News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಾಟಲ್­ಗಳಲ್ಲಿ ಮೂತ್ರ ತುಂಬಿ, ಎಸೆದು ತಬ್ಲಿಘಿಗಳ ವಿಕೃತಿ : ಎಫ್­ಐಆರ್ ದಾಖಲು

ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲೇ ದೆಹಲಿಯ ನಿಜಾಮುದ್ದೀನ್ ತಬ್ಲಿಘಿಗಳು ತಮ್ಮ ವಿಕೃತಿ ಮೆರೆದಿದ್ದಾರೆ. ಸೋಂಕು ಹರಡಬೇಕು ಎಂಬ ಕಾರಣಕ್ಕೆ ಬಾಟಲಿಗಳಲ್ಲಿ ಮೂತ್ರ ತುಂಬಿ, ಅದನ್ನು ತಾವು ಕ್ವಾರಂಟೈನ್­ನಲ್ಲಿರುವ ಪ್ಲ್ಯಾಟ್­ಗಳಿಂದ ಕೆಳಕ್ಕೆಸೆದು ತಮ್ಮ ವಿಕೃತಿ ಮೆರೆದಿದ್ದಾರೆ. ಈ ಬಗ್ಗೆ ಎಫ್ ಐ ಆರ್ ದಾಖಲಿಸಿರುವ ಪೊಲೀಸರು ತಬ್ಲಿಘಿಗಳನ್ನು ಬಂಧಿಸಿದ್ದಾರೆ.

ದೆಹಲಿಯ ದ್ವಾರಕಾದ ಸಮೀಪದ ಫ್ಲ್ಯಾಟ್­ನಲ್ಲಿ ಘಟನೆ ನಡೆದಿದೆ. ತಬ್ಲಿಘಿಗಳು ಮೂತ್ರ ತುಂಬಿದ ಬಾಟಲಿಗಳನ್ನು ಕೆಳಗಿನ ನೀರಿನ ತೊಟ್ಟಿಯ ಸಮೀಪ ಎಸೆದಿದ್ದಾರೆ. ಈ ಕೃತ್ಯ ವಿಡಿಯೋದಲ್ಲಿಯೂ ದಾಖಲೆಯಾಗಿದೆ. ಇವರ ಮೇಲೆ ನಿಗಾ ವಹಿಸಿದ್ದ ಸಹಾಯಕ ನಿರ್ದೇಶಕರು ಈ ಬಗ್ಗೆ ದೂರು ದಾಖಲಿಸಿದ್ದು, ಸೋಂಕು ಹರಡುವುದಕ್ಕೆಂದೇ ಇವರುಗಳು ಈ ಕೃತ್ಯ ಎಸಗಿದ್ದಾಗಿಯೂ ತಿಳಿಸಿದ್ದಾರೆ.

ಸುಮಾರು 6 ಗಂಟೆಯ ಸುಮಾರಿಗೆ ಈ ಕೃತ್ಯ ನಡೆಸಿದ್ದು, ಸೋಂಕಿತರು ಸುಮಾರು 2 ಬಾಟಲ್ ಮೂತ್ರವನ್ನು ಎಸೆದಿದ್ದಾಗಿಯೂ ಎಫ್ ಐ ಆರ್ ನಲ್ಲಿ ತಿಳಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top