ಬೆಂಗಳೂರು: ಮಹಾರಾಷ್ಟ್ರಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದ ಕರ್ನಾಟಕದ ಸುಮಾರು 2442 ಕಾರ್ಮಿಕರನ್ನು ಭಾನುವಾರ ಕರ್ನಾಟಕ ಸರಕಾರವು 62 ಬಸ್ಸುಗಳ ಮೂಲಕ ವಾಪಸ್ ಕರೆತಂದಿದೆ.
ದೇಶವ್ಯಾಪಿ ಕೊರೋನವೈರಸ್ ಕಾರಣದಿಂದಾಗಿ ಲಾಕ್ ಡೌನ್ ಅನ್ನು ಘೋಷಣೆ ಮಾಡಲಾಗಿದೆ. ಇದರ ಪರಿಣಾಮವಾಗಿ ವಲಸೆ ಕಾರ್ಮಿಕರು ತೀವ್ರ ಸ್ವರೂಪದಲ್ಲಿ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಸಂಕಷ್ಟವನ್ನು ನೋಡಲಾಗದೆ ಅವರನ್ನು ಬಸ್ಸುಗಳ ಮೂಲಕ ವಾಪಸ್ ಕರೆತರುವ ಕಾರ್ಯವನ್ನು ಕರ್ನಾಟಕ ಸರ್ಕಾರ ಮಾಡಿದೆ.
ಮಹಾರಾಷ್ಟ್ರದಲ್ಲಿರುವ ಕೂಲಿಕಾರ್ಮಿಕರು ಇದ್ದಲ್ಲಿಯೇ ಇದ್ದುಬಿಡಿ, ತಮ್ಮ ಊರಿಗೆ ಹೋಗುವುದು ಬೇಡ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ಶನಿವಾರ ವಲಸೆ ಕಾರ್ಮಿಕರಲ್ಲಿ ಕೇಳಿಕೊಂಡಿದ್ದರು. ಸರ್ಕಾರ ಅವರನ್ನು ನೋಡಿಕೊಳ್ಳಲಿದೆ ಎಂಬುದಾಗಿಯೂ ಭರವಸೆ ನೀಡಿದ್ದರು.
ಆದರೆ ತಮ್ಮ ಜೀವನೋಪಾಯ ಸಂಕಷ್ಟಕ್ಕೆ ಸಿಲುಕಿದ ಕಾರಣ ವಲಸೆ ಕಾರ್ಮಿಕರಿಗೆ ತಮ್ಮ ತವರಿಗೆ ಮರಳುವುದು ಅನಿವಾರ್ಯ ಅನ್ನಿಸಿಕೊಂಡಿದೆ. ಹೀಗಾಗಿ ಕೆಲವರು ಕಾಲ್ನಡಿಗೆಯ ಮೂಲಕ ತಮ್ಮ ತವರು ಸೇರುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.