ಮಂಗಳೂರು: ಕೇರಳದಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿರುವ ಖ್ಯಾತ ಜವಳಿ ಉದ್ಯಮ ‘ಜಯಲಕ್ಷ್ಮಿ’ ಇದೇ ಮೊದಲ ಬಾರಿಗೆ ಕೇರಳದ ಹೊರಗೂ ಶುಭಾರಂಭ ಮಾಡುತ್ತಿದೆ. ಮಂಗಳೂರಿನ ಬಿಜೈನಲ್ಲಿ ಮಾರ್ಚ್ 12 ರಂದು ಜಯಲಕ್ಷ್ಮಿ ಮೆಗಾ ಶೋ ರೂಂ ಕಾರ್ಯಾರಂಭ ಮಾಡಲಿದೆ.
ಈ ಬಗ್ಗೆ ಪ್ರತಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿರುವ ‘ಜಯಲಕ್ಷ್ಮಿ’ ಚೇರ್ಮ್ಯಾನ್ ನಾರಾಯಣ ಕಾಮತ್ ಅವರು, ”ಫ್ಯಾಶನ್ ಮತ್ತು ಸ್ಟೈಲ್ಗೆ ಮನ್ನಣೆ ಕೊಡುವ ಮಂಗಳೂರಿಗರ ಅಭಿರುಚಿಯಂತೆಯೇ ಪ್ರೀಮಿಯಂ ಉಡುಪುಗಳು ಮತ್ತು ನವವಧುವಿನ ಉಡುಗೆ ತೊಡುಗೆಗಳ ಬೃಹತ್ ಸಂಗ್ರಹಗಳ ಮಳಿಗೆ ಜಯಲಕ್ಷ್ಮಿಯಲ್ಲಿ ಇರಲಿದೆ. ಇದು ಜಯಲಕ್ಷ್ಮಿಯ 5ನೇ ಶೋ ರೂಂ ಆಗಲಿದೆ ಮತ್ತು ಕೇರಳದ ಹೊರಗಿನ ಮೊದಲ ಶೋ ರೂಂ ಆಗಲಿದೆ” ಎಂದಿದ್ದಾರೆ.
”ಒಟ್ಟು 1 ಲಕ್ಷ ಚ. ಅಡಿ ವಿಸ್ತೀರ್ಣವನ್ನು ಹೊಂದಿರುವ ಹೊಸ ಮೆಗಾ ಶೋ ರೂಂ ಆಗಿದೆ. 4 ಮಹಡಿಗಳ ಬೃಹತ್ ಶಾಪಿಂಗ್ ಮಾಲ್ನಲ್ಲಿ ಅತ್ಯುತ್ತಮವಾದ ಉಡುಪುಗಳು ಮತ್ತು ವಧುವಿನ ಉಡುಗೆಗಳ ಬೃಹತ್ ಸಂಗ್ರಹವನ್ನು ಹೊಂದಿದೆ. ವಧುವಿನ ಸೀರೆಗಳು, ಡಿಸೈನರ್ ವೇರ್, ಜಂಟ್ಸ್ ಕಲೆಕ್ಷನ್ನಿಂದ ಹಿಡಿದು ಮಕ್ಕಳ ಉಡುಗೆಗಳವರೆಗೆ ಅತ್ಯುತ್ತಮ ಮತ್ತು ನೂತನ ಕಲೆಕ್ಷನ್ ಜಯಲಕ್ಷ್ಮಿ ಫ್ಯಾಷನ್ನಲ್ಲಿ ಲಭ್ಯವಿದೆ” ಎಂದಿದ್ದಾರೆ.
”ಪುಟ್ಟ ಮಕ್ಕಳಿಗಾಗಿ ಮೋಜನ್ನು ನೀಡುವ ಸಲುವಾಗಿ ಮಕ್ಕಳ ಆಟದ ಸ್ಥಳವನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರತಿಯೊಬ್ಬ ಗ್ರಾಹಕರ ಬಗ್ಗೆ ಕಾಳಜಿಯನ್ನು ವಹಿಸಲು 500ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಲಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಈ ಶೋ ರೂಂ ಹೊಂದಿದೆ” ಎಂದು ಮಾಹಿತಿ ನೀಡಿದರು.
”15 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಜಯಲಕ್ಷ್ಮಿ ಬ್ರಾಂಡ್ ಕೇರಳದಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು. ತಿರುವನಂತಪುರಂ, ತ್ರಿಶೂರ್ ಮತ್ತು ಕ್ಯಾಲಿಕಟ್ನಲ್ಲಿ ಭವ್ಯವಾದ ಶೋ ರೂಂ ಅನ್ನು ಹೊಂದಿದೆ. ಜವಳಿ ಕ್ಷೇತ್ರದಲ್ಲಿ 7 ದಶಕಗಳ ಪರಿಣತಿಯನ್ನು ಹೊಂದಿರುವ ಜಯಲಕ್ಷ್ಮಿ ಪ್ರತಿದಿನ ಶಾಪಿಂಗ್ ಮಾಡುವವರಿಗೆ ವಿಶ್ವಾಸಾರ್ಹ, ಗುಣಮಟ್ಟದ ಉಡುಪುಗಳನ್ನು ಒದಗಿಸುತ್ತದೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಯಲಕ್ಷ್ಮಿಯ ಜಂಟಿ ಆಡಳಿತ ನಿರ್ದೇಶಕ ಸತೀಶ್ ಕಾಮತ್, ಕಾರ್ಯನಿರ್ವಾಹಕ ನಿರ್ದೇಶಕ ಸುಜೀತ್ ಕಾಮತ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.