ಬೆಂಗಳೂರು: ಕೊರೋನವೈರಸ್ ವಿರುದ್ಧ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಟೆಲಿಗ್ರಾಂ ಗ್ರೂಪ್ ಅನ್ನು ರಚನೆ ಮಾಡಿದ್ದು, ಇದೀಗ ಬಿಗ್ ಹಿಟ್ ಆಗಿದೆ. ಕೊರೋನಾದ ಬಗ್ಗೆ ಆತಂಕವನ್ನು ನಿವಾರಣೆ ಮಾಡುವಂತಹ ಮತ್ತು ಸೂಕ್ತ ಮಾಹಿತಿಯನ್ನು ರವಾನಿಸುವಂತಹ ಕಾರ್ಯವನ್ನು ಈ ಗ್ರೂಪ್ ಮಾಡುತ್ತಿದೆ.
ಮಾ. 17 ರಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಟ್ವೀಟ್ ಮಾಡಿ ಟೆಲಿಗ್ರಾಂ ಗ್ರೂಪ್ ರಚನೆಯ ಬಗ್ಗೆ ಮಾಹಿತಿಯನ್ನು ನೀಡಿದ್ದರು. ”ಕೊರೊನಾ ಸೋಂಕಿನ ಕುರಿತು ಹೆಚ್ಚಿನ ಮಾಹಿತಿ ಬೇಕಿದೆಯೇ? ಸೋಂಕಿನ ಲಕ್ಷಣದ ಕುರಿತು ಗೊಂದಲ ಅಥವಾ ಅನುಮಾನಗಳಿವೆಯೇ? ಈ ಬಗ್ಗೆ ಯಾರನ್ನು ಕೇಳೋದು, ಯಾರು ಸರಿಯಾದ ಮಾಹಿತಿ ಕೊಡಬಹುದು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ, ಅಧಿಕೃತ ಮಾಹಿತಿಗಾಗಿ
@Karnataka_DIPR
ನ https://t.me/joinchat/Ca7E7kiRtd5MKjcDU5-LUA ಟೆಲಿಗ್ರಾಮ್ ಗ್ರೂಪ್ ಸೇರಿಕೊಳ್ಳಿ” ಎಂದಿದ್ದರು.
ಕೊರೊನಾ ಸೋಂಕಿನ ಕುರಿತು ಹೆಚ್ಚಿನ ಮಾಹಿತಿ ಬೇಕಿದೆಯೇ? ಸೋಂಕಿನ ಲಕ್ಷಣದ ಕುರಿತು ಗೊಂದಲ ಅಥವಾ ಅನುಮಾನಗಳಿವೆಯೇ? ಈ ಬಗ್ಗೆ ಯಾರನ್ನು ಕೇಳೋದು, ಯಾರು ಸರಿಯಾದ ಮಾಹಿತಿ ಕೊಡಬಹುದು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ, ಅಧಿಕೃತ ಮಾಹಿತಿಗಾಗಿ @Karnataka_DIPR ನ https://t.co/qdevMQ8eSy ಟೆಲಿಗ್ರಾಮ್ ಗ್ರೂಪ್ ಸೇರಿಕೊಳ್ಳಿ.@BSYBJP
— CM of Karnataka (@CMofKarnataka) March 17, 2020
ಈಗಾಗಲೇ ಈ ಗ್ರೂಪ್ಗೆ 13,798 ಜನರು ಸೇರ್ಪಡೆಗೊಂಡಿದ್ದಾರೆ. ಮಾರ್ಚ್ 13 ರಂದು ಇದರಲ್ಲಿ ಮೊದಲ ಪೋಸ್ಟ್ ಹಾಕಲಾಗಿತ್ತು.
ಜನರು ಕೇಳುವ ಪ್ರಶ್ನೆಗಳಿಗೆ ಇಲ್ಲಿ ವಿವಿಧ ಇಲಾಖೆಗಳ ಪ್ರತಿನಿಧಿಗಳು ನಿತ್ಯ ಪ್ರತಿಕ್ರಿಯೆಗಳನ್ನು ನೀಡುತ್ತಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.