ಬೆಂಗಳೂರು: ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೈ ಜೋಡಿಸುವಂತೆ ಮತ್ತು ಆಧುನಿಕ ವೈದ್ಯಕೀಯ ಬೆಂಬಲವನ್ನು ನೀಡಲು ಸಹಾಯ ಮಾಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜ್ಯದ ಜನತೆಗೆ ಮನವಿಯನ್ನು ಮಾಡಿಕೊಂಡಿದ್ದಾರೆ.
ಮಾನವೀಯ ಆಧಾರದ ಮೇಲೆ ಸ್ವಯಂಪ್ರೇರಣೆಯಿಂದ ಕೊಡುಗೆಗಳನ್ನು ನೀಡುವಂತೆ, ಈ ಕೊಡುಗೆಗಳನ್ನು ಆರೋಗ್ಯ ಸೇವೆಯನ್ನು ಒದಗಿಸುವ ಅತ್ಯುತ್ತಮ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಜನರು ಆನ್ಲೈನ್ ಮೂಲಕ ಅಥವಾ ಚೆಕ್ ಮತ್ತು ಡಿಮಾಂಡ್ ಡ್ರಾಫ್ಟ್ ಮೂಲಕ ಹಣಕಾಸಿನ ನೆರವನ್ನು ವರ್ಗಾವಣೆ ಮಾಡಬಹುದು. ಈ ಕೊಡುಗೆಗೆ ಆದಾಯ ತೆರಿಗೆಯಿಂದ ವಿನಾಯಿತಿ ಯನ್ನು ನೀಡಲಾಗುವುದು ಎಂದಿದ್ದಾರೆ.
ಜನರು ರಿಟರ್ನ್ಸ್ ಸಲ್ಲಿಸುವಾಗ ಪಾನ್ ಕಾರ್ಡ್ ಅನ್ನು AAAGC1692P GGGG0000G ಆಗಿ ಬಳಸಬಹುದಾಗಿದೆ.
ಸಹೃದಯಿ ನಾಗರಿಕರಲ್ಲಿ ಮನವಿ#ಕೊರೊನಾ ಸೋಂಕಿನ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ಸಹೃದಯಿ ನಾಗರಿಕರು ‘ಮುಖ್ಯಮಂತ್ರಿಗಳ ಪರಿಹಾರ ನಿಧಿ’ ಗೆ ಉದಾರವಾಗಿ ದೇಣಿಗೆ ನೀಡುವ ಮೂಲಕ ಭಾಗಿಗಳಾಗಲು ವಿನಂತಿಸುತ್ತೇನೆ.#Covid_19 #Covidpendmic #CovidinKarnataka#KarnatakaFightsCorona #IndiaFightsCOVID19 @BSYBJP pic.twitter.com/2rmZChRSK7
— CM of Karnataka (@CMofKarnataka) March 25, 2020
ಖಾತೆ ಸಂಖ್ಯೆ: Chief Minister Relief Fund COVID-19
ಬ್ಯಾಂಕ್ ಹೆಸರು: State Bank of India
Branch: ವಿಧಾನಸೌಧ
ಖಾತೆ ಸಂಖ್ಯೆ: 39234923151
IFSC code: SBIN0040277
MICR NO: 560002519
ಚೆಕ್ ಮತ್ತು ಡಿಡಿ ಮೂಲಕ #235/A, 2nd Floor, CMRF Section, Vidhana Soudha, Bengaluru – 560001 ಕ್ಕೆ ಕಳುಹಿಸಿಕೊಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.