ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಗುರುವಾರ ಬೆಂಗಳೂರಿನಲ್ಲಿ ಕೋವಿಡ್-19 ಟೆಸ್ಟಿಂಗ್ ಮೊಬೈಲ್ ಬೂತ್ಗೆ ಚಾಲನೆಯನ್ನು ನೀಡಿದ್ದಾರೆ. ಈ ವೇಳೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಉಪಸ್ಥಿತರಿದ್ದರು.
“ಯಡಿಯೂರಪ್ಪ ಅವರು ಕೋವಿಡ್-19 ಟೆಸ್ಟಿಂಗ್ ಮೊಬೈಲ್ ಬೂತ್ ಅನ್ನು ಗೃಹ ಕಚೇರಿಯಲ್ಲಿ ಉದ್ಘಾಟಿಸಿದರು. ಇಂದಿನಿಂದ ಬೆಂಗಳೂರಿನ ಎಲ್ಲಾ ವಾರ್ಡ್ಗಳಲ್ಲಿ ಕೊರೋನಾವೈರಸ್ ಪರೀಕ್ಷೆಯನ್ನು ಈ ಮೊಬೈಲ್ ಟೆಸ್ಟಿಂಗ್ ಬೂತ್ ನಡೆಸಲಿದೆ” ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ಆರ್ ಜಿಎಚ್ ಯುಎಸ್ ನ ತಾಂತ್ರಿಕ ಸಹಕಾರದೊಂದಿಗೆ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿ ಸಿಬ್ಬಂದಿ ಈ ಸಂಚಾರಿ ಕಿಯೋಸ್ಕ್ ಅನ್ನು ತಯಾರಿಸಿದ್ದಾರೆ. ಅಗತ್ಯವಿರುವ ಕಡೆ ಕಿಯೋಸ್ಕ್ ಅನ್ನು ತೆಗೆದುಕೊಂಡು ಹೋಗಿ ಗಂಟಲ ದ್ರವ ಸಂಗ್ರಹಿಸಬಹುದು.
ಸುಲಲಿತ ಚಲನೆಗಾಗಿ ಈ ಬೂತ್ ಅನ್ನು ಆಟೋರಿಕ್ಷಾದಲ್ಲಿ ನಡೆಸಲಾಗುತ್ತಿದೆ. ಬೆಂಗಳೂರಿನ ಎಲ್ಲಾ ವಾರ್ಡ್ಗಳಿಗೂ ಚಲಿಸಿ ಇದು ಕೊರೋನಾ ಶಂಕಿತರ ಪರೀಕ್ಷೆಗಳನ್ನು ನಡೆಸಲಿದೆ. ಆರ್ಜಿಎಚ್ ಯುಎಸ್ನ ತಾಂತ್ರಿಕ ಸಹಕಾರದೊಂದಿಗೆ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿ ಸಿಬ್ಬಂದಿ ಈ ಸಂಚಾರಿ ಕಿಯೋಸ್ಕ್ ಅನ್ನು ತಯಾರಿಸಿದ್ದಾರೆ. ಅಗತ್ಯವಿರುವ ಕಡೆ ಈ ಕಿಯೋಸ್ಕ್ ಅನ್ನು ತೆಗೆದುಕೊಂಡು ಹೋಗಿ ಗಂಟಲ ದ್ರವ ಸಂಗ್ರಹಿಸಬಹುದು.
ಇದುವರೆಗೆ ಕರ್ನಾಟಕ ರಾಜ್ಯವು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಬಹುಆಯಾಮದ ಹೋರಾಟ ನಡೆಸುತ್ತಿದೆ, ಈ ಮೂಲಕ ದೇಶದ ಅತ್ಯಂತ ಕ್ರಿಯಾಶೀಲ ರಾಜ್ಯಗಳಲ್ಲಿ ಒಂದು ಎನಿಸಿಕೊಂಡಿದೆ. ರಾಜ್ಯದಲ್ಲಿ ಬೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
ಇಂಟೆನ್ಸಿವ್ ಕೇರ್ ಯೂನಿಟ್ (ಐಸಿಯು) ಗಳಲ್ಲಿರುವ ರೋಗಿಗಳ ಚೇತರಿಕೆಯನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ಬುಧವಾರ ರಾಜ್ಯದಲ್ಲಿ ಹೊಸ ಕ್ರಿಟಿಕಲ್ ಕೇರ್ ಸಪೋರ್ಟ್ ಯೂನಿಟ್ ಅನ್ನೋ ಆರಂಭಿಸಲಾಗಿದೆ. ಇಂತಹ ವ್ಯವಸ್ಥೆಯನ್ನು ಆರಂಭಿಸಿದ್ದು ದೇಶದಲ್ಲೇ ಮೊದಲು. ಇದು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಐಸಿಯು ಗಳಲ್ಲಿರುವ ಕೊರೋನಾ ರೋಗಿಗಳನ್ನು ಒಂದೇ ವೇದಿಕೆಯಡಿ ಲಿಂಕ್ ಮಾಡುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.