೂಮಿಯಲ್ಲಿ ಗುಂಡಿ ತೆಗೆಯುವ ಕಾಯಕ ನೆಡೆಸುವ ಸೌರಿರಾಜು ‘ ನಾವು ನೋಡದೇ ಇರುವ ಸಾವು ಯಾವುದಿದೆ ‘ ಎಂದರು . ಕೆಲ ದಿನಗಳ ಹಿಂದೆಯಷ್ಟೆ ಕೊರಾನಾ ವೈರಸ್ ನಿಂದ ಸಾವು ಕಂಡ ಹಿಂದೂಪುರ ಮೂಲದ ವ್ಯಕಿಯ ಅಂತ್ಯಕ್ರಿಯೆಯನ್ನು ಎಲ್ಲಾ ಮುನ್ನೆಚ್ಚರಿಕೆಯೊಂದಿಗೆ ಇದೇ ಕಲ್ಪಳ್ಲಿ ಮಸಣದಲ್ಲಿ ಸೌರಿರಾಜು ನೇರವೇರಿಸಿದ್ದರು .
ತಿಂಗಳ ವೇತನ ನೀಡಲು ತಮ್ಮವರನ್ನು ಪ್ರೇರೇಪಿಸಿದ ನೌಕರರ ಸಂಘದ ಅಂತೋಣಿ ಡಿ , ಸೌರಿರಾಜು , ರವಿ ಎನ್ , ವೆಂಕಟೇಶ ಎನ್ ರವರಿಗೆ ವಂದನೆಗಳು.
ಲೇಖನ ಕೃಪೆ: ವಾದಿರಾಜ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.