ಬೆಂಗಳೂರು: ಕರ್ನಾಟಕ ಸರಕಾರವು ಶಾದಿಭಾಗ್ಯವನ್ನು ಕೊನೆಗೊಳಿಸುವ ಹಾದಿಯಲ್ಲಿದೆ. ಶಾದಿಭಾಗ್ಯವನ್ನು ಈ ಹಿಂದಿನ ಸಿದ್ಧರಾಮಯ್ಯ ನೇತೃತ್ವದ ಸರಕಾರವು ಅನುಷ್ಠಾನಕ್ಕೆ ತಂದಿತ್ತು. ಈ ಯೋಜನೆಯ ಪ್ರಕಾರ ಮುಸ್ಲಿಂ ವಧುವಿಗೆ ಮದುವೆಯ ಸಂದರ್ಭ 50,000 ಹಣವನ್ನು ಮದುವೆಯ ಖರ್ಚುಗಳಿಗೆ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಈ ಯೋಜನೆಯನ್ನು ರದ್ದುಗೊಳಿಸುವ ಚಿಂತನೆ ನಡೆಸುತ್ತಿದೆ.
ಒಂದು ಸಮುದಾಯಕ್ಕೆ ಮಾತ್ರ ಮೀಸಲಾಗಿರುವ ಈ ಯೋಜನೆಗೆ ಬಜೆಟ್ನಲ್ಲಿ ಯಡಿಯೂರಪ್ಪನವರು ಒಂದು ಬಿಡಿಗಾಸನ್ನೂ ನೀಡಿಲ್ಲ, ಈ ಮೂಲಕ ಈ ಯೋಜನೆ ಸ್ಥಗಿತಗೊಳ್ಳುವುದು ಬಹುತೇಕ ಖಚಿತವಾಗಿದೆ.
ಈ ಯೋಜನೆಯಡಿ 6 ವರ್ಷದವರೆಗೆ ಒಟ್ಟು ಒಂದು ಲಕ್ಷ ಜೋಡಿಗಳು ಪ್ರಯೋಜನ ಪಡೆದುಕೊಂಡಿದ್ದರು.
ಕರ್ನಾಟಕದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮಂತ್ ಪಟೀಲ್ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರು ಶಾದಿ ಭಾಗ್ಯವನ್ನು ಮುಂದುವರೆಸುತ್ತಿಲ್ಲ ಎಂದಿದ್ದಾರೆ. “ಮುಂಬರುವ ಹಣಕಾಸು ವರ್ಷಕ್ಕೆ ಹೊಸ ಬಜೆಟ್ ಹಂಚಿಕೆಯಿಲ್ಲದೆ, ನಾವು ಯೋಜನೆಯನ್ನು ಸ್ಕ್ರ್ಯಾಪ್ ಮಾಡುತ್ತೇವೆ” ಎಂದಿದ್ದಾರೆ.
ಅಲ್ಲದೇ ಸದ್ಯ ಬಾಕಿ ಇರುವ 34,000 ಅರ್ಜಿಗಳಿಗೆ ಮುಂದಿನ ತಿಂಗಳಲ್ಲಿ ಹಣ ಬಿಡುಗಡೆಯಾಗಬಹುದು ಎಂದು ರಾಷ್ಟ್ರೀಯ ಸುದ್ದಿವಾಹಿನಿಗೆ ನೀಡಿದ ಹೇಳಿಕೆ ವೇಳೆ ಅವರು ತಿಳಿಸಿದ್ದಾರೆ.
ಈಗಾಗಲೇ ಯಡಿಯೂರಪ್ಪ ಸರ್ಕಾರ ‘ಸಪ್ತಪದಿ’ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಡಿಯಲ್ಲಿ ಎಲ್ಲಾ ಜಾತಿ, ಧರ್ಮದವರಿಗೆ ಸಾಮೂಹಿಕ ವಿವಾಹವನ್ನು ಮಾಡಿಸಲಾಗುತ್ತದೆ. ಹೀಗಾಗಿ ಶಾದಿ ಭಾಗ್ಯ ಯೋಜನೆ ಮಹತ್ವವನ್ನು ಕಳೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.