ಬಾಗಲಕೋಟೆ: ಈಗ ಬೇಸಿಗೆಕಾಲ ಶುರುವಾಗಿದೆ ಬಿಸಿಲಿನ ತಾಪದಿಂದ ಕಾಪಾಡಿಕೊಳ್ಳುವ ಸಲುವಾಗಿ ನಾವು ನೆರಳು ಹುಡುಕುತ್ತೇವೆ. ಬೇಸಿಗೆಯಲ್ಲಿ ಬಾವಿ, ಕೆರೆ, ಹಳ್ಳ, ನದಿಗಳು ಬತ್ತಿ ಹೋಗುತ್ತವೆ. ಮನುಷ್ಯನಾದವನು ತನ್ನ ಉಪಯೋಗಕ್ಕೆ ಬೇಕಾದಷ್ಟು ನೀರನ್ನು ಎಲ್ಲಿಂದಾದರೂ ತಂದೇ ತರುತ್ತಾನೆ. ಆದರೆ ಪ್ರಾಣಿ ಪಕ್ಷಗಳು ಮಾತ್ರ ನದಿ, ಹಳ್ಳ ಬತ್ತಿ ಹೋದಾಗ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತವೆ.
ಪ್ರಾಣಿ ಪಕ್ಷಿಗಳಿಗೆ ನೀರನ್ನು ಅರಸಿಕೊಂಡು ಈ ಬಿಸಿಲಿನಲ್ಲಿ ಸಾಕಷ್ಟು ದೂರ ಹೋಗಬೇಕಾಗುತ್ತದೆ. ಈ ಕಡು ತಾಪಮಾನದ ಸಂದರ್ಭದಲ್ಲಿ ನೀರು, ಆಹಾರವನ್ನು ಪ್ರಾಣಿ ಪಕ್ಷಿಗಳಿಗೆ ನೀಡುವಂತಹ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಿದರೆ ಒಳಿತು. ಇಂತಹ ಕಾರ್ಯವನ್ನು ಬಾಗಲಕೋಟೆಯ ಮಕ್ಕಳು ಸ್ವಯಂಪ್ರೇರಣೆಯಿಂದ ಮಾಡುತ್ತಿದ್ದಾರೆ.
ಈ ಮಕ್ಕಳ ತಂಡ ದೊಡ್ಡ ದೊಡ್ಡ ಮರಗಳಿಗೆ ಹತ್ತಿ ಅದರ ಕೊಂಬೆಗಳಲ್ಲಿ ಬೌಲ್ನಲ್ಲಿ ನೀರನ್ನು ಇಡುತ್ತಾರೆ, ಮಂಡಕ್ಕಿಯನ್ನೂ ಇಡುತ್ತಾರೆ. ಬಾಯಾರಿದ ಹಕ್ಕಿಗಳು ತಮ್ಮ ದಾಹವನ್ನು ತೀರಿಸಿಕೊಳ್ಳಲಿ ಎಂಬ ಉದ್ದೇಶ ಈ ಮಕ್ಕಳದ್ದು. ತಮ್ಮ ಕಾರ್ಯದ ಮೂಲಕ ಮಕ್ಕಳು ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.
ನಾವು ಮನೆಯ ಟೆರಸ್ ಅಥವಾ ಮಹಡಿಯ ಮೇಲೆ ಪಕ್ಷಿಗಳಿಗೆ ಚಿಕ್ಕ ಪಾತ್ರೆಯಲ್ಲಿ ಆಹಾರ, ನೀರಿನ ವ್ಯವಸ್ಥೆ ಮಾಡೋಣ. ಆ ಪಾತ್ರೆಗಳಿಗೆ ದಿನಕ್ಕೆ ಒಂದು ಸಾರಿ ನೀರು ಆಹಾರ, ನೀರು ಹಾಕಿದರೆ ಸಾಕು. ಈ ತರಹ ಚಿಕ್ಕ ಚಿಕ್ಕ ಕೆಲಸಗಳನ್ನು ಕರ್ತವ್ಯವೆಂದು ಭಾವಿಸಿ ನಿರ್ವಹಿಸೋಣ. ಮನೆಯ ಮುಂದೆ ಬರುವ ಗೋವು, ನಾಯಿ, ಬೆಕ್ಕುಗಳಿಗೆ ಸಾಧ್ಯವಾದರೆ ನೀರು, ಆಹಾರ ಒದಗಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.