ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಭಾಷಾ ಅಭಿವೃದ್ಧಿಗೆ ಸಂಬಂಧಿಸಿದ ಮನವಿಗಳ ಕಿರುಹೊತ್ತಿಗೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯವನ್ನು ದಾಖಲಿಸಿಕೊಂಡಿದೆ.
2018ರಲ್ಲಿ ಆರ್ಎಸ್ಎಸ್ ನಡೆಸಿದ ಅಖಿಲ ಭಾರತೀಯ ಪ್ರತಿನಿಧಿ ಸಭೆಯು ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಅಥವಾ ಭಾರತೀಯ ಭಾಷೆಯಲ್ಲೇ ಬೋಧಿಸಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿತು. ಕನ್ನಡ ಸೇರಿದಂತೆ ಅನೇಕ ಪ್ರಾದೇಶಿಕ ಭಾಷೆಗಳ ಪರವಾದ ನಿರ್ಣಯವಾಗಿತ್ತು.
ಯಾವುದೇ ವ್ಯಕ್ತಿ ಮತ್ತು ಸಮಾಜದ ಸಂಸ್ಕೃತಿಯ ಗುರುತಿಸುವಿಕೆಗಾಘಿ ಮತ್ತು ಸಕ್ರಿಯ ವಾಹಕವಾಗಿ ಭಾಷೆ ಒಂದು ಪ್ರಮುಖ ಅಂಶವಾಗಿದೆ ಎಂದು ಅಖಿಲ ಭಾರತೀಯ ಪ್ರತಿನಿಧಿ ಸಭೆ ಅಭಿಪ್ರಾಯಪಟ್ಟಿತ್ತು. ನಮ್ಮ ಸಂಸ್ಕೃತಿ, ಉದಾತ್ತ ಸಂಪ್ರದಾಯಗಳು, ಅತ್ಯುತ್ತಮ ಜ್ಞಾನ ಮತ್ತು ವಿಶಾಲವಾದ ಸಾಹಿತ್ಯವನ್ನು ರಕ್ಷಿಸಲು ಹಾಗೂ ಅದು ಆರಿಸಿಕೊಂಡ ಸೃಜನಶೀಲ ಚಿಂತನೆಯನ್ನು ಉತ್ತೇಜಿಸಲು ದೇಶದಲ್ಲಿ ಪ್ರಚಲಿತದಲ್ಲಿರುವ ಭಾಷೆಗಳು ಮತ್ತು ಉಪಭಾಷೆಗಳು ಅತ್ಯಂತ ಅವಶ್ಯಕವಾಗಿವೆ. ಮಾತೃಭಾಷೆಯನ್ನು ಕುಟುಂಬದೊಳಗಿನ ಸಂವಹನಕ್ಕಾಗಿ ಬಳಸಬೇಕೆಂದು ಅದು ತನ್ನ ಸ್ವಯಂಸೇವಕರಿಗೆ ಮತ್ತು ಸಮಾಜಕ್ಕೆ ಸ್ಪಷ್ಟವಾಗಿ ಕರೆ ನೀಡಿತ್ತು. ಇದಲ್ಲದೆ, ದೇಶಾದ್ಯಂತ ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣವು ಮಾತೃಭಾಷೆಯಲ್ಲಿ ಅಥವಾ ಇನ್ನಾವುದೇ ಭಾರತೀಯ ಭಾಷೆಯಲ್ಲಿ ಮಾತ್ರ ಇರಬೇಕು ಎಂದು ಅದು ಪ್ರತಿಪಾದಿಸಿತ್ತು.
ಅಖಿಲ ಭಾರತೀಯ ಪ್ರತಿನಿಧಿ ಸಭೆ ನಿರ್ಣಯವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರುವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಕಿರುಹೊತ್ತಿಗೆಯಲ್ಲಿ ದಾಖಲಿಸಿದೆ.
ಚಿಂತಕ ಗುರುರಾಜ ಕರಜಗಿ, ರಾ.ನಂ ಚಂದ್ರಶೇಖರ್, ಮಾಳವಿಕಾ ಅವಿನಾಶ್, ಪ್ರಕಾಶ್ ಬೆಳವಾಡಿ, ನಿರಂಜನ ಆರಾಧ್ಯ, ಸಿದ್ಧಯ್ಯ ಅವರನ್ನೊಳಗೊಂಡ ನಿಯೋಗವು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಕಾಶ್ ಜಾವ್ಡೇಕರ್, ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಮನವಿಯ ಕಿರುಹೊತ್ತಿಗೆಯನ್ನು ಸಲ್ಲಿಸಿದೆ.
ಕನ್ನಡದ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ಅಂಶಗಳನ್ನು ಈ ಕಿರುಹೊತ್ತಿಗೆ ಹೊಂದಿದೆ. ಪ್ರಸ್ತುತ ಟಿ.ಎನ್.ನಾಗಾಭರಣ ಅವರ ನೇತೃತ್ವದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರುವು ಕನ್ನಡದ ಅಭಿವೃದ್ಧಿಗೆ ಶ್ರಮಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.