ಮಂಗಳೂರು: ಕೊರೋನಾವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯದ ಜನತೆಗೆ ನೆರವಾಗುವ ಸಲುವಾಗಿ ಬಿಜೆಪಿಯು ಇಂದು ‘ಬಿಜೆಪಿ ಕರ್ನಾಟಕ ಕೋವಿಡ್-19’ ಸಹಾಯವಾಣಿಯನ್ನು ಆರಂಭಿಸಿದೆ.
080-68324040 ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಜನರು ಈ ಸಹಾಯವಾಣಿಯ ನೆರವನ್ನು ಪಡೆಯಬಹುದು.
ಮಂಗಳೂರಿನಲ್ಲಿರುವ ದ.ಕ. ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಸಹಾಯವಾಣಿ ಆರಂಭಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, “ಜನರು ಯಾವಾಗ ಈ ಸಹಾಯವಾಣಿಗೆ ಕರೆ ಮಾಡುತ್ತಾರೋ ಅದು ಆ ಜಿಲ್ಲೆ, ತಾಲೂಕು ಮತ್ತು ನಂತರ ವಾರ್ಡ್ ಮಟ್ಟಕ್ಕೆ ತಲುಪಿ ಜನರಿಗೆ ಅಗತ್ಯವಾದ ನೆರವು ಸಿಗುವಂತೆ ಆಗುತ್ತದೆ” ಎಂದಿದ್ದಾರೆ.
ಪಕ್ಷವು ಆಹಾರ, ಆಹಾರ ಪೊಟ್ಟಣ, ಔಷಧಿ, ಆಂಬುಲೆನ್ಸ್ ಮತ್ತು ವೈದ್ಯರು ಸೇರಿದಂತೆ ಜನರಿಗೆ ಸಹಾಯ ಮಾಡಬಹುದಾದ 12 ವಿಷಯಗಳನ್ನು ನಾವು ಗುರುತಿಸಿದ್ದೇವೆ ಎಂದು ಹೇಳಿದ್ದಾರೆ.
ಸಾಮಾನ್ಯ ಸಹಾಯವಾಣಿ ಸಂಖ್ಯೆಯನ್ನು ಹೊರತುಪಡಿಸಿ, ಜನರು ವಾಟ್ಸಪ್ ನಂಬರ್ 8722557733 ಮತ್ತು ಬಿಜೆಪಿ ಕರ್ನಾಟಕ ಫೇಸ್ಬುಕ್ ಖಾತೆ ‘ BJP Karnataka SMIT Cell’ ಗೆ #BJPKarCOVIDHelp’ ಹ್ಯಾಶ್ಟ್ಯಾಗ್ ಮೂಲಕ ಸಂಪರ್ಕಿಸಬಹುದಾಗಿದೆ.
“ಸೇವೆಗಳು ಬಿಜೆಪಿಯ 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಲಭ್ಯವಿದೆ. ಈ ಹಿಂದೆ ಪ್ರತಿ ಜಿಲ್ಲೆಗಳು ಪ್ರತ್ಯೇಕ ಸಹಾಯವಾಣಿ ಸಂಖ್ಯೆಗಳನ್ನು ಹೊಂದಿದ್ದವು. ಈಗ ಅದನ್ನು ಏಕೀಕೃತಗೊಳಿಸಲಾಗಿದೆ” ಎಂದು ಕಟೀಲ್ ಹೇಳಿದ್ದಾರೆ.
ಮನವಿಗಳ ಮೇಲೆ ತೆಗೆದುಕೊಳ್ಳಲಾದ ಕಾರ್ಯಗಳ ಬಗ್ಗೆ ಪಕ್ಷವು ನಿತ್ಯ ರಾತ್ರಿ 9:00 ಗಂಟೆಗೆ ಪರಿಶೀಲನೆಗಳನ್ನು ನಡೆಸಲಿದೆ ಎಂದಿದ್ದಾರೆ.
ಬಿಜೆಪಿಯು ಮನೆಗಳಲ್ಲಿ ಮಾಸ್ಕ್ ಧರಿಸುವ ಬಗ್ಗೆ ಅಭಿಯಾನವನ್ನು ನಡೆಸುತ್ತಿದೆ. ಒಂದು ಬಾರಿ ಮಾಸ್ಕ್ಗಳು ಸಿದ್ಧವಾದರೆ ಅವುಗಳನ್ನು ವಿತರಣೆ ಮಾಡಲಾಗುವುದು ಎಂದಿದ್ದಾರೆ.
ಪಿಎಂ ಕೇರ್ಸ್ ನಿಧಿಗೆ ಬೂತ್ ಮಟ್ಟದ ತಲಾ ನೂರು ಜನರು BHIM app ಬಳಸಿ ತಲಾ ನೂರು ರೂಪಾಯಿಗಳನ್ನು ಕೊಡುಗೆ ನೀಡುವಂತೆ ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ನಿರ್ದೇಶನವನ್ನು ನೀಡಲಾಗಿದೆ. ಪಕ್ಷದ ಕಾರ್ಯಕರ್ತರಿಂದ ಯಾವುದೇ ನಗದನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.