ನವದೆಹಲಿ: ಉತ್ಪಾದನೆ, ಉತ್ಪಾದಕತೆ ಮತ್ತು ರಫ್ತು ಹೆಚ್ಚಿಸುವ ಉದ್ದೇಶದಿಂದ ಮುಂದಿನ ಐದು ವರ್ಷಗಳಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ 50,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ಸರ್ಕಾರ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದೆ.
ಕೆಳಮನೆಯ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವ ಗಿರಿರಾಜ್ ಸಿಂಗ್, ಮುಂದಿನ ಕೆಲವು ವರ್ಷಗಳಲ್ಲಿ ಉದ್ದೇಶಿತ ಮೂಲಸೌಕರ್ಯಗಳನ್ನು ಸ್ಥಾಪಿಸುವ ಮೂಲಕ ಮೀನುಗಾರಿಕೆ ಋತುವಿನ ನಂತರ ಸಂಭವಿಸುವ ನಷ್ಟವನ್ನು ಪ್ರಸ್ತುತ ಶೇಕಡಾ 20 ರಿಂದ 10 ಕ್ಕೆ ಇಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದಿದ್ದಾರೆ.
ಈ ವಲಯದಲ್ಲಿ 50,000 ಕೋಟಿ ರೂ. ಹೂಡಿಕೆ ಮಾಡುವ ಯೋಜನೆಯಡಿಯಲ್ಲಿ ಸರ್ಕಾರವು ಈಗಾಗಲೇ 191 ಐಸ್ ಪ್ಲಾಂಟ್ಗಳು, 112 ಐಸ್ ಪ್ಲಾಂಟ್-ಕಮ್-ಕೋಲ್ಡ್ ಸ್ಟೋರೇಜ್ಗಳು ಮತ್ತು 206 ರೆಫ್ರಿಜರೇಟೆಡ್ ಇನ್ಸುಲೇಟೆಡ್ ಟ್ರಕ್ಗಳನ್ನು ಇತರ ಮೂಲಸೌಕರ್ಯ ಸೌಲಭ್ಯಗಳ ನಡುವೆ ಮಂಜೂರು ಮಾಡಿದೆ.
ವರದಿಯ ಪ್ರಕಾರ, ಮೀನುಗಾರಿಕೆಯ ಋತು ಮುಗಿದ ಬಳಿಕದ ನಷ್ಟವು ಸುಮಾರು 61,000 ಕೋಟಿ ರೂ ಆಗಿದೆ. ಇದು ಈ ವಲಯದ ಭಾರತದ ವಾರ್ಷಿಕ ರಫ್ತು ಮೌಲ್ಯ 46,489 ಕೋಟಿ ರೂ.ಗಿಂತ ಹೆಚ್ಚಾಗಿದೆ.
2018-19ರ ಅವಧಿಯಲ್ಲಿ ದೇಶದ ಒಟ್ಟು ಮೀನು ಉತ್ಪಾದನೆಯು ಸುಮಾರು 13.42 ದಶಲಕ್ಷ ಮೆಟ್ರಿಕ್ ಟನ್ಗಳಷ್ಟಿತ್ತು. ಇದರಲ್ಲಿ ಸಮುದ್ರ ಮೀನುಗಾರಿಕೆ 3.71 ಮಿಲಿಯನ್ ಮೆಟ್ರಿಕ್ ಟನ್ ಕೊಡುಗೆ ನೀಡಿದೆ. ಆದರೂ, ಋತುವಿನ ನಂತರ ಒಟ್ಟು ಉತ್ಪಾದನೆಯ ಶೇಕಡಾ 20ರಷ್ಟು ನಷ್ಟವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.